ನವೆಂಬರ್ನಲ್ಲಿ 63.54 ಲಕ್ಷ ಮಂದಿ ದೇಶೀಯ ವಿಮಾನಗಳಲ್ಲಿ ಪ್ರಯಾಣ
Team Udayavani, Dec 20, 2020, 6:20 AM IST
ಹೊಸದಿಲ್ಲಿ: ಈ ವರ್ಷದ ನವೆಂಬರ್ನಲ್ಲಿ 63.54 ಲಕ್ಷ ಮಂದಿ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. ಆದರೆ ಕಳೆದ ವರ್ಷದ ನವೆಂ ಬರ್ಗೆ ಹೋಲಿಸಿದಲ್ಲಿ ಇದು ಶೇ. 51ರಷ್ಟು ಕಡಿಮೆಯಾಗಿದೆ ಎಂದು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ತಿಳಿಸಿದೆ. ಸೆಪ್ಟಂಬರ್ನಲ್ಲಿ 39.43 ಲಕ್ಷ, ಅಕ್ಟೋಬರ್ನಲ್ಲಿ 52.71 ಲಕ್ಷ ಜನರು ದೇಶೀಯ ವಿಮಾನ ಯಾನ ಕೈಗೊಂಡಿದ್ದರು.
ಇಂಡಿಗೊ ವಿಮಾನಗಳು ನವೆಂಬರ್ನಲ್ಲಿ 34.23 ಲಕ್ಷ ಪ್ರಯಾಣಿಕರನ್ನು ಹೊತ್ತೂಯ್ದಿದೆ. ಇದು ಒಟ್ಟು ದೇಶೀಯ ಮಾರುಕಟ್ಟೆಯ ಶೇ 53.9ರಷ್ಟು ಪಾಲನ್ನು ಹೊಂದುವ ಮೂಲಕ ಅಗ್ರ ಸಂಸ್ಥೆಯಾಗಿ ಮುಂದುವರಿದಿದೆ.
ಸ್ಪೈಸ್ಜೆಟ್ ವಿಮಾನಗಳಲ್ಲಿ 8.4 ಲಕ್ಷ ಯಾನಿಗಳು ಹಾರಾಟ ನಡೆ ಸಿದ್ದು ಮಾರುಕಟ್ಟೆಯ ಶೇ.13.2ರಷ್ಟು ಪಾಲನ್ನು ಹೊಂದಿದೆ. ಏರ್ ಇಂಡಿಯಾ, 6.56 ಲಕ್ಷ, ಗೋ ಏರ್ 5.77 ಲಕ್ಷ, ಏರ್ಏಷ್ಯಾ ಇಂಡಿಯಾ 4.21 ಲಕ್ಷ ಮತ್ತು ವಿಸ್ತಾರಾ ಕಂಪೆನಿಯ ವಿಮಾನಗಳಲ್ಲಿ 3.97 ಲಕ್ಷ ಯಾನಿಗಳು ಪ್ರಯಾಣಿಸಿದ್ದಾರೆ. ಆರು ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಗಳ ಆಕ್ಯುಪೆನ್ಸಿ ದರ ನವೆಂಬರ್ನಲ್ಲಿ ಶೇ. 66.3ರಿಂದ 77.7ರಷ್ಟಿತ್ತು.
ಇಂಡಿಗೋ ಟಾಪ್ ಲಿಸ್ಟ್
ನವೆಂಬರ್ ತಿಂಗಳಿನಲ್ಲಿ ಇಂಡಿಗೊ ಬೆಂಗಳೂರು, ದಿಲ್ಲಿ, ಹೈದರಾಬಾದ್ ಮತ್ತು ಮುಂಬಯಿ ವಿಮಾನ ನಿಲ್ದಾಣಗಳಲ್ಲಿ ಶೇ. 97.5ರಷ್ಟು ಕಾರ್ಯಕ್ಷಮತೆಯನ್ನು ದಾಖಲಿಸಿದೆ. ನವೆಂಬರ್ನಲ್ಲಿ ಈ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಏರ್ ಏಷ್ಯಾ ಶೇ. 95.6, ವಿಸ್ತಾರ ಶೇ. 94.8ರಷ್ಟು ಕಾರ್ಯಕ್ಷಮತೆಯೊಂದಿಗೆ ಬಳಿಕದ ಸ್ಥಾನದಲ್ಲಿದೆ.
ನವೆಂಬರ್ನ ಲೋಡ್ ಫ್ಯಾಕ್ಟರ್
ಪ್ರಮುಖ ನಿಗದಿತ ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಪ್ರಯಾ ಣಿಕರ ಲೋಡ್ ಫ್ಯಾಕ್ಟರ್ (ಪಿಎಲ…ಎಫ್) ನವೆಂಬರ್ನಲ್ಲಿ ಶೇ. 66- 77ರಷ್ಟಿತ್ತು. ಅಕ್ಟೋಬರ್ನಲ್ಲಿ ಶೇ. 61-74ರಷ್ಟಿತ್ತು. ಆದರೆ ವರ್ಷದ ಹಿಂದಿನ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು ಶೇ. 77-92ರಷ್ಟು ಪಿಎಲ…ಎಫ್ ದಾಖಲಿಸಿದ್ದವು. ಈ ಪಿಎಲ್ಎಫ್ ಅಥವಾ ಲೋಡ್ ಫ್ಯಾಕ್ಟರ್ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಸಾರಿಗೆ ಸೇವೆಗಳ ಸಾಮರ್ಥ್ಯದ ಬಳಕೆಯನ್ನು ಅಳೆಯುತ್ತದೆ.
ಏನು ಕಾರಣ?
ಲಾಕ್ಡೌನ್ ಸಡಿಲಿಕೆ ಮತ್ತು ಹಬ್ಬದ ಋತು ಪ್ರಾರಂಭ ಗೊಂಡ ಬಳಿಕ ದೇಶದಲ್ಲಿ ವಿಮಾನ ಯಾನಕ್ಕೆ ಬೇಡಿಕೆ ಕುದುರತೊಡಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಾರ್ಚ್ನಲ್ಲಿ ತಡೆಹಿಡಿಯಲಾದ ವಿಮಾನ ಹಾರಾಟವನ್ನು ಎರಡು ತಿಂಗಳ ಬಳಿಕ ಅಂದರೆ ಮೇ 25ರಂದು ದೇಶೀಯ ಪ್ರಯಾಣಿಕರ ಹಾರಾ ಟಕ್ಕೆ ಪುನರಾರಂಭಿ ಸಲಾಗಿತ್ತು. ನವೆಂಬರ್ನಲ್ಲಿ ದೇಶೀಯ ವಿಮಾನಗಳಲ್ಲಿ ಶೇ. 70 ಸಾಮರ್ಥ್ಯದೊಂದಿಗೆ ವಿಮಾನ ಹಾರಾಟ ಮಾಡಲು ಅವಕಾಶ ಕಲ್ಪಿಸಿದ್ದು, ಬಳಿಕ ಇದನ್ನು ಡಿಸೆಂಬರ್ ಆರಂಭದಲ್ಲಿ ಶೇ.80ಕ್ಕೆ ಏರಿಸಲಾಯಿತು. ಇದರಿಂದಾಗಿ ವಿಮಾನ ಯಾನಿಗಳ ಸಂಖ್ಯೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು