ಏಕದಿನ ಸರಣಿ : ಶ್ರೀಲಂಕಾ ವಿರುದ್ಧ ಧವನ್‌ ಪಡೆಗೆ 7 ವಿಕೆಟ್‌ ಜಯ


Team Udayavani, Jul 18, 2021, 10:42 PM IST

ಏಕದಿನ ಸರಣಿ : ಶ್ರೀಲಂಕಾ ವಿರುದ್ಧ ಧವನ್‌ ಪಡೆಗೆ 7 ವಿಕೆಟ್‌ ಜಯ

ಕೊಲಂಬೊ : ಸರ್ವಾಂಗೀಣ ಪ್ರದರ್ಶನ ನೀಡಿದ ಶಿಖರ್‌ ಧವನ್‌ ಸಾರಥ್ಯದ ಟೀಮ್‌ ಇಂಡಿಯಾ-2 ಶ್ರೀಲಂಕಾ ಎದುರಿನ ಏಕದಿನ ಸರಣಿಯನ್ನು 7 ವಿಕೆಟ್‌ ಗೆಲುವಿನೊಂದಿಗೆ ಆರಂಭಿಸಿದೆ.

ರವಿವಾರದ ಮುಖಾಮುಖೀಯಲ್ಲಿ ಶ್ರೀಲಂಕಾ 9 ವಿಕೆಟಿಗೆ 262 ರನ್‌ ಗಳಿಸಿದರೆ, ಭಾರತ ಯಾವುದೇ ಒತ್ತಡವಿಲ್ಲದೆ 36.4 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 263 ರನ್‌ ಬಾರಿಸಿತು.

24 ಎಸೆತಗಳಿಂದ 43 ರನ್‌ ಬಾರಿಸಿ ಸಿಡಿದು ನಿಂತ ಪೃಥ್ವಿ ಶಾ, ಅಜೇಯ 86 ರನ್‌ ಮಾಡಿದ ನಾಯಕ ಶಿಖರ್‌ ಧವನ್‌ (95 ಎಸೆತ, 6 ಫೋರ್‌, 1 ಸಿಕ್ಸರ್‌), ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿ ಏಕದಿನಕ್ಕೆ ಭರ್ಜರಿ ಪದಾರ್ಪಣೆ ಮಾಡಿದ ಬರ್ತ್‌ಡೇ ಬಾಯ್‌ ಇಶಾನ್‌ ಕಿಶನ್‌ (42 ಎಸೆತ, 59ರನ್‌, 6 ಬೌಂಡರಿ, 2 ಸಿಕ್ಸರ್‌) ಭಾರತದ ಬ್ಯಾಟಿಂಗ್‌ ಹೀರೋಗಳಾಗಿ ಮೂಡಿಬಂದರು. ಪಾಂಡೆ 26, ಸೂರ್ಯಕುಮಾರ್‌ ಅಜೇಯ 31 ರನ್‌ ಕೊಡುಗೆ ಸಲ್ಲಿಸಿದರು.

ಲಂಕಾ ಬ್ಯಾಟ್ಸ್‌ಮನ್‌ಗಳಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. ಎಲ್ಲರೂ ಉತ್ತಮ ಆರಂಭ ಪಡೆದರಾದರೂ ಇನ್ನಿಂಗ್ಸ್‌ ಬೆಳೆಸುವಲ್ಲಿ ವಿಫ‌ಲರಾದರು. 8ನೇ ಕ್ರಮಾಂಕದ ಚಮಿಕ ಕರುಣರತ್ನೆ ಅವರ ಅಜೇಯ 43 ರನ್‌ (35 ಎಸೆತ, 2 ಸಿಕ್ಸರ್‌, 1 ಫೋರ್‌) ಲಂಕಾ ಸರದಿಯ ಅತ್ಯಧಿಕ ಗಳಿಕೆಯಾಗಿತ್ತು. ಕೊನೆಯ ಹಂತದಲ್ಲಿ ಕರುಣರತ್ನೆ ಸಿಡಿದು ನಿಂತ ಪರಿಣಾಮ ತಂಡದ ಸ್ಕೋರ್‌ ನಿರೀಕ್ಷೆಗೂ ಮೀರಿ ಬೆಳೆಯಿತು.

ಭಾರತದ ಬೌಲಿಂಗ್‌ ಸರದಿಯಲ್ಲಿ ಭುವನೇಶ್ವರ್‌ ಕುಮಾರ್‌ ಹೊರತುಪಡಿಸಿ ಉಳಿದವರೆಲ್ಲ ಗಮನಾರ್ಹ ದಾಳಿ ಸಂಘಟಿಸಿದರು. ಭುವಿ 63 ರನ್‌ ನೀಡಿ ದುಬಾರಿಯಾಗುವ ಜತೆಗೆ ವಿಕೆಟ್‌ ಲೆಸ್‌ ಎನಿಸಿದರು. ಚಹರ್‌, ಕುಲದೀಪ್‌, ಚಹಲ್‌ ತಲಾ 2 ವಿಕೆಟ್‌ ಹಾರಿಸಿದರು. ಅತ್ಯಂತ ಮಿತವ್ಯಯಿ ಎನಿಸಿದವರು ಕೃಣಾಲ್‌ ಪಾಂಡ್ಯ.

