- Thursday 12 Dec 2019
28 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.62ರಷ್ಟು ಮತದಾನ
Team Udayavani, Apr 25, 2019, 3:46 AM IST
ಬೆಂಗಳೂರು: ದೇಶದ 17ನೇ ಲೋಕಸಭೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆ ಮಂಗಳವಾರ ಮುಗಿದಿದ್ದು, ರಾಜಾÂದ್ಯಂತ ಶೇ.68.62ರಷ್ಟು ಮತದಾನ ಆಗಿದೆ.
ಕಳೆದ ಲೋಕಸಭೆ ಚುನಾವಣೆಗೆ ಹೊಲಿಕೆ ಮಾಡಿದರೆ ಒಟ್ಟಾರೆ ಮತ ಪ್ರಮಾಣದಲ್ಲಿ ಶೇ.1.42ರಷ್ಟು ಏರಿಕೆ ಕಂಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.67.20ರಷ್ಟು ಮತದಾನ ದಾಖಲಾಗಿತ್ತು.
2019ರ ಲೋಕಸಭೆಗೆ ರಾಜ್ಯದಲ್ಲಿ 2 ಹಂತದಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಏ.18ರಂದು ಮತದಾನ ನಡೆದಿತ್ತು. ಈ 14 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 68.80ರಷ್ಟು ಮತದಾನ ಆಗಿತ್ತು. ಅದೇ ರೀತಿ, ಎರಡನೇ ಹಂತದಲ್ಲಿ ಏ.23ಕ್ಕೆ 14 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಶೇ.68.43ರಷ್ಟು ಮತದಾನ ಆಗಿದೆ.
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು 5.10 ಕೋಟಿ ಮತದಾರರ ಪೈಕಿ 1.79 ಕೋಟಿ ಪುರುಷರು, 1.70 ಕೋಟಿ ಮಹಿಳೆಯರು, ಇತರರು 556 ಸೇರಿ ಒಟ್ಟು 3.50 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚುನಾವಣೆ ನಡೆದ 28 ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಅತಿ ಹೆಚ್ಚು ಶೇ.80.23 ರಷ್ಟು ಮತದಾನ ಆಗಿದ್ದರೆ, ಅತಿ ಕಡಿಮೆ ಶೇ.53.47ರಷ್ಟು ಮತದಾನ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆಗಿದೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ ಶೇ.77.90, ತುಮಕೂರು ಶೇ.77.21, ಹಾಸನ ಮತ್ತು ಕೋಲಾರ ತಲಾ ಶೇ.77.11, ಶಿವಮೊಗ್ಗ ಶೇ.76.43 ಈ ಬಾರಿ ಅತಿ ಹೆಚ್ಚು ಮತದಾನ ಆಗಿರುವ ಮೊದಲ 5 ಕ್ಷೇತ್ರಗಳಾಗಿವೆ.
ಇದಲ್ಲದೇ ಬೆಂಗಳೂರು ದಕ್ಷಿಣದಲ್ಲಿ ಶೇ.53.47, ಬೆಂಗಳೂರು ಕೇಂದ್ರ ಶೇ.54.29, ಬೆಂಗಳೂರು ಉತ್ತರ ಶೇ.54.66, ರಾಯಚೂರು ಶೇ.57.91, ಕಲಬುರಗಿ ಶೇ.60.88 ಕಡಿಮೆ ಮತದಾನ ಆಗಿರುವ ಮೊದಲ ಐದು ಕ್ಷೇತ್ರಗಳಾಗಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ.77.15ರಷ್ಟು ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.55.64ರಷ್ಟು ಮತದಾನ ಆಗಿತ್ತು.
ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ 2014ರ ಲೋಕಸಭಾ ಚುನಾವಣೆಗಿಂತ ಹೆಚ್ಚು ಮತದಾನ ಆಗಿದ್ದರೆ, ಬೆಳಗಾವಿ, ರಾಯಚೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ಮತದಾನ ಆಗಿದೆ.
