ಐಸ್ ಕ್ರೀಮ್ ಸೇವಿಸಿ ಮಗ,ಸಹೋದರಿ ಸಾವು:ನೈಜ ಕಾರಣ ಗೊತ್ತಿದ್ರೂ ತಾಯಿ ಸುಮ್ಮನಿದ್ದಿದ್ದೇಕೆ ?
Team Udayavani, Feb 25, 2021, 10:00 PM IST
ಕೇರಳ : ತಾಯಿಯೋರ್ವಳು ಆತ್ಮಹತ್ಯೆಗೆಂದು ತಂದಿಟ್ಟಿದ್ದ ವಿಷಮಿಶ್ರಿತ ಐಸ್ ಕ್ರೀಮ್ ಸೇವಿಸಿ ಆಕೆಯ ಪುತ್ರ ಹಾಗೂ ಸಹೋದರಿ ಪ್ರಾಣ ಕಳೆದುಕೊಂಡ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಡ್ ನಲ್ಲಿ ನಡೆದಿದೆ.
ಫೆ.11 ರಂದು 25 ವರ್ಷ ವಯಸ್ಸಿನ ವರ್ಷಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಐಸ್ ಕ್ರೀಮ್ ನಲ್ಲಿ ಇಲಿ ಪಾಷಾಣ ಬೇರೆಸಿ ಸ್ವಲ್ಪ ಸೇವಿಸಿ ಟೇಬಲ್ ಮೇಲಿಟ್ಟು ಬಾತ್ ರೂಂಗೆ ತೆರಳಿದ್ದಳು. ಈ ವೇಳೆ ಆಕೆಯ 5 ವರ್ಷದ ಪುತ್ರ ಅದ್ವೈತ್ ಹಾಗೂ ಆಕೆಯ ಸಹೋದರಿ 19 ವರ್ಷದ ದೃಶ್ಯಾ ಅದೇ ಐಸ್ ಕ್ರೀಮ್ ತಿಂದಿದ್ದರು. ಬಳಿಕ ಮನೆಯವರೆಲ್ಲರು ಬಿರಿಯಾನಿ ತಿಂದು ಮಲಗಿದ್ದರು.
ರಾತ್ರಿ ವೇಳೆ ಅದ್ವೈತ್ ಹಾಗೂ ದೃಶ್ಯಾ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ ಶುರುವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಫೆ.12 ರ ಮುಂಜಾನೆ ಆ ಬಾಲಕ ಸಾವನ್ನಪ್ಪಿದ್ದ. ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ದೃಶ್ಯಾ ನಿನ್ನೆ (ಫೆ.24) ಮುಂಜಾನೆ ಅಸುನೀಗಿದ್ದಳು. ಬಿರಿಯಾನಿ ತಿಂದಿದ್ದರಿಂದಲೇ ಈ ಸಾವು ಸಂಭವಿಸಿರಬಹುದು ಎಂದು ಎಲ್ಲರ ಊಹೆಯಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಇಲಿ ಪಾಷಾಣ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.
ಸುಮ್ಮನಿದ್ದಳೇಕೆ ವರ್ಷಾ :
ವರ್ಷಾ ವಿಷಮಿಶ್ರಿತ ಐಸ್ ಕ್ರೀಮ್ ಹೆಚ್ಚು ತಿಂದಿರಲಿಲ್ಲ. ಹೀಗಾಗಿ ಅವಳಿಗೆ ಏನೂ ತೊಂದರೆ ಯಾಗಿರಲಿಲ್ಲ. ತನ್ನ ಮಗ ಹಾಗೂ ತಂಗಿ ಐಸ್ ಕ್ರೀಮ್ ತಿಂದು ಅಸ್ವಸ್ಥಗೊಂಡಿದ್ದರೂ ಕೂಡ ವರ್ಷಾ ಸತ್ಯ ಬಾಯಿ ಬಿಟ್ಟಿರಲಿಲ್ಲ. ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯ ಬಹಿರಂಗವಾದೀತು ಎನ್ನುವ ಭಯದಲ್ಲಿ ಸುಮ್ಮನಿದ್ದಳು. ಮಗ ಹಾಗೂ ಸಹೋದರಿಯ ಪೋಸ್ಟ್ ಮಾರ್ಟಂ ವರದಿ ನಂತರ ಐಸ್ ಕ್ರೀಮ್ ನಲ್ಲಿ ಇಲಿ ಪಾಷಾಣ ಬೇರೆಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂಬುದನ್ನು ಹೊರಹಾಕಿಲ್ಲ.
ಗಂಡನ ಮನೆಯಿಂದ ತಾಯಿ ಜತೆಗೆ ಇರಲು ಕನ್ಹಂಗಡ್ ಗೆ ಬಂದಿದ್ದ ವರ್ಷಾ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದು ಏಕೆ ಎನ್ನುವ ಪ್ರಶ್ನೆ ಅವರ ಮನೆಯವರಲ್ಲಿ ಉದ್ಭವಿಸಿದೆ. ಸದ್ಯ ಪೊಲೀಸರು ವರ್ಷಾ ವಿರುದ್ಧ ದೂರು ದಾಖಲಿಸಿಕೊಂಡು ತಮ್ಮ ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