ಜಾರ್ಖಂಡ್ನಲ್ಲಿ ಲೀಟರ್ ಪೆಟ್ರೋಲ್ಗೆ 25 ರೂ. ಕಡಿತ! ಜ.26ರಿಂದ ಹೊಸ ದರ ನೀತಿ ಅನ್ವಯ
ದ್ವಿಚಕ್ರ ವಾಹನಗಳಿಗೆ, ಅದರಲ್ಲೂ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ
Team Udayavani, Dec 29, 2021, 9:00 PM IST
ರಾಂಚಿ: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ಬೆನ್ನಲ್ಲೇ ಬಹುತೇಕ ರಾಜ್ಯಗಳು ಇಂಧನ ಬೆಲೆಯಲ್ಲಿ 5-10 ರೂ. ಇಳಿಕೆ ಮಾಡಿವೆ.
ಆದರೆ ಜ.26ರಿಂದ ಅನ್ವಯವಾಗುವಂತೆ ಜಾರ್ಖಂಡ್ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ ಬರೋಬ್ಬರಿ 25 ರೂ. ಇಳಿಕೆ ಮಾಡಿದೆ.ಈ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಣೆ ಮಾಡಿದ್ದಾರೆ.
ಈ ಇಳಿಕೆ ದ್ವಿಚಕ್ರ ವಾಹನಗಳಿಗೆ ಮಾತ್ರ. ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ.
ಬಿಪಿಎಲ್ ಕಾರ್ಡ್ ಹೊಂದಿರುವವರು ತಮ್ಮ ಬೈಕ್ ಅಥವಾ ಸ್ಕೂಟರ್ ತೆಗೆದುಕೊಂಡು ಪೆಟ್ರೋಕ್ ಬಂಕ್ಗೆ ಹೋದರೆ ಮಾತ್ರ ಬೆಲೆ ಇಳಿಕೆ ಅನ್ವಯವಾಗಲಿದೆ.
ಇದನ್ನೂ ಓದಿ:ಅಂಕೋಲಾ: ಹಿರಿಯ ಕಾರ್ಯಕರ್ತರನ್ನು ಭೇಟಿಯಾಗಿ ಕುಶಲೋಪಚರಿ ವಿಚಾರಿಸಿದ ಸ್ಪೀಕರ್ ಕಾಗೇರಿ
ಇದು ಹೇಗೆ ಅನ್ವಯ?
ಅಂದ ಹಾಗೆ ನೀವು ಪೆಟ್ರೋಲ್ ಬಂಕ್ನಲ್ಲಿ ಲೀಟರ್ಗೆ 25 ರೂ. ಕಡಿಮೆ ಕೊಡುವಂತಿಲ್ಲ. ಪೆಟ್ರೋಲ್ ಬಂಕಿನಲ್ಲಿ ಅಂದಿನ ಪೆಟ್ರೋಲ್ ದರವನ್ನೇ ಕೊಡಬೇಕು. ನಂತರ ಸರ್ಕಾರ ನಿಮಗೆ ಲೀಟರ್ಗೆ 25 ರೂ.ನಂತೆ ನಿಮ್ಮ ಬ್ಯಾಂಕ್ ಖಾತೆಗೆ ಪಾವತಿಸುತ್ತದೆ. ನಿತ್ಯಬಳಕೆಯ ಸಿಲಿಂಡರ್ಗೆ ಸರ್ಕಾರ ಸಬ್ಸಿಡಿ ಕೊಡುತ್ತಿದ್ದ ರೀತಿಯಲ್ಲೇ ಪೆಟ್ರೋಲ್ ಬೆಲೆಯನ್ನೂ ನೇರವಾಗಿ ಖಾತೆಗೆ ಹಾಕಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