ಕಾರ್ಕಳ: ಸಾವಿರಕ್ಕೂ ಮಿಕ್ಕಿ ಕಡತ ಬಾಕಿ : ವಿಲೇವಾರಿಯಾಗದೆ ನಾಗರಿಕರು ಹೈರಾಣು!


Team Udayavani, Apr 17, 2021, 5:10 AM IST

ಕಾರ್ಕಳ: ಸಾವಿರಕ್ಕೂ ಮಿಕ್ಕಿ ಕಡತ ಬಾಕಿ : ವಿಲೇವಾರಿಯಾಗದೆ ನಾಗರಿಕರು ಹೈರಾಣು!

ಕಾರ್ಕಳ: ಕಾರ್ಕಳ ತಾ| ಕಚೇರಿ ಭೂಮಾಪನ ವಿಭಾಗದಲ್ಲಿ ಭೂಮಾಪನ ಇಲಾಖೆಯ ಕಡತ ವಿಲೇವಾರಿಯಾಗದೆ ಜನ ತೊಂದರೆ ಎದುರಿಸುತ್ತಿದ್ದಾರೆ. ಕಚೇರಿಯಲ್ಲಿ ಸಾವಿರಕ್ಕೂ ಅಧಿಕ ಕಡತ ವಿಲೇವಾರಿ ಯಾಗದೆ ಉಳಿದಿದ್ದು ಸಾರ್ವಜನಿಕರು ಭೂಮಿಗೆ ಸಂಬಂಧಿಸಿ ಸೇವೆ ಪಡೆಯಲು ಹೆಣಗಾಡುತ್ತಿದ್ದಾರೆ.

ಖಾಸಗಿ ಪರವಾನಿಗೆ ಸರ್ವೆಯವರು ಮುಷ್ಕರ ನಿರತರಾಗಿದ್ದು ತಾಲೂಕಿನಲ್ಲಿ 13ರ ಬದಲು 9 ಸರಕಾರಿ ಸರ್ವೆಯರು ಮಾತ್ರ ಇದ್ದಾರೆ.

ಬೆರಳೆಣಿಕೆ ಸರಕಾರಿ ಸರ್ವೆಯರಿಂದ ನಿಗದಿತ ಪ್ರಮಾಣದಲ್ಲಿ ಕಡತ ವಿಲೇವಾರಿ ಆಗುತ್ತಿಲ್ಲ. ಸಾವಿರಕ್ಕೂ ಅಧಿಕ ಕಡತ ವಿಲೇವಾರಿಯಾಗದೆ ಬಾಕಿಯಿದೆ. ಮಳೆಗಾಲಕ್ಕೂ ಮೊದಲು ಕೆಲಸ ಕಾರ್ಯ ಮಾಡಿಸಿಕೊಳ್ಳಲು ಜನ ಪರದಾಡುತ್ತಿದ್ದಾರೆ.

