ಭಾರತದ ಮೀಸಲು ಸಾಮರ್ಥ್ಯಕ್ಕೊಂದು ವೇದಿಕೆ : ದ್ರಾವಿಡ್‌ ಮಾರ್ಗದರ್ಶನ, ಧವನ್‌ ಸಾರಥ್ಯ


Team Udayavani, Jul 18, 2021, 7:00 AM IST

ಭಾರತದ ಮೀಸಲು ಸಾಮರ್ಥ್ಯಕ್ಕೊಂದು ವೇದಿಕೆ : ದ್ರಾವಿಡ್‌ ಮಾರ್ಗದರ್ಶನ, ಧವನ್‌ ಸಾರಥ್ಯ

ಕೊಲಂಬೊ: ಏಕಕಾಲದಲ್ಲಿ ಎರಡು ದೇಶಗಳಲ್ಲಿ ಕ್ರಿಕೆಟ್‌ ಸರಣಿ ಏರ್ಪಡಿಸುವ ಬಿಸಿಸಿಐ ಯೋಜನೆ ರವಿವಾರ ಕೊಲಂಬೊದ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ಸಾಕಾರಗೊಳ್ಳಲಿದೆ. ಇಲ್ಲಿ ಶಿಖರ್‌ ಧವನ್‌ ನಾಯಕತ್ವದ ಟೀಮ್‌ ಇಂಡಿಯಾ-2 ಮೊದಲ ಏಕದಿನ ಪಂದ್ಯವಾಡಲಿದೆ. ಇನ್ನೊಂದೆಡೆ ವಿರಾಟ್‌ ಕೊಹ್ಲಿ ನೇತೃತ್ವದ ಮಾಮೂಲು ಪಡೆ ಇಂಗ್ಲೆಂಡ್‌ ಪ್ರವಾಸದಲ್ಲಿ ನಿರತವಾಗಿದೆ.

ವರ್ಷಾಂತ್ಯದ ಟಿ20 ವಿಶ್ವಕಪ್‌ಗಾಗಿ ಸೂಕ್ತ ಕಾಂಬಿ ನೇಶನ್‌ ಒಂದರ ಹುಡುಕಾಟದಲ್ಲಿರುವ ಭಾರತಕ್ಕೆ ಈ ಲಂಕಾ ಪ್ರವಾಸ ಹೆಚ್ಚು ಅನುಕೂಲವಾಗಲಿದೆ. ಇಲ್ಲಿನ ಬಹಳಷ್ಟು ಮಂದಿ ಯುವ ಆಟಗಾರರು ಐಪಿಎಲ್‌ನಲ್ಲಿ ಯಶಸ್ಸು ಸಾಧಿಸಿದವರೇ ಆಗಿದ್ದಾರೆ.

ಕೆಲವರಂತೂ ಎಂದಿನಿಂದಲೇ ಭಾರತ ತಂಡದ ಬಾಗಿಲು ಬಡಿಯುತ್ತ ಇದ್ದಾರೆ. ಈ ರೀತಿಯ ಎರಡು ತಂಡಗಳ ಪ್ರಯೋಗದಿಂದ ಇವರಿಗೆಲ್ಲ ಭರ್ಜರಿ ಲಾಭ ವಾಗಿರುವುದು ಸುಳ್ಳಲ್ಲ. ಜತೆಗೆ ಭಾರತದ ಮೀಸಲು ಸಾಮರ್ಥ್ಯಕ್ಕೂ ಇದೊಂದು ವೇದಿಕೆ ಆಗಲಿದೆ.

