ಕೊರಟಗೆರೆ : ಈಜು ಬಾರದೆ ಕೆರೆಯಲ್ಲಿ ಮುಳುಗಿ ಬಿ.ಫಾರ್ಮ ವಿದ್ಯಾರ್ಥಿ ಸಾವು
Team Udayavani, Sep 18, 2022, 1:49 PM IST
ಕೊರಟಗೆರೆ : ಕೆರೆಯಲ್ಲಿ ಮುಳುಗಿ ಬಿ ಪಾರ್ಮಾ ವಿದ್ಯಾರ್ಥಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಪಟ್ಟಣದ ಹುಮಂತಪುರ ಹೊಸಕೆರೆಯಲ್ಲಿ ಸಂಭವಿಸಿದೆ.
ಮಹಾರಾಷ್ಟ್ರ ಮೂಲದ ಬಿ ಪಾರ್ಮಾ ವಿದ್ಯಾರ್ಥಿಯಾದ ಗೌತಮ್ ಸಿಂಗ್(21) ಮೃತಪಟ್ಟ ದುರ್ದೈವಿ.
ಬಿ ಪಾರ್ಮಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗೌತಮ್ ಸಿಂಗ್ ತನ್ನ 12 ಜನ ಸ್ನೇಹಿತರ ಜೊತೆಗೆ ಹೊಸಕೆರೆಗೆ ಹೋಗಿದ್ದಾರೆ, ಈ ವೇಳೆ ಹನ್ನೆರಡು ಮಂದಿ ಕೆರೆಗೆ ಈಜಲು ಇಳಿದಿದ್ದಾರೆ ದುರಾದೃಷ್ಟ ಎಂದರೆ ಹನ್ನೆರಡು ಮಂದಿಯಲ್ಲಿ ಇಬ್ಬರಿಗೆ ಮಾತ್ರ ಈಜು ಬರುತ್ತಿತ್ತು ಎನ್ನಲಾಗಿದೆ. ಈ ವೇಳೆ ಕೆರೆಯಲ್ಲಿ ಗೌತಮ್ ಈಜಿಕೊಂಡು ಕೆರೆಯಲ್ಲಿ ಮುಂದೆ ಮುಂದೆ ಹೋಗಿ ನೀರಿನಲ್ಲಿ ಮುಳುಗಿದ್ದಾನೆ.
ಘಟನಾ ಸ್ಥಳಕ್ಕೆ ಕೊರಟಗೆರೆಯ ಅಗ್ನಿಶಾಮಕ ಠಾಣಾ ಅಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿಗಳು ಬೋಟ್ ಸಹಾಯದಿಂದ ವಿದ್ಯಾರ್ಥಿಯ ಹುಡುಕಾಟ ನಡೆಸಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೊರಟಗೆರೆ ಪೋಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಗಳಾದ ಯೋಗೀಶ್ ಮತ್ತು ರಾಮಚಂದ್ರಯ್ಯ ಅವರು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಪಿಎಸ್ಐ ನಾಗರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಚರಣೆ ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಗೋಮಾಂಸ ಸಾಗಿಸಿದ ಬೈಕ್ ಸುಟ್ಟುಹಾಕಿದ ಸಾರ್ವಜನಿಕರು