ಉತ್ತರ ಕೊಡಿ ಶಾ: ಅಮಿತ್ ಶಾ ಗೆ ರಾಜ್ಯ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆ
Team Udayavani, Jan 18, 2020, 12:22 PM IST
ಬೆಂಗಳೂರು: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದೆ.
ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಾಲು ಸಾಲು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ಉತ್ತರ ಕೊಡಿ ಶಾ’ ಎಂದು ಹ್ಯಾಶ್ ಟ್ಯಾಗ್ ಮಾಡಿ ಅಮಿತ್ ಶಾ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಪ್ರಚಾರ ನಡೆಸಲು ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಇದೇ ವೇಳೆ ರಾಜ್ಯದ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತುಕತೆ ನಡೆಸುವ ಸಾಧ್ಯತೆಯಿದೆ.
‘ @AmitShah ಅವರೇ,
ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ವಿವಾದ ಬಗೆ ಹರಿಯಲಿದೆ ಎಂದಿದ್ದಿರಿ,
ಗೋವಾ ಸಿಎಂ ನೀರು ಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ @BSYBJP ಅವರಿಗೆ ಪತ್ರ ಬರೆದಿದ್ದರು.
ಇದೆಲ್ಲಾ ಕೇವಲ ಚುನಾವಣಾ ಕುತಂತ್ರವೇ?
ಇನ್ನೂ ಮಹದಾಯಿ ವಿವಾದ ಬಗೆಹರಿಸಲಿಲ್ಲವೇಕೆ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
.@AmitShah ಅವರೆ,
ಭೀಕರ ನೆರೆ ಸಮೀಕ್ಷೆಗೆ “ಗಿಮಿಕ್ ಭೇಟಿ” ಕೊಟ್ಟಿರಿ, ನಿಮ್ಮ ನೆರೆ ವೀಕ್ಷಣೆಯ ಫಲವೇನು?
ರಾಜ್ಯಕ್ಕಾಗಿರುವ ನಷ್ಟ ₹ 35,500 ಕೋಟಿ,
ಕೇಂದ್ರ ಕೊಟ್ಟಿರುವ ಪರಿಹಾರ ಚಿಲ್ಲರೆ ₹1869 ಕೋಟಿ.ರಾಜ್ಯಕ್ಕೆ ಕೇಂದ್ರದಿಂದ ಈ ರೀತಿಯ ವಂಚನೆ ಮಾಡುತ್ತಿರುವುದೇಕೆ?
ಅಗತ್ಯ ನೆರೆ ಪರಿಹಾರ ಕೊಡುವುದಿಲ್ಲವೇ?#ಉತ್ತರಕೊಡಿಶಾ— Karnataka Congress (@INCKarnataka) January 18, 2020
.@AmitShah ಅವರೆ,@BJP4Karnataka ಸರ್ಕಾರದ ಗೂಂಡಾಗಿರಿ ಮಿತಿ ಮೀರಿದೆ.
▪ಮಂಗಳೂರು ಗೋಲಿಬಾರ್
▪ಇತಿಹಾಸಕಾರ ರಾಮಚಂದ್ರ ಗುಹಾರಿಗೆ ಅವಮಾನಿಸಿದ್ದು
▪ಜ್ಯೋತಿನಿವಾಸ್ ಕಾಲೇಜ್ ಪ್ರಕರಣ
▪ಶಾಸಕ ವಿಶ್ವನಾಥ್ ಕಲಾ ಸಂಸ್ಥೆಗೆ ನುಗ್ಗಿದ್ದುಈ ಪ್ರಕರಣಗಳು, “ಗುಜರಾತ್ ಮಾದರಿ” ಅಂದರೆ ಇದೆಯೇನು?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
◼ಭಯೋತ್ಪಾದಕ ದಾವಿಂದರ್ ಸಿಂಗ್ ಬಗ್ಗೆ
ನಿಮ್ಮ ಹಾಗೂ ಪ್ರಧಾನ ಮಂತ್ರಿಯ ಮೌನವೇಕೆ?
◼ಪುಲ್ವಾಮಾ ದಾಳಿಯಲ್ಲಿ ದಾವಿಂದರ್ ಸಿಂಗ್ ಪಾತ್ರವೇನು?
◼ಈತ ಇನ್ನೂ ಅದೆಷ್ಟು ಉಗ್ರರ ಜೊತೆ ಕೈಜೋಡಿಸಿದ್ದಾನೆ?
◼ಈತನ ರಕ್ಷಣೆಗೆ ನಿಂತವರು ಯಾರು ಏಕೆ?
◼ದೇಶದ ಭದ್ರತೆಯ ಗಂಭೀರ ವಿಷಯದಲ್ಲಿ ಜನರಿಂದ ನೀವು ಏನನ್ನು ಮುಚ್ಚಿಡುತ್ತಿರುವಿರಿ?#ಉತ್ತರಕೊಡಿಶಾ— Karnataka Congress (@INCKarnataka) January 18, 2020
.@AmitShah ಅವರೆ,
ಪೌರತ್ವ ತಿದ್ದುಪಡಿಯು ಡಾ.ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ.
೧೯೫೫ ರ ಕಾಯ್ದೆಯು ಪೌರತ್ವ & ಆಶ್ರಯ ನೀಡುವುದರಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡುವುದಿಲ್ಲ.
೨೦೧೯ರ ತಿದ್ದುಪಡಿಯು ತಾರತಮ್ಯದಿಂದ ಕೂಡಿದ್ದು ಪರಿಚ್ಚೇದ ೧೪ರ ವಿರುದ್ಧವಾಗಿದೆ.
ಸಂವಿಧಾನದ ಜೊತೆ ಚೆಲ್ಲಾಟವೇಕೆ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
.@AmitShah ಅವರೇ
ಸಿಎಎ/ಎನ್ಆರ್ ಸಿ ವಿರೋಧಿಸಿ ದೇಶಾದಾಧ್ಯಂತ ೧ ತಿಂಗಳಿಂದ ನಿರಂತರವಾಗಿ, ಎಲ್ಲಾ ಜಾತಿ-ಧರ್ಮಗಳ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಜನಸಾಮಾನ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಜನಾಭಿಪ್ರಾಯದ ವಿರುದ್ಧ ಸರ್ವಾಧಿಕಾರಿ ಧೋರಣೆ ಏಕೆ?
ಬಿಜೆಪಿಯು ಪ್ರಜಾಪ್ರಭುತ್ವ & ಸಂವಿಧಾನವನ್ನು ಗೌರವಿಸುತ್ತಿಲ್ಲವೇಕೇ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
ಕೇವಲ ವರ್ಗಾವಣೆ ದಂಧೆಯಲ್ಲಿ ಮುಳುಗಿರುವ @BJP4Karnataka ಸರ್ಕಾರವು ಟೇಕ್ ಆಫ್ ಆಗಿಲ್ಲ.
◼ಬಿಜೆಪಿ ಆರೆಸ್ಸೆಸ್ ಕಿತ್ತಾಟ
◼ಮಂತ್ರಿ ಮಂಡಲ ರಚನೆಗೆ ನಿಮ್ಮ ತಡೆ ಮತ್ತು ದಬ್ಬಾಳಿಕೆ
◼ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರುಗಳ ಹೊಂದಾಣಿಕೆ ಕೊರತೆಯಿಂದ
ರಾಜ್ಯದ ಅಭಿವೃದ್ಧಿ ಕುಂಠಿತ ಗೊಳಿಸುತ್ತಿರುವುದೇಕೆ?#ಉತ್ತರಕೊಡಿಶಾ— Karnataka Congress (@INCKarnataka) January 18, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