ಸಹಕಾರ ಸಾರಿಗೆ ಮಾರ್ಗದಲ್ಲಿ ಓಡಲಿವೆ ಕೆಎಸ್ಆರ್ಟಿಸಿ ಬಸ್
Team Udayavani, Feb 18, 2020, 9:46 PM IST
ಬೆಂಗಳೂರು: ಸಹಕಾರ ಸಾರಿಗೆ ಬಸ್ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದಿರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ವು ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಬಸ್ ಸೇವೆ ಕಲ್ಪಿಸಿದೆ.
ಕೊಪ್ಪದಿಂದ ಶಿವಮೊಗ್ಗ, ತೀರ್ಥಹಳ್ಳಿ, ಮೇಲ್ವಾರ್, ಬಾಳೇಹೊನ್ನೂರು, ಮೂಡಬೂರು, ಮಲ್ಲಂದೂರು, ಕಟ್ಟಿನಮನೆ, ಶೃಂಗೇರಿ-ಕೊಪ್ಪ-ಶಿವಮೊಗ್ಗ, ಉಡುಪಿ-ಶೃಂಗೇರಿ-ಕೊಪ್ಪ, ಉಡುಪಿ-ಕೊಪ್ಪ-ಬೀರೂರು ಮಾರ್ಗಗಳಲ್ಲಿ 16 ಬಸ್ಗಳು 56 ಟ್ರಿಪ್ ಕಾರ್ಯಾಚರಣೆ ಮಾಡಲಿವೆ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ಗಳನ್ನು ಕಲ್ಪಿಸಲು ನಿಗಮ ಸಿದ್ಧವಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.