ಸರ್ವರ್‌ ಸಮಸ್ಯೆ
ಇದೆಲ್ಲದರ ನಡುವೆ ಸರ್ವರ್‌ ಕೈ ಕೊಡುತ್ತಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಭೂಮಿ ಮಾರಾಟ ಉದ್ದೇಶಕ್ಕಾಗಿ 11 -ಇ ನಕಾಶೆ ಸಹಿತ ವಿವಿಧ ಕಡತಗಳಿಗೆ ಸಂಬಂಧಿಸಿದ ಕೆಲಸಗಳು ತಾಲೂಕು ಕಂದಾಯ ಕಚೇರಿಯಲ್ಲಿ ಬಾಕಿಯಿದೆ. ಇದನ್ನು ಮಾಡಿಸಿ
ಕೊಳ್ಳಲು ಜನಸಾಮಾನ್ಯರು ಕಚೇರಿ ಬಾಗಿಲು ಬಡಿಯುತ್ತಿದ್ದರೆ. ದಿನದಿಂದ ದಿನಕ್ಕೆ ಕಡತ ಪೆಂಡಿಂಗ್‌ ಸಂಖ್ಯೆ ಹೆಚ್ಚುತ್ತಿದ್ದು, ಪರಿಹರಿಸುವವರು ಇಲ್ಲದೆ ಜನಸಾಮಾನ್ಯರ ಕಷ್ಟ ಕೇಳುವವರೇ ಇಲ್ಲವಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಜಮೀನು ಮಾರಾಟಕ್ಕೆ ಅಡಚಣೆ
ಕುಟುಂಬಗಳಲ್ಲಿ ವಿವಾಹ, ಮನೆ ನಿರ್ಮಾಣ ಸಹಿತ ವಿವಿಧ ಹಣಕಾಸು ನಿರ್ವಹಣೆ ಸೇರಿದಂತೆ ಅಗತ್ಯ ಕೆಲಸಗಳಿಗೆ ಜಮೀನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನು ಮಾರಾಟ ಮಾಡಲಾಗದೆ ಸರಕಾರಿ ಸೇವೆಗಳು ಸಿಗದೆ ಜನರ ಸ್ಥಿತಿ ಶೋಚನೀಯವಾಗಿದೆ.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಲಸ ಸ್ಥಗಿತ
ಕಂದಾಯ ವಿಭಾಗದ ಶೇ. 80ರಷ್ಟನ್ನು ಪರವಾನಿಗೆ ಪಡೆದ ಖಾಸಗಿ ಸರ್ವೇಯರ್‌ಗಳೇ ವಿಲೇವಾರಿ ಮಾಡುತ್ತಿದ್ದಾಗ ಸಮಸ್ಯೆ ಆಗುತ್ತಿರಲಿಲ್ಲ. ಕಳೆದ ಎರಡು ತಿಂಗಳಿನಿಂದ ಖಾಸಗಿ ಸರ್ವೇಯರ್‌ಗಳು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಲಸ ಸ್ಥಗಿತ
ಗೊಳಿಸಿದ್ದಾರೆ. ಭೂಮಾಪನ ಇಲಾಖೆಯ ಸರಕಾರಿ ಸರ್ವೇಯರ್‌ಗಳೇ ಈಗ ಎಲ್ಲವನ್ನು ಮಾಡಬೇಕಿದ್ದು, ಒತ್ತಡದಿಂದ ಸಾಧ್ಯವಾಗುತ್ತಿಲ್ಲ.

ಸಾರ್ವಜನಿಕರಿಗೆ ಸೇವೆಗಳು ಸಕಾಲದಲ್ಲಿ ಸಿಗುತ್ತಿಲ್ಲ
ಪರವಾನಿಗೆದಾರ ಸರ್ವೇಯರ್‌ಗಳು ಭೂಮಾಪನ, 11-ಇ ನಕಾಶೆ, ತತ್ಕಾಲ್‌ ಪೋಡಿ ಮುಂತಾದ ಸೇವೆ ಮಾಡಿ ಕೊಡುತ್ತಿದ್ದರು. ಕಂದಾಯ ಇಲಾಖೆ ತತ್ರಾಂಶದಲ್ಲಿ ಬದಲಾವಣೆ ತಂದು ಸರಕಾರಿ ಸರ್ವೇಯರ್‌ಗಳು ಈ ಎಲ್ಲ ಸೇವೆ ಮಾಡುವಂತೆ ಅವಕಾಶ ಮಾಡಿಕೊಡಲಾಗಿದೆ. ಹೆಚ್ಚುವರಿ ಹೊಣೆಗಾರಿಕೆಯೂ ಅವರ ಮೇಲಿದೆ. ಸೀಮಿತ ಅವಧಿಯಲ್ಲಿ ಮುಗಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಎಷ್ಟೇ ಹೆಚ್ಚುವರಿ ಸಮಯ ತೆಗೆದುಕೊಂಡರೂ ದಿನದಲ್ಲಿ ಹೆಚ್ಚಿನ ವಿಲೇವಾರಿ ಮಾಡಿ ಸೇವೆ ನೀಡಲಾಗುತ್ತಿಲ್ಲ. ಕಡತ ವಿಲೆವಾರಿಗಳು ಆಗದೆ ಕಡತಗಳೆಲ್ಲವೂ ಕಚೇರಿಗಳಲ್ಲಿ ಬಾಕಿ ಉಳಿದುಕೊಂಡಿವೆ. ಜನಸಾಮಾನ್ಯರು ಕೆಲಸ ಮಾಡಿಸಿಕೊಳ್ಳಲು ಪರದಾಡುತ್ತಿದ್ದು. ಅಧಿಕಾರಿಗಳಿಗೂ ಸಬೂಬು ಹೇಳಿಕೊಳ್ಳುತ್ತ ಕೈ ತೊಳೆದುಕೊಳ್ಳುತ್ತಿದ್ದಾರೆ.
ತಾ| ಕಚೇರಿಗಳ ಭೂ ದಾಖಲೆ, ನೋಂದಣಿ ವಿಭಾಗಗಳಲ್ಲಿ ಸರ್ವರ್‌ ಸಮಸ್ಯೆ ಇರುವುದು ಇನ್ನೊಂದು ತೊಡಕು. ಇವೆಲ್ಲದರ ನಡುವೆ ಜನಸಾಮಾನ್ಯರ ಕೆಲಸಗಳು ಬಾಕಿ.

