ಆತ್ಮವಿಶ್ವಾಸ, ಪರಿಶ್ರಮದಿಂದ ಆತ್ಮನಿರ್ಭರ ಭಾರತ
ಆರೆಸ್ಸೆಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ
Team Udayavani, May 18, 2020, 6:00 AM IST
ಬೆಂಗಳೂರು: ಆರ್ಥಿಕತೆ ಸಹಿತ ಅನ್ನ, ಅರಿವು, ವಸ್ತ್ರ ಮತ್ತು ವಸತಿಯಲ್ಲಿ ಪೂರ್ಣ ಸ್ವಾವ ಲಂಬನೆ ಪಡೆಯಲು ಜನ ಮನವು ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಬೆಳೆದಾಗ “ಆತ್ಮ ನಿರ್ಭರ ಭಾರತ’ ನಿರ್ಮಾಣ ಸಾಧ್ಯ…
-ಇದು ಆರೆಸ್ಸೆಸ್ ಸಹ ಸರಕಾರ್ಯ ವಾಹ ದತ್ತಾತ್ರೇಯ ಹೊಸಬಾಳೆಯವರ ಅಭಿಪ್ರಾಯ. ಸಮರ್ಥ ಭಾರತ ಸಂಘ ಟನೆ ಹಮ್ಮಿಕೊಂಡಿರುವ ಫೇಸ್ಬುಕ್ ಲೈವ್ ಉಪನ್ಯಾಸ ಸರಣಿಯಲ್ಲಿ ರವಿವಾರ ಅವರು ಆತ್ಮ ನಿರ್ಭರ ಭಾರತ – ಸಮರ್ಥ ಭಾರತ ಕುರಿಕು ಮಾತನಾಡಿದ್ದಾರೆ.
ನಮಗೆ ನಾವು ಭಾರವಾಗದೆ ಸ್ವಾವಲಂಬಿ ಗಳಾಗುವ ಪರಿಕಲ್ಪನೆಯು ಇಡೀ ಸಮಾಜಕ್ಕೆ ಬರಬೇಕು. ರಾಷ್ಟ್ರವು ಸ್ವಾವಲಂಬನೆ ಸಾಧಿಸ ಬೇಕಾದರೆ ಮತ್ತು ಸ್ವಯಂಪೂರ್ಣವಾಗ ಬೇಕಾದರೆ ನಾವೆಲ್ಲರೂ ಸ್ವಾವಲಂಬಿಗಳಾಗಬೇಕು. ಅದು ಸದಾ ಸುಖ ನೀಡುತ್ತದೆ. ನಮ್ಮ ಆವಶ್ಯಕತೆಗಳನ್ನು ನಾವೇ ತುಂಬಿಕೊಳ್ಳಬೇಕು. ದೇಶವೇ ಆತ್ಮವಾದಾಗ ಇನ್ನೊಂದು ದೇಶದ ಮೇಲೆ ಅವಲಂಬನೆ ತಪ್ಪುತ್ತದೆ. ಎಲ್ಲರಲ್ಲೂ ಸ್ವಾಭಿಮಾನ, ಸಂಘಟನೆ, ಸಶಕ್ತತೆ ತುಂಬಿಕೊಂಡಾಗ ರಾಷ್ಟ್ರವನ್ನು ಆತ್ಮ ನಿರ್ಭರ ಮಾಡಬಹುದು ಎಂದಿದ್ದಾರೆ ದತ್ತಾತ್ರೇಯ ಹೊಸಬಾಳೆ.
ಅನ್ನ, ಅರಿವು, ವಸ್ತ್ರ ಮತ್ತು ವಸತಿಯಲ್ಲಿ ಸ್ವಾವಲಂಬನೆ ಸಾಧಿಸಲು ನಮ್ಮಲ್ಲಿ ಸಂಪನ್ಮೂಲದ ಕೊರತೆಯಿಲ್ಲ. ಕೃಷಿ ಮತ್ತು ಔಷಧ, ಹಾಲು, ಹಣ್ಣು, ತರಕಾರಿಯಲ್ಲೂ ಸ್ವಾವಲಂಬನೆ ಸಾಧಿಸಬೇಕು. ದೇಶ ಪ್ರತಿ ಮಗು, ಪ್ರತಿ ಮನೆಗೂ ಹಾಲುಸಿಗುವಂತೆ ಮಾಡಲು ದೇಸಿ ಗೋವಿನ ತಳಿಗಳನ್ನು ಕಾಪಾಡಿ,ವೃದ್ಧಿಸುವ ಅಭಿಯಾನ ನಡೆ ಯಬೇಕು ಎಂದು ಹೇಳಿದರು.
ಸ್ವಾವಲಂಬನೆ
ಯಾವುದೇ ರಾಷ್ಟ್ರವು ಇನ್ನೊಂದು ರಾಷ್ಟ್ರದ ಆಕ್ರಮಣಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರಕ್ಷಣೆ ಮತ್ತು ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಇಂಧನ, ಆಹಾರ ಭದ್ರತೆ ಮತ್ತು ವಿಜ್ಞಾನ,ಅನ್ವಯಿಕ ವಿಜ್ಞಾನ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಅತೀ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವ್ಯವಸ್ಥೆ, ಸಂಸ್ಥೆಗಳು ಬದಲಾಗಬೇಕು
ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಅನೇಕ ವ್ಯವಸ್ಥೆ ಮತ್ತು ಸಂಸ್ಥೆಗಳು ಬ್ರಿಟಿಷ್ ವಸಾಹತಿನಂತಿವೆ. ಇದರಿಂದ ಮುಕ್ತಿ ಹೊಂದಬೇಕು. ಶಿಕ್ಷಣ, ನ್ಯಾಯಾಂಗ, ಆಡಳಿತ ವ್ಯವಸ್ಥೆ ಮತ್ತು ಚುನಾವಣ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಇವೆಲ್ಲವೂ ಭಾರತೀಯ ಜನಮನಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು ಎಂದಿದ್ದಾರೆ ಹೊಸಬಾಳೆ.
ಸಂಶೋಧನೆ ಅಗತ್ಯ
ಪುರಾತನ ಗ್ರಂಥಗಳನ್ನು ಪುನರ್ ಅಭಿವ್ಯಕ್ತಿಗೊಳಿಸುವ ಸಂಶೋಧನೆಗಳು ನಡೆಯಬೇಕು. ನಮ್ಮಲ್ಲಿರುವ ಜ್ಞಾನ ರಾಶಿಯನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ನೀಡಬೇಕು ಎಂದು ಹೇಳಿದ್ದಾರೆ.
ಏಕತೆ ಅಗತ್ಯ
ಐಎಎಸ್-ಐಪಿಎಸ್ ನಡುವಿನ ಗುದ್ದಾಟ, ವೈದ್ಯ ಪದ್ಧತಿಯ ನಡುವಿನ ಗುದ್ದಾಟ ನಿಲ್ಲಬೇಕು. ವಿವೇಕಾನಂದರು ಹೇಳಿದಂತೆ ಒಳ್ಳೆಯ ಸಂಗತಿ ಎಲ್ಲಿಂದ ಬಂದರೂ ಸ್ವೀಕರಿಸುವಂತಿರಬೇಕು. ಎಲ್ಲೂ ಒಡಕು ಇರಬಾರದು; ಏಕತೆ ಅಗತ್ಯ ಎಂದು ಹೇಳಿದ್ದಾರೆ.
ಭಾರತವೇ ಮಾದರಿ
ಸಂಕಷ್ಟ ಸಂದರ್ಭಗಳಲ್ಲಿ ಜಪಾನ್, ಇಸ್ರೇಲ್ ನಿದರ್ಶನಗಳನ್ನು ನೀಡುವ ವಾಡಿಕೆಯಿದೆ. ಆದರೆ ಈಗ ಭಾರತವನ್ನೇ ಉದಾಹರಣೆ ನೀಡಬಹುದು. ಕೊರೊನಾ ನಿರ್ವಹಣೆಯಲ್ಲಿ ದೇಶವು ಸಂಘಟಿತ ವಾಗಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಜನ ಮತ್ತು ಸರಕಾರ ಒಂದಾಗಿ ಈ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದೇವೆ. ಇನ್ನು ಮುಂದೆಯೂ ಇಡೀ ಸಮಾಜಹೀಗೆ ಎದ್ದುನಿಲ್ಲಬೇಕು ಎಂದಿದ್ದಾರೆ ಹೊಸಬಾಳೆ.
1947ರಲ್ಲಿ ದೇಶ ವಿಭಜನೆಯಾದ ಅನಂತರ ಅದೆಷ್ಟೋ ಬಾರಿ ಭಾರತವು ಏಕತೆ, ಒಗ್ಗಟ್ಟುಗಳಿಗೆ ಆಘಾತವಾಗುವ ಸಂದರ್ಭ ಎದುರಿಸಿದೆ. ದೇಶದ ಜನರ ಆಂತರಿಕ ಒಗ್ಗಟ್ಟು, ನಮ್ಮ ಪೂರ್ವಜರ ಋಣ, ಸಮರ್ಥ ನಾಯಕತ್ವದಿಂದ ಭಾರತ ಇಂದಿಗೂ ಏಕವಾಗಿ ಉಳಿದಿದೆ. ಇದು ಮುಂದೆಯೂ ಗಟ್ಟಿಯಾಗಿ ಇರಲಿದೆ.
-ದತ್ತಾತ್ರೇಯ ಹೊಸಬಾಳೆ,
ಆರೆಸ್ಸೆಸ್ ಸಹ ಸರಕಾರ್ಯವಾಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