ದೇವಸ್ಥಾನ, ಶಾಲೆಗಳ ಕಾಣಿಕೆ ವಾಪಸು


Team Udayavani, Jan 16, 2022, 2:30 AM IST

ದೇವಸ್ಥಾನ, ಶಾಲೆಗಳ ಕಾಣಿಕೆ ವಾಪಸು

ಉಡುಪಿ: ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಜ. 10ರ ಬಳಿಕ ಕಾರ್ಯಬಾಹುಳ್ಯದಿಂದ ಕೂಡಿದ್ದಾರೆ. ಪರ್ಯಾಯ ಪೀಠವೇರುವ ಸ್ವಾಮೀಜಿಯವರನ್ನು ವಿವಿಧೆಡೆ ಆಹ್ವಾನಿಸಿ ಸತ್ಕರಿಸುವ ಸಂಪ್ರದಾಯ ವಿದೆ. ಹೀಗೆ ಸ್ವಾಮೀಜಿಯವರನ್ನು ವಿವಿಧ ದೇವಸ್ಥಾನಗಳವರು, ವಿದ್ಯಾಲಯಗಳವರು ಕರೆಯುತ್ತಿದ್ದಾರೆ. ಸ್ವಾಮೀಜಿಯವರನ್ನು ಆಹ್ವಾನಿಸಿದಾಗ ಕಾಣಿಕೆ ಸಮರ್ಪಿಸುವುದು ವಾಡಿಕೆ. ಆದರೆ ಕೃಷ್ಣಾಪುರ ಶ್ರೀಗಳು ದೇವಸ್ಥಾನಗಳು, ವಿದ್ಯಾ ಸಂಸ್ಥೆಗಳಿಗೆ ಹೋದಾಗ ಕೊಡುವ ಕಾಣಿಕೆಗಳನ್ನು ಅಲ್ಲಿಯೇ ವಿನಿಯೋಗಿಸಲು ಕೊಟ್ಟು ಬರುತ್ತಿದ್ದಾರೆ. ಸಂಸ್ಥೆಗಳ ಮುಖ್ಯಸ್ಥರು ಇದನ್ನು ಘೋಷಿಸುವಾಗ ಏನೂ ಆಗಿಯೇ ಇಲ್ಲವೆಂಬಂತೆ ಸ್ವಾಮೀಜಿಯವರು ಇನ್ನೊಂದು ಕಡೆಗೆ ತೆರಳುವ ತರಾತುರಿಯಲ್ಲಿ ಹೊರಟಿರುತ್ತಾರೆ.

“ನಾನು ಮಠಕ್ಕೆ ಸೇರಿ ಎರಡು ಮೂರು ವರ್ಷಗಳಾಗಿವೆ. ಎರಡು ಮೂರು ವರ್ಷಗಳಿಂದಲೂ ದೇವಸ್ಥಾನಗಳು, ಶಾಲೆಗಳಿಗೆ ಹೋದರೆ ಅಲ್ಲಿ ಕೊಡುವ ಕಾಣಿಕೆಯನ್ನು ಅಲ್ಲಿಯೇ ವಿನಿಯೋಗಿಸಲು ಬಿಟ್ಟು ಬರುತ್ತಿದ್ದಾರೆ’ ಎಂದು ಸ್ವಾಮೀಜಿಯವರ ಆಪ್ತ ಸಿಬಂದಿ ಮಂಜುನಾಥ್‌ ಹೇಳುತ್ತಾರೆ.

ಇದನ್ನೂ ಓದಿ:ಪರ್ಯಾಯೋತ್ಸವ: ಕಂಗೊಳಿಸುತ್ತಿರುವ ಉಡುಪಿ

ಆನೆ ಲಾಯದ ಗುರುತು
ಹಿಂದೆ ಎಲ್ಲ ಮಠಗಳಲ್ಲಿಯೂ ಆನೆಗಳನ್ನು ಸಾಕುತ್ತಿದ್ದರು. ಕೆಲವು ಮಠಗಳಲ್ಲಿ ಎರಡೆರಡು ಆನೆಗಳು ಇದ್ದವು. ಆಗಿನ ವಾತಾವರಣವೇ ಬೇರೆ, ಈಗಿನ ವಾತಾವರಣವೇ ಬೇರೆ. ಆಗ ರಥಬೀದಿ ಸುತ್ತ ಗದ್ದೆಗಳು ಇದ್ದರೆ, ಈಗ ಕಾಂಕ್ರೀಟ್‌ ಕಟ್ಟಡಗಳು ಇವೆ. ಈಗ ಆನೆಗಳನ್ನು ಸಾಕಿದರೆ ಅವುಗಳ ಆರೋಗ್ಯ ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಕಷ್ಟಸಾಧ್ಯ. ಅವುಗಳಿಗೆ ಬೇಕಾದ ಹಸುರು ಆಹಾರದ ಪೂರೈಕೆಯೂ ಸಾಧ್ಯವಿಲ್ಲ. ಕೃಷ್ಣಾಪುರ ಮಠದಲ್ಲಿ ಆನೆ ಕಟ್ಟುತ್ತಿದ್ದ ಆನೆ ಲಾಯ ಮಾತ್ರ ಹಾಗೆಯೇ ಇದೆ. ಇದನ್ನು ಆನೆ ಲಾಯದ ಪಳೆಯುಳಿಕೆ ಎನ್ನಬಹುದು.

ಎರಡು ಪಟ್ಟದ ದೇವರು
ಆಚಾರ್ಯ ಮಧ್ವರು ತಮ್ಮ ಶಿಷ್ಯರಿಗೆ ಉಪಾಸನೆಗೋಸ್ಕರ ಒಂದೊಂದು ದೇವತಾ ವಿಗ್ರಹವನ್ನು ನೀಡಿದ್ದರು. ಅದರಂತೆ ಮುಂದೆ ಕೃಷ್ಣಾಪುರ ಮಠದ ಆದ್ಯಯತಿ ಶ್ರೀಜನಾರ್ದನತೀರ್ಥರಿಗೆ ಮಧ್ವರು ಕೊಟ್ಟದ್ದು ದ್ವಿಭುಜ ಕಾಲಿಂಗ ಮರ್ದನ ಕೃಷ್ಣ. ಇದರ ಜತೆ ಜನಾರ್ದನ ತೀರ್ಥರು ಇಷ್ಟಪಟ್ಟು ಉಪಾಸನೆಗೋಸ್ಕರ ನರಸಿಂಹ ದೇವರ ವಿಗ್ರಹವನ್ನೂ ಬಯಸಿ ಪಡೆದಿದ್ದಾರೆ. ಹೀಗೆ ಎರಡು ಪಟ್ಟದ ದೇವರನ್ನು ಕೃಷ್ಣಾಪುರ ಮಠ ಹೊಂದಿದೆ.

ಟಾಪ್ ನ್ಯೂಸ್

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.