ಐಟಿಡಿಪಿಗೆ ವಹಿಸಲು ರಘುಪತಿ ಭಟ್ ಮನವಿ
Team Udayavani, Feb 22, 2022, 6:35 AM IST
ಬೆಂಗಳೂರು: ಕೊರಗ ಸಮುದಾಯದವರಿಗೆ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ಹಿಂದಿನಂತೆ ಐಟಿಡಿಪಿಗೆ ವಹಿಸಬೇಕು ಎಂದು ಬಿಜೆಪಿಯ ರಘುಪತಿ ಭಟ್ ಮನವಿ ಮಾಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಉಡುಪಿ, ಕುಂದಾಪುರ, ಕಾರ್ಕಳ, ಮಂಗಳೂರು, ಪುತ್ತೂರು, ಬಂಟ್ವಾಳ, ಸುಳ್ಯ ಭಾಗದಲ್ಲಿ 437 ಕೊರಗ ಸಮುದಾಯದ ಕುಟುಂಬಗಳಿಗೆ ವಸತಿ ಕಲ್ಪಿಸುವ ಯೋಜನೆ ರೂಪಿಸ ಲಾಗಿದೆ.
ಆದರೆ, ಮನೆ ನಿರ್ಮಾಣವನ್ನು ರಾಜೀವ ಗಾಂಧಿ ವಸತಿ ನಿಗಮಕ್ಕೆ ಒಪ್ಪಿಸಿರುವುದರಿಂದ ಮಾರ್ಗ ಸೂಚಿ ಪಾಲಿಸಲಾಗುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದರು.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.