28 ಕ್ಷೇತ್ರಗಳ ಮತ ಪ್ರಮಾಣ
ಕ್ಷೇತ್ರ ಶೇಕಡವಾರು ಮತ 2014ರ ಮತ ಪ್ರಮಾಣ
ಚಿಕ್ಕೋಡಿ- ಶೇ.75.52 ಶೇ.74.29
ಬೆಳಗಾವಿ- ಶೇ.67.31 ಶೇ.68.25
ಬಾಗಲಕೋಟೆ- ಶೇ.70.59 ಶೇ.68.81
ವಿಜಯಪುರ- ಶೇ.61.70 ಶೇ.59.58
ಕಲಬುರಗಿ- ಶೇ.60.88 ಶೇ.57.96
ರಾಯಚೂರು- ಶೇ.57.91 ಶೇ.58.32
ಬೀದರ- ಶೇ.62.69 ಶೇ.60.16
ಕೊಪ್ಪಳ- ಶೇ.68.41 ಶೇ.65.63
ಬಳ್ಳಾರಿ- ಶೇ.69.59 ಶೇ.70.29
ಹಾವೇರಿ- ಶೇ.73.99 ಶೇ.71.62
ಧಾರವಾಡ- ಶೇ.70.13 ಶೇ.65.99
ಉತ್ತರ ಕನ್ನಡ- ಶೇ.74.10 ಶೇ.69.04
ದಾವಣಗೆರೆ- ಶೇ.73.03 ಶೇ.73.23
ಶಿವಮೊಗ್ಗ- ಶೇ.76.43 ಶೇ.72.36
ಉಡುಪಿ-ಚಿಕ್ಕಮಗಳೂರು- ಶೇ.75.91 ಶೇ.74.56
ಹಾಸನ- ಶೇ.77.11 ಶೇ.73.49
ದಕ್ಷಿಣ ಕನ್ನಡ- ಶೇ.77.90 ಶೇ.77.15
ಚಿತ್ರದುಗ9- ಶೇ.70.65 ಶೇ.66.07
ತುಮಕೂರು- ಶೇ.77.21 ಶೇ.72.57
ಮಂಡ್ಯ- ಶೇ.80.23 ಶೇ.71.47
ಮೈಸೂರು- ಶೇ.6930 ಶೇ.67.30
ಚಾಮರಾಜನಗರ- ಶೇ.75.22 ಶೇ.72.85
ಬೆಂಗಳೂರು ಗ್ರಾಮಾಂತರ ಶೇ.64.89 ಶೇ.66.45
ಬೆಂಗಳೂರು ಉತ್ತರ- ಶೇ.54.66 ಶೇ.56.53
ಬೆಂಗಳೂರು ಕೇಂದ್ರ- ಶೇ.54.29 ಶೇ.55.64
ಬೆಂಗಳೂರು ದಕ್ಷಿಣ- ಶೇ.53.47 ಶೇ.55.75
ಚಿಕ್ಕಬಳ್ಳಾಪುರ- ಶೇ.76.61 ಶೇ.76.21
ಕೋಲಾರ- ಶೇ.77.11 ಶೇ.75.51
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದು ಮುಖ್ಯಮಂತ್ರಿ...
-
ಬೆಂಗಳೂರು: ಈ ವರ್ಷಾಂತ್ಯದೊಳಗೆ ಎಐಸಿಸಿ ಪುನಾರಚನೆಯಾಗಲಿದ್ದು, ಆ ವೇಳೆಯಲ್ಲಿಯೇ ರಾಜ್ಯದಲ್ಲಿಯೂ ಕೆಪಿಸಿಸಿ ಪುನಾರಚನೆ ಮಾಡಲು ಸಿದ್ಧತೆ ನಡೆದಿದೆ. ರಾಷ್ಟ್ರಮಟ್ಟದಲ್ಲಿ...
-
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕೋ, ಬೇಡವೋ ಎಂಬ ಕುರಿತು ಸರಕಾರಕ್ಕೆ ಇನ್ನೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ....
-
ಬೆಂಗಳೂರು: ಪಾರದರ್ಶಕತೆ ಹಾಗೂ ಯೋಜನೆಗಳಿಗೆ ವೇಗ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ- ಆಡಳಿತ ಜಾರಿಗೊಳಿಸಲು ಮುಂದಾಗಿದ್ದು, ಬರುವ ತಿಂಗಳಿನಿಂದಲೇ...
-
ಬೆಂಗಳೂರು: "ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಎಚ್.ಡಿ. ಕುಮಾರಸ್ವಾಮಿಯವರು ನಾಯಕತ್ವ ವಹಿಸಿಕೊಳ್ಳಬೇಕು, ಇಲ್ಲವೇ ಪೂರ್ಣ ಪ್ರಮಾಣದಲ್ಲಿ ಪಕ್ಷ ಸಂಘಟನೆಯಲ್ಲಿ...
ಹೊಸ ಸೇರ್ಪಡೆ
-
ಬೀದರ: ನಗರದ ವಿವಿಧೆಡೆ ಬುಧವಾರ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ್ ದಿಢೀರ್ ಭೇಟಿ ನೀಡಿ, ಆಯಾ ಇಲಾಖೆಗಳ ಕಾರ್ಯವೈಖರಿ ಪರಿಶೀಲನೆ ನಡೆಸಿದರು. ಚಿದ್ರಿಯ...
-
ಕಲಬುರಗಿ: ಫೆಬ್ರವರಿ 5 ರಿಂದ ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ 85 ನೇಯ ಸಮ್ಮೇಳನಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮ್ಮೇಳನ ಯಶಸ್ವಿಯಾಗಿ ನೆರವೇರುವ ನಿಟ್ಟಿನಲ್ಲಿ...
-
ಶಿರೂರ: ಜಿಲ್ಲಾಡಳಿತ ಆಶ್ರಯದಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆಶ್ರಯಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ವಿಶೇಷ...
-
ಮುಧೋಳ: ನಗರದಲ್ಲಿ ಬಹುದಿನಗಳಿಂದ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಭಾಗ್ಯ ದೊರೆಯದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ...
-
ಮಂಗಳೂರು: ದಕ್ಷಿಣ ಕನ್ನಡ ವಿಧಾನಸಭಾ ವ್ಯಾಪ್ತಿಯ ವಿವಿಧ ಇಲಾಖೆಗಳ ಕಾಮಗಾರಿಯ ಕುರಿತು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ...