ತಮಿಳುನಾಡಿನಲ್ಲಿ ಕೊಂಗುನಾಡು ಸದ್ದು : ಏನಿದು ಕೊಂಗುನಾಡು?
ಕೇಂದ್ರ ಸರಕಾರದಿಂದ ಕೇಂದ್ರಾಡಳಿತದ ಹೊಸ ದಾಳ?
Team Udayavani, Jul 11, 2021, 7:10 AM IST
ಚೆನ್ನೈ: “ಕೇಂದ್ರ’ ಸರಕಾರ ಪದ ಬಳಕೆ ಮಾಡದೆ “ಒಕ್ಕೂಟ’ ಸರಕಾರ ಎಂಬ ಸಂಬೋಧನೆಗೆ ಮುಂದಾಗಿರುವ ತಮಿಳುನಾಡು ಸರಕಾರಕ್ಕೆ ಬಿಜೆಪಿ ಕೇಂದ್ರಾಡಳಿತದ ಶಾಕ್ ನೀಡಲಿದೆಯೇ?
ಕೇಂದ್ರ ಸಚಿವ ಸಂಪುಟ ಪುನಾರಚನೆಯ ಅನಂತರ “ಕೊಂಗುನಾಡು’ ಪದದ ಬಗ್ಗೆ ಭಾರೀ ಊಹಾಪೋಹ ಎದ್ದಿದೆ. ಈ ಬಗ್ಗೆ ಕೇಂದ್ರ ತುಟಿ ಬಿಚ್ಚಿಲ್ಲ. ಆದರೆ ಕೇಂದ್ರದ ನೂತನ ಸಚಿವ, ತಮಿಳುನಾಡು ಮೂಲದ ಎಲ್. ಮುರುಗನ್ ತನ್ನ ಪರಿಚಯ ವಿವರದಲ್ಲಿ ತಾನು “ತಮಿಳುನಾಡಿನ ಕೊಂಗುನಾಡಿನಿಂದ ಬಂದವನು’ ಎಂದು ಉಲ್ಲೇಖೀಸಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಎಐಎಡಿಎಂಕೆ, ಬಿಜೆಪಿ ಬಲಿಷ್ಠ
ಈ ಭಾಗದಲ್ಲಿ ಎಐಎಡಿಎಂಕೆ ಪ್ರಬಲವಾಗಿದೆ. 75 ವಿಧಾನಸಭಾ ಸ್ಥಾನಗಳಲ್ಲಿ ಎಐಎಡಿಎಂಕೆ 40ರಲ್ಲಿ ಗೆದ್ದಿದೆ. ಬಿಜೆಪಿ ಕೂಡ ಬಲಿಷ್ಠವಾಗಿದೆ. ತಮಿಳುನಾಡು ಬಿಜೆಪಿಯ ಅಧ್ಯಕ್ಷ ಕೆ. ಅಣ್ಣಾಮಲೈ ಇದೇ ಭಾಗದವರು. ಹೀಗಾಗಿ ಕೇಂದ್ರ ಸರಕಾರವು ಈ ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಬಹುದು ಎಂದು ಸ್ಥಳೀಯ ಪತ್ರಿಕೆಯೊಂದು ವಿಶ್ಲೇಷಿಸಿದೆ.
ಪುದುಚೇರಿ ಮಾದರಿ
ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ, ಪುದುಚೇರಿಯಲ್ಲಿ ಮಾತ್ರ ಬಿಜೆಪಿ ಸರಕಾರವಿದೆ. ಒಂದು ವೇಳೆ ತಮಿಳುನಾಡಿನಲ್ಲಿರುವ ಈ ಭಾಗವನ್ನು ಪ್ರತ್ಯೇಕಿಸಿದರೆ ಇಲ್ಲೂ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಬಹುದು ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
MUST WATCH
ಹೊಸ ಸೇರ್ಪಡೆ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