ದ್ರಾವಿಡ್‌-ಧವನ್‌ ಕಾಂಬಿನೇಶನ್‌
ಸಶಕ್ತ ಯುವ ಪಡೆಯೊಂದನ್ನು ಕಟ್ಟಿ ಭಾರತೀಯ ಕ್ರಿಕೆಟ್‌ ಭವಿಷ್ಯವನ್ನು ಗಟ್ಟಿಗೊಳಿಸಿದ “ಗೋಡೆ’ ಖ್ಯಾತಿಯ ರಾಹುಲ್‌ ದ್ರಾವಿಡ್‌ ಈ ತಂಡದ ಕೋಚ್‌ ಆಗಿರುವುದು ಆಟಗಾರರ ಅದೃಷ್ಟವೇ ಆಗಿದೆ. ಅಂಡರ್‌-19, ಭಾರತ ಎ ತಂಡವನ್ನು ಬಲಿಷ್ಠ ಗೊಳಿಸಿದ ದ್ರಾವಿಡ್‌ ಪಾಲಿಗೆ ಇದು ಸೀನಿಯರ್‌ ತಂಡದ ಮೊದಲ ಕೋಚಿಂಗ್‌ ಅನುಭವ. ಅವರ ಗರಡಿಯಲ್ಲಿ ಬೆಳೆದವರೇ ಇಲ್ಲಿದ್ದಾರೆ. ಇನ್ನೊಂದೆಡೆ ಧವನ್‌ ಮೊದಲ ಸಲ ನಾಯಕರಾಗಿ ಟೀಮ್‌ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಭಾರತ ಮ್ಯಾಜಿಕ್‌ ಮಾಡುವುದು ಖಂಡಿತ ಎಂಬುದು ಎಲ್ಲರ ಲೆಕ್ಕಾಚಾರ.

6 ಮಂದಿ ಹೊಸಬರು
ದೇವದತ್ತ ಪಡಿಕ್ಕಲ್‌, ಋತುರಾಜ್‌ ಗಾಯಕ್ವಾಡ್‌, ಕೃಷ್ಣಪ್ಪ ಗೌತಮ್‌, ಇಶಾನ್‌ ಕಿಶನ್‌, ವರುಣ್‌ ಚಕ್ರವರ್ತಿ, ಚೇತನ್‌ ಸಕಾರಿಯಾ… ಹೀಗೆ ಹನ್ನೊಂದರ ಬಳಗಕ್ಕೆ ಪದಾರ್ಪಣೆ ಮಾಡುವವರ ದೊಡ್ಡ ಯಾದಿಯೇ ಇಲ್ಲಿದೆ. ಆಯ್ಕೆಯಾದ ಎಲ್ಲರಿಗೂ ಅವಕಾಶ ಸಿಗುವುದು ಕಷ್ಟ, ಆದರೆ ಈ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡುತ್ತೇನೆ ಎಂದು ದ್ರಾವಿಡ್‌ ಭರವಸೆ ನೀಡಿರುವುದರಿಂದ ಇವರೆಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.

ಧವನ್‌, ಶಾ, ಸೂರ್ಯಕುಮಾರ್‌, ಪಾಂಡೆ, ಹಾರ್ದಿಕ್‌, ಭುವನೇಶ್ವರ್‌, ಚಹಲ್‌, ಕುಲದೀಪ್‌, ಸೈನಿ ಅವರೆಲ್ಲ ಮೊದಲ ಆಯ್ಕೆಯ ಆಟಗಾರರು ಎನ್ನಲಡ್ಡಿಯಿಲ್ಲ. ಉಳಿದಂತೆ ಓಪನಿಂಗ್‌ ವಿಭಾಗದಲ್ಲಿ ಪಡಿಕ್ಕಲ್‌-ಗಾಯಕ್ವಾಡ್‌-ರಾಣಾ, ಕೀಪಿಂಗ್‌ನಲ್ಲಿ ಸ್ಯಾಮ್ಸನ್‌-ಇಶಾನ್‌ ಕಿಶನ್‌ ನಡುವೆ ಪೈಪೋಟಿ ಇದೆ. ಏಕದಿನಕ್ಕೆ ಸ್ಯಾಮ್ಸನ್‌, ಟಿ20ಗೆ ಇಶಾನ್‌ ಕಿಶನ್‌ ಕೀಪಿಂಗ್‌ ನಡೆಸಬಹುದು.

ಮುಂಬರುವ ಟಿ20 ವಿಶ್ವಕಪ್‌ ದೃಷ್ಟಿಯಿಂದ ತಂಡಕ್ಕೆ ಎಂಥ ಆಟಗಾರರ ಅಗತ್ಯವಿದೆ ಎಂಬುದರ ಕುರಿತು ದ್ರಾವಿಡ್‌-ಧವನ್‌ ಈಗಾಗಲೇ ಕೊಹ್ಲಿ- ರವಿಶಾಸ್ತ್ರಿ ಜತೆ ಚರ್ಚೆ ನಡೆಸಿದ್ದಾಗಿ ವರದಿಯಾಗಿದೆ. ಆ ಪ್ರಕಾರವೇ ಲಂಕೆಯಲ್ಲಿ ಯುವ ಆಟಗಾರರನ್ನು ಆಡಿಸುವ ಯೋಜನೆ ಹಾಕಿಕೊಂಡಿರುವ ಸಾಧ್ಯತೆ ಇದೆ.

