ಪಾಕಿಸ್ಥಾನದ ಶೆಲ್ ದಾಳಿಗೆ ಭಾರತೀಯ ಯೋಧ ಹುತಾತ್ಮ
ಜೂನ್ ತಿಂಗಳಲ್ಲಿ ಮೂವರು ಸೈನಿಕರ ಸಾವು ; 2,027 ಬಾರಿ ಕದನ ವಿರಾಮ ಉಲ್ಲಂಘನೆ
Team Udayavani, Jun 15, 2020, 6:40 AM IST
ಜಮ್ಮು: ಗಡಿಯಲ್ಲಿ ಪಾಕ್ ಸೇನೆಯ ಅಟ್ಟ ಹಾಸ ಮಿತಿ ಮೀರಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಯುದ್ದಕ್ಕೆ ಅಪ್ರಚೋದಿತ ಗುಂಡು ಹಾರಾಟ ಮತ್ತು ಶೆಲ್ ದಾಳಿ ನಡೆಸಿದೆ. ಪರಿಣಾಮವಾಗಿ ಭಾರತೀಯ ಸೇನೆಯ ಒಬ್ಬ ಯೋಧ ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಭಾರತೀಯ ಸೇನೆಯ ಮುಂಚೂಣಿ ನೆಲೆಗಳು, ಗಡಿ ಗ್ರಾಮ ಗಳನ್ನು ಗುರಿಯಾಗಿಸಿ ಪಾಕ್ ಸೇನೆ ನಡೆಸುತ್ತಿರುವ ದಾಳಿಗೆ ಈ ತಿಂಗಳೊಂದರಲ್ಲೇ ಮೂವರು ಯೋಧರು ಬಲಿಯಾದಂತಾಗಿದೆ. ಶನಿವಾರ ರಾತ್ರಿ ಶಾಪುರ್ – ಕೆರ್ನಿ ವಲಯದಲ್ಲಿ ಮತ್ತೆ ದಾಳಿ ನಡೆ ದಿದ್ದು, ಭಾರ ತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಗುಂಡಿನ ದಾಳಿ ಯಿಂದ ಮೂವರು ಯೋಧರು ಗಾಯಗೊಂಡಿದ್ದು, ಅವ ರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ದಾರಿ ಮಧ್ಯೆ ಒಬ್ಬ ಯೋಧ ಅಸು ನೀಗಿದ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ರವಿವಾರ ಬೆಳಗ್ಗೆಯೂ ಬಾರಾ ಮುಲ್ಲಾ ಜಿಲ್ಲೆಯ ರಾಂಪುರ ವಲಯ ದಲ್ಲಿ ಪಾಕ್ ಪಡೆ ಶೆಲ್ ದಾಳಿ ಮುಂದುವರಿಸಿದ್ದು, ಎರಡೂ ಕಡೆ ಸ್ವಲ್ಪ ಕಾಲ ಗುಂಡಿನ ಚಕಮಕಿ ನಡೆದಿದೆ.
ಕದನ ವಿರಾಮ ಉಲ್ಲಂಘನೆ: ಶೇ.69 ಹೆಚ್ಚಳ
ಪ್ರಸಕ್ತ ವರ್ಷದ ಆರಂಭದಿಂದ ಜೂನ್ 10ರ ವರೆಗೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಪಾಕ್ ಸೇನೆಯು ಬರೋಬ್ಬರಿ 2,027 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿ ಸಿದರೆ ಈ ವರ್ಷ ಪಾಕ್ ಪಡೆಯ ದಾಳಿಯ ಪ್ರಮಾಣ ಶೇ.69 ರಷ್ಟು ಹೆಚ್ಚಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಣಿವೆ ರಾಜ್ಯ ದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರ ರನ್ನು ಭಾರತದೊಳಕ್ಕೆ ನುಸುಳಿಸುವ ಕುತಂತ್ರದ ಭಾಗವಾಗಿ ಪಾಕ್ ಈ ರೀತಿ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದೆ. ಉಗ್ರರ ನುಸುಳುವಿಕೆಗೆ ನೆರವಾಗಲು ಅವರಿಗೆ ಗುರಾಣಿಯಾಗಿ ನಿಂತು ಪಾಕ್ ಪಡೆ ಇಂಥ ಕುಕೃತ್ಯ ಎಸಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2019ರಲ್ಲಿ 3,168 ಬಾರಿ ಪಾಕ್ ಸೇನೆಯು ಗುಂಡಿನ ದಾಳಿ ನಡೆಸಿತ್ತು. 2018ರಲ್ಲಿ ಈ ಸಂಖ್ಯೆ 1,629 ಆಗಿತ್ತು. ಆದರೆ ಈ ವರ್ಷದ ಮೊದಲ 6 ತಿಂಗ ಳಲ್ಲೇ 2,027 ಬಾರಿ ದಾಳಿ ನಡೆಸಲಾಗಿದೆ. ಈ ಪೈಕಿ ಮಾರ್ಚ್ ತಿಂಗಳೊಂದರಲ್ಲೇ ಅತ್ಯಧಿಕ ಅಂದರೆ, 411 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಸೇನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