ತ್ರಿವಳಿ ಸ್ಪಿನ್‌ ಯಶಸ್ಸು
ಕುಲದೀಪ್‌ ಪಾಲಿಗೆ ಇದು “ಮೇಕ್‌ ಆರ್‌ ಬ್ರೇಕ್‌’ ಪಂದ್ಯವಾಗಿತ್ತು. 17ನೇ ಓವರಿನಲ್ಲಿ ಅವಳಿ ಬೇಟೆಯಾಡುವ ಮೂಲಕ ಲಂಕೆಯ ಫೋರ್ಸ್‌ಗೆ ತಡೆಯಾಗಿ ನಿಂತರು. ಜತೆಗೆ ತಮ್ಮ ಭರ್ಜರಿ ಪುನರಾಗಮನವನ್ನೂ ಸಾರಿದರು. ಭಾರತದ ತ್ರಿವಳಿ ಸ್ಪಿನ್‌ ದಾಳಿ ಉತ್ತಮ ಯಶಸ್ಸು ಕಂಡಿತು. ಮೂವರೂ ಸೇರಿ 98 ಡಾಟ್‌ ಬಾಲ್‌ (16.2 ಓವರ್‌) ಎಸೆದರು.

ಸ್ಕೋರ್‌ ಪಟ್ಟಿ
ಶ್ರೀಲಂಕಾ
ಆವಿಷ್ಕ ಫೆರ್ನಾಂಡೊ ಸಿ ಪಾಂಡೆ ಬಿ ಚಹಲ್‌ 32
ಮಿನೋದ್‌ ಭನುಕ ಸಿ ಶಾ ಬಿ ಕುಲದೀಪ್‌ 27
ಭನುಕ ರಾಜಪಕ್ಷ ಸಿ ಧವನ್‌ ಬಿ ಕುಲದೀಪ್‌ 24
ಧನಂಜಯ ಡಿ ಸಿಲ್ವ ಸಿ ಭುವನೇಶ್ವರ್‌ ಬಿ ಕೃಣಾಲ್‌ 14
ಚರಿತ ಅಸಲಂಕ ಸಿ ಇಶಾನ್‌ ಬಿ ಚಹರ್‌ 38
ದಸುನ್‌ ಶಣಕ ಸಿ ಹಾರ್ದಿಕ್‌ ಬಿ ಚಹಲ್‌ 39
ವನಿಂದು ಹಸರಂಗ ಸಿ ಧವನ್‌ ಬಿ ಚಹರ್‌ 8
ಚಮಿಕ ಕರುಣರತ್ನೆ ಔಟಾಗದೆ 43
ಇಸುರು ಉದಾನ ಸಿ ಚಹರ್‌ ಬಿ ಹಾರ್ದಿಕ್‌ 8
ದುಷ್ಮಂತ ಚಮೀರ ರನೌಟ್‌ 13

ಇತರ 16
ಒಟ್ಟು (9 ವಿಕೆಟಿಗೆ) 262
ವಿಕೆಟ್‌ ಪತನ: 1-49, 2-85, 3-89, 4-117, 5-166, 6-186, 7-205, 8-222, 9-262.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 9-0-63-0
ದೀಪಕ್‌ ಚಹರ್‌ 7-1-37-2
ಹಾರ್ದಿಕ್‌ ಪಾಂಡ್ಯ 5-0-33-1
ಯಜುವೇಂದ್ರ ಚಹಲ್‌ 10-0-52-2
ಕುಲದೀಪ್‌ ಯಾದವ್‌ 9-1-48-2
ಕೃಣಾಲ್‌ ಪಾಂಡ್ಯ 10-1-26-1

ಭಾರತ
ಪೃಥ್ವಿ ಶಾ ಸಿ ಆವಿಷ್ಕ ಬಿ ಧನಂಜಯ 43
ಶಿಖರ್‌ ಧವನ್‌ ಔಟಾಗದೆ 86
ಇಶಾನ್‌ ಕಿಶನ್‌ ಸಿ ಭನುಕ ಬಿ ಸಂದಕನ್‌ 59
ಮನೀಷ್‌ ಪಾಂಡೆ ಸಿ ಶಣಕ ಬಿ ಧನಂಜಯ 26
ಸೂರ್ಯಕುಮಾರ್‌ ಔಟಾಗದೆ 31
ಇತರ 18
ಒಟ್ಟು (36.4 ಓವರ್‌ಗಳಲ್ಲಿ 3 ವಿಕೆಟಿಗೆ) 263
ವಿಕೆಟ್‌ ಪತನ: 1-58, 2-143, 3-215.
ಬೌಲಿಂಗ್‌: ದುಷ್ಮಂತ ಚಮೀರ 7-0-42-0
ಇಸುರು ಉದಾನ 2-0-27-0
ಧನಂಜಯ ಡಿ ಸಿಲ್ವ 5-0-49-2
ಲಕ್ಷಣ ಸಂದಕನ್‌ 8.4-0-53-1
ಚರಿತ ಅಸಲಂಕ 3-0-26-0
ವನಿಂದು ಹಸರಂಗ 9-1-45-0
ಚಮಿಕ ಕರುಣರತ್ನೆ 2-0-16-0

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.