ಸ್ಥಳದಿಂದ ಕದಲದ ಡಿಕೆಶಿ; ಹೊಟೇಲ್ ಎದುರೇ ಬ್ರೇಕ್ ಫಾಸ್ಟ್
ಇಲ್ಲೆ ಬಿದ್ದು ಹೋದರೂ ಚಿಂತೆ ಇಲ್ಲ....ರೆಬೆಲ್ಗಳ ಭೇಟಿಗಾಗಿ ಪಟ್ಟು
Team Udayavani, Jul 10, 2019, 12:21 PM IST
ಮುಂಬಯಿ : ರಾಜ್ಯದ ರೆಬೆಲ್ ಶಾಸಕರು ತಂಗಿರುವ ರಿನೈಸೆನ್ಸ್ ಹೊಟೇಲ್ ಎದುರು ರಾಜಕೀಯ ಹೈಡ್ರಾಮ ಮುಂದುವರಿದಿದ್ದು, ಇಡೀ ದೇಶದ ಮಾಧ್ಯಮಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸಚಿವ ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರ ಭೇಟಿಗೆ ಅವಕಾಶ ಸಿಗದ ಹಿನ್ನಲೆಮಳೆಯನ್ನೂ ಲೆಕ್ಕಿಸದೆ ಹೊಟೇಲ್ ಗೇಟ್ ನ ಎದುರು ಕದಲದೆ ಕುಳಿತಿದ್ದಾರೆ.
ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ತಿಂಡಿಯನ್ನೂ ಸೇವಿಸದೆ ತೆರಳಿದ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೊಟೇಲ್ ಪ್ರವೇಶಿಸಲು ಪೊಲೀಸರು ತಡೆ ಒಡ್ಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಇದ್ದ ಸಚಿವರಾದ ಜಿ.ಟಿ.ದೇವೇಗೌಡ, ಶಾಸಕ ಶಿವಲಿಂಗೇ ಗೌಡ ಅವರಿಗೂ ಹೊಟೇಲ್ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ.
ಕಾಫಿ, ತಿಂಡಿ ರಸ್ತೆಯಲ್ಲೇ...
ನಾನು ಅತೃಪ್ತ ಶಾಸಕರನ್ನು ಭೇಟಿಯಾಗಿಯೇ ಮರಳುವುದು ಎಂದು ಪಟ್ಟು ಹಿಡಿದು ಕುಳಿತಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಳಗ್ಗೆ ಕಾಫಿಯನ್ನು ರಸ್ತೆಯಲ್ಲೇ ಕುಡಿದಿದ್ದಾರೆ. 10 ಗಂಟೆಯ ಬಳಿಕ ಹಸಿವಾಗುತ್ತಿದೆ ಎಂದು ಹೇಳಿದಾಗ ಮುಂಬಯಿ ಪೊಲೀಸರು ಇಡ್ಲಿ,ವಡೆ ಮತ್ತುಟೀ ತಂದು ಕೊಟ್ಟಿದ್ದು ಅದನ್ನೂ ಸೇವಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಕುರ್ಚಿಗಳನ್ನು ತಂದು ಕೊಡಲಾಗಿದ್ದು ಸ್ಥಳದಿಂದ ಕದಲದೆ ಪಟ್ಟು ಹಿಡಿದು ಕುಳಿತಿದ್ದಾರೆ.
ನಾನು ಯಾವುದುಕ್ಕೂ ಜಗ್ಗುವುದಿಲ್ಲ, ಶಾಸಕರು ನಮ್ಮವರು ಅವರ ಬಳಿ ಮಾತನಾಡಿಯೇ ತೆರಳುತ್ತೇನೆ. ಇಲ್ಲೆ ಬಿದ್ದು ಹೋದರು ಚಿಂತೆ ಇಲ್ಲ ಎಂದು ಹೇಳಿದ್ದಾರೆ.
ಬುಕ್ ಮಾಡಿದ್ದ ರೂಂ ಕ್ಯಾನ್ಸಲ್
ಡಿ.ಕೆ.ಶಿವಕುಮಾರ್ ಅವರು ರಿನೈಸೆನ್ಸ್ ಹೊಟೇಲ್ ಗೆ ಆನ್ಲೈನ್ನಲ್ಲಿ ಬುಕ್ ಮಾಡಿದ್ದ ರೂಂ ಅನ್ನು ಕ್ಯಾನ್ಸಲ್ ಮಾಡಲಾಗಿದ್ದು, ಈ ಬಗ್ಗೆ ತಾಳ್ಮೆಯಲ್ಮೆ ಉತ್ತರ ನೀಡಿದ್ದಾರೆ. ಅವರು ನನ್ನಂತಹ ಗ್ರಾಹಕನ ಬಗ್ಗೆ ಹೆಮ್ಮೆ ಪಡಬೇಕು. ನಾನು ಮುಂಬಯಿಯನ್ನು ಇಷ್ಟಪಡುತ್ತೇನೆ. ಈ ಹೊಟೇಲನ್ನು ಮೆಚ್ಚುತ್ತೇನೆ. ಅವರು ಕ್ಯಾನ್ಸಲ್ ಮಾಡಿರಬಹುದು. ನನಗೆ ಬೇರೆ ರೂಂಗಳಿವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್