ಲಂಕಾ ದುರ್ಬಲ ತಂಡ
ಶ್ರೀಲಂಕಾ ತನ್ನ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ದುರ್ಬಲ ತಂಡವನ್ನು ಹೊಂದಿದೆ. ಇತ್ತೀಚೆಗೆ ಇಂಗ್ಲೆಂಡ್‌ನ‌ಲ್ಲಿ ಮಣ್ಣು ಮುಕ್ಕಿ ವಾಪಸಾಗಿರುವ ಲೆಕ್ಕದ ಭರ್ತಿಯ ತಂಡವಿದು. 4 ವರ್ಷಗಳಲ್ಲಿ 10ನೇ ನಾಯಕನನ್ನು ಕಾಣುತ್ತಿದೆ. ಇದ್ದವರಲ್ಲೇ ಉತ್ತಮರು ಎಂಬಂತಿದ್ದ ಕುಸಲ್‌ ಮೆಂಡಿಸ್‌, ನಿರೋಷನ್‌ ಡಿಕ್ವೆಲ್ಲ, ಏಂಜೆಲೊ ಮ್ಯಾಥ್ಯೂಸ್‌, ಕುಸಲ್‌ ಪೆರೆರ ಅವರೆಲ್ಲರ ಸೇವೆ ಇಲ್ಲಿ ಲಭ್ಯವಾಗುತ್ತಿಲ್ಲ.

ಈ ನಡುವೆ “ಭಾರತದ್ದು ದ್ವಿತೀಯ ದರ್ಜೆಯ ತಂಡ, ಇದರಿಂದ ಲಂಕಾ ಕ್ರಿಕೆಟನ್ನು ಅಪಹಾಸ್ಯ ಮಾಡಿದಂತೆ…’ ಎಂದು ಲಂಕೆಯ ಮಾಜಿ ನಾಯಕ ಅರ್ಜುನ ರಣತುಂಗ ಖ್ಯಾತೆ ತೆಗೆದಿದ್ದಾರೆ. ಈ ಕಾರಣಕ್ಕಾದರೂ ಗೆದ್ದು ತೋರಿಸಬೇಕಾದ ಸವಾಲು ಶ್ರೀಲಂಕಾ ಮುಂದಿದೆ!

ಸಂಭಾವ್ಯ ತಂಡಗಳು
ಭಾರತ: ಶಿಖರ್‌ ಧವನ್‌ (ನಾಯಕ), ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್‌, ಮನೀಷ್‌ ಪಾಂಡೆ, ಇಶಾನ್‌ ಕಿಶನ್‌ (ವಿ.ಕೀ.), ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ನವದೀಪ್‌ ಸೈನಿ/ದೀಪಕ್‌ ಚಹರ್‌, ಕುಲದೀಪ್‌ ಯಾದವ್‌/ವರುಣ್‌ ಚಕ್ರವರ್ತಿ/ರಾಹುಲ್‌ ಚಹರ್‌, ಯಜುವೇಂದ್ರ ಚಹಲ್‌.

ಶ್ರೀಲಂಕಾ: ಆವಿಷ್ಕ ಫೆರ್ನಾಂಡೊ, ಪಥುಮ್‌ ನಿಸ್ಸಂಕ, ಮಿನೋದ್‌ ಭನುಕ (ವಿ.ಕೀ.), ಧನಂಜಯ ಡಿ ಸಿಲ್ವ, ಭನುಕ ರಾಜಪಕ್ಷ, ದಸುನ್‌ ಶಣಕ (ನಾಯಕ), ವನಿಂದು ಹಸರಂಗ, ಇಸುರು ಉದಾನ, ಲಕ್ಷಣ ಸಂದಕನ್‌, ದುಷ್ಮಂತ ಚಮೀರ, ಕಸುನ್‌ ರಜಿತ.

ಟಾಪ್ ನ್ಯೂಸ್

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.