ದಿನ ನಿತ್ಯ ಅಲೆದಾಟ
ಕೂಲಿದಾರರಿಗೆ, ಉದ್ಯೋಗಸ್ಥರಿಗೆ, ಕೃಷಿಕರಿಗೆ ತೊಂದರೆಯಾಗಿದ್ದು, ದೈನಂದಿನ ಕೆಲಸಗಳನ್ನು ಬಿಟ್ಟು ನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಮಳೆಗಾಲದ ಚಿಂತೆಯೂ ಜನರಲ್ಲಿ ಮನೆಮಾಡಿದೆ.

ದ‌ಕ್ಕದ ಗೌರವಧನ
2008ರಲ್ಲಿ ಭೂಮಾಪಕರಿಗೆ 11-ಇ ಸೇವೆಗಳಾದ ಜಮೀನು ಕ್ರಯ, ಕನ್ವರ್ಷನ್‌, ದಸ್ತಾವೇಜು, ಕ್ರಯ ವ್ಯವಹಾರ ಕಡತಗಳನ್ನು ಬೆಂಗಳೂರಿನಿಂದ ಆನ್‌ಲೈನ್‌ ಮೂಲಕ ಜಮೆ ಪದ್ಧತಿ ಜಾರಿಗೆ ಬಂತು. ಗೌರವ ಧನ 800 ರೂ.ಗಳಿಗೆ ಏರಿಕೆಯಾಗಿತ್ತು. ಪರವಾನಿಗೆ ಪಡೆದ ಭೂಮಾಪಕರಿಗೆ 2014ರಿಂದ ತತ್ಕಾಲ್‌ ಪೋಡಿಗೆ ಸಂಬಂಧಿಸಿದ ಗೌರವಧನ ದಕ್ಕಿಲ್ಲ. ಸರಕಾರಿ ಸರ್ವೇಯರ್‌ ಇಲ್ಲವೆಂದು ಪರವಾನಿಗೆ ಸರ್ವೇಯರ್‌ಗಳಲ್ಲಿಯೇ ಕೆರೆ, ಅಳತೆ, ರಸ್ತೆ, ಅಳತೆ, ಒಳಚರಂಡಿ ಸಮೀಕ್ಷೆ ಅಳತೆ ಎಲ್ಲ ಕೆಲಸವನ್ನು ಮಾಡಿಸಿದ್ದರು.

ತತ್‌ಕ್ಷಣ ಪರಿಹಾರ ಅಗತ್ಯ
ಭೂಮಾಪನ ವಿಭಾಗದಲ್ಲಿ ಕಡತ ವಿಲೇವಾರಿ ಆಗದೆ ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ಹಲವು ಸಮಯಗಳಿಂದ ಸಮಸ್ಯೆ ಇದ್ದು ತತ್‌ಕ್ಷಣಕ್ಕೆ ಪರಿಹಾರದ ಅಗತ್ಯವಿದೆ.
-ಸತೀಶ್‌ ಪೂಜಾರಿ, ಮಾಜಿ ಅಧ್ಯಕ್ಷ, ಬೋಳ ಗ್ರಾ.ಪಂ.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.