ಕೊಳ್ಳೇಗಾಲ : ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ ಪ್ರಕರಣ : ಐವರು ಆರೋಪಿಗಳ ಬಂಧನ
Team Udayavani, Jun 12, 2022, 11:06 PM IST
ಕೊಳ್ಳೇಗಾಲ : ಕೊಳ್ಳೇಗಾಲ ತಾಲ್ಲೂಕಿನ ಶಿವನ ಸಮುದ್ರ ಬಳಿ ಇರುವ ದರ್ಗಾದ ಹಿಂಭಾಗ ಕಳೆದ 31 ರಂದು ವಕ್ತಿಯನ್ನು ಕಲ್ಲಿನಿಂದ ಜಿಜ್ಜಿ ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಐವರನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಶಿವಕುಮಾರ್, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಸೈಯದ್ ಸಿಕಂದರ್, ಮುಸಾವೀರ್, ಶೌಕತ್ ಸಾಫ, ಹಬೀಬ್ ಎಲ್ಲಾ, ಸೈಯದ್ ಸಲೀಂ. ಐವರನ್ನು ಬಂಧಿಸಲಾಗಿದೆ ಎಂದರು.
ಕೊಲೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ಎ.ಎಸ್.ಪಿ ಸುಂದರ್ ರಾಜು ನೇತೃತ್ವದಲ್ಲಿ ಡಿ ವೈ ಎಸ್.ಪಿ.ನಾಗರಾಜು. ಸಿ.ಪಿ.ಐ.ಶಿವರಾಜು.ಎಸ್.ಐ. ಜೀತನ್’ ಮಂಜುನಾಥ್. ವೀರಣ್ಣ ಆರಂದ್ಯ ಮತ್ತು ಸಿಬಂದಿಗಳ ನಿಯೋಜನೆಯ ತಂಡ ಬಿರುಸಿನ ಕಾರ್ಯ ಚರಣೆ ನಡೆಸಿ ಆರೋಪಿಗಳನ್ನು ರಾಮನಗರದಲ್ಲಿ ಬಂದಿಸಿದ್ದಾರೆ.
ಆರೋಪಿ ಸೈಯದ್ ಸಿಕಂದರ್ ರವರ ಪತ್ನಿಯೊಂದಿಗೆ ಮೃತ ಆಟೋ ಚಾಲಕ, ಸೈಯದ್ ಆರೀಪ್ ಪಾಷ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ.