ಕಿನ್ನಿಗೋಳಿ: ಹಳೆ ದ್ವೇಷ ಹಿನ್ನೆಲೆ ದಂಪತಿಯ ಬರ್ಬರ ಹತ್ಯೆ
Team Udayavani, Apr 29, 2020, 11:51 AM IST
ಕಿನ್ನಿಗೋಳಿ : ಚೂರಿಯಿಂದ ಇರಿದು ದಂಪತಿಗಳ ಬರ್ಬರ ಹತ್ಯೆ ಮಾಡಿದ ಘಟನೆ ಕಿನ್ನಿಗೋಳಿ ಬಳಿಯ ಏಳಿಂಜೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ನಿವೃತ್ತ ಸೈನಿಕ ವಿನ್ಸೇಂಟ್ ಡಿಸೋಜ ಮತ್ತು ಪತ್ನಿ ಹೆಲೆನಾ ಡಿಸೋಜ ಎಂದು ತಿಳಿದುಬಂದಿದೆ.
ಕೊಲೆ ಆರೋಪಿ ನೆರೆಮನೆಯ ಅಲ್ಪೋನ್ಸೋ ಸಲ್ಡಾನ ಹಳೆ ದ್ವೇಷದ ಹಿನ್ನೆಲೆಯಲ್ಲಿ ಚೂರಿಯಿಂದ ಇರಿದಿದ್ದು ಇದರಲ್ಲಿ ವಿನ್ಸೇಂಟ್ ಡಿಸೋಜ ಸ್ಥಳದಲ್ಲೇ ಸಾವನ್ನಪಿದ್ದರೆ ಪತ್ನಿ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಮೂಲ್ಕಿ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.