ಕುಂದಾಪುರ; ಒಂದೇ ದಿನ ಅಣ್ಣ-ತಂಗಿ ಸಾವು
ಇವರಿಬ್ಬರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರೂ, ಅಕ್ಕ-ಪಕ್ಕದಲ್ಲೇ ಮನೆಯಿತ್ತು.
Team Udayavani, Jul 28, 2021, 10:22 AM IST
ಕುಂದಾಪುರ/ಸಿದ್ದಾಪುರ, ಜು.27: ಅಣ್ಣ ಹಾಗೂ ತಂಗಿ ಒಂದೇ ದಿನ ಸಾವನ್ನಪ್ಪಿದ ಘಟನೆ ಸೋಮವಾರ ಬೆಳ್ವೆ ಗ್ರಾಮದ ಮಾರಿಕೊಡ್ಲು ಮದ್ದಗದ ದಂಡೆಯಲ್ಲಿ ಸಂಭವಿಸಿದೆ. ಬೆಳ್ವೆಯ ಸಮೀಪದ ಹೆದ್ದಾರಿ ಜೆಡ್ಡು ನಿವಾಸಿ ಸುಬ್ಬಣ್ಣ ನಾಯ್ಕ್ (65) ಹಾಗೂ ಅವರ ತಂಗಿ ಗಿರಿಜಾ (60) ಸಾವನ್ನಪ್ಪಿದವರು.
ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಂಗಿ ಗಿರಿಜಾ ಅವರು ಹೃದಯಾಘಾತದಿಂದ ಮನೆ ಯಲ್ಲಿಯೇ ಸಾವನ್ನಪ್ಪಿದ್ದು, ಅದೇ ಆಘಾತ ಹಾಗೂ ನೋವಿನಿಂದ ಸಂಜೆ 7 ಗಂಟೆಯ ಸುಮಾರಿಗೆ ಅವರ ಅಣ್ಣ ಸುಬ್ಬಣ್ಣ ಅವರು ಸಹ ಹೃದಯಾಘಾತದಿಂದ ಹಾಲಾಡಿಯ
ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರಿಬ್ಬರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರೂ, ಅಕ್ಕ-ಪಕ್ಕದಲ್ಲೇ ಮನೆಯಿತ್ತು.
ಗಿರಿಜಾ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿರುವಾಗ ಸಹೋದರ ಸುಬ್ಬಣ್ಣ ಅವರು ಹೃದಯಾಘಾತಕ್ಕೆ ಒಳಗಾದರು. ಕೂಡಲೇ ಅವರನ್ನು ಹಾಲಾಡಿ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಗಿರಿಜಾ ಅವರ ಅಂತ್ಯಕ್ರಿಯೆ ಮುಗಿದ ಬಳಿಕ ಪಕ್ಕದಲ್ಲಿ ಸುಬ್ಬಣ್ಣ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ಸಾವಿನ ಸುಳಿಯ ದುರಂತ ಕುಟುಂಬ
ಈ ಕುಟುಂಬ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಸಾವುಗಳನ್ನು ಕಂಡಿದೆ. ಎಲ್ಲ ಸಾವುಗಳು ಆಕಸ್ಮಿಕ ಮರಣಗಳಾಗಿವೆ. ಗಿರಿಜಾ ಬಾೖ ಅವರ ಪತಿ ಆಕಸ್ಮಿಕವಾಗಿ ಮರಣ ಹೊಂದಿದ್ದರು. ಮಗ ವಸಂತ ಕೂಡ ಹೆಬ್ರಿ ಹತ್ತಿರ ಚಾರ ಹೊಳೆಯಲ್ಲಿ ಕಾಲು ಜಾರಿ ಮೃತಪಟ್ಟಿದ್ದರು. ಈಗ ಎಲ್ಲರನ್ನು ಕಳೆದುಕೊಂಡಿರುವ ಒಬ್ಬ ಮಗ ಅನಂತ ಅವರು ಏಕಾಂಗಿಯಾಗಿದ್ದಾರೆ. ಸುಬ್ಬಣ್ಣ ನಾಯ್ಕ ಅವರಿಗೆ ಮೂವರು ಪುತ್ರಿಯರು ಮತ್ತು ಇಬ್ಬರು ಪುತ್ರರು. ಪುತ್ರ ಸತೀಶ ಅವರು ಧರ್ಮಸ್ಥಳದಲ್ಲಿ
ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿದ್ದರು. ಸತೀಶ ಅವರಿಗೆ ಮದುವೆಯಾಗಿ ಮಗು ಕೂಡ ಇದೆ. ಸುಬ್ಬಣ್ಣ ನಾಯ್ಕ ಅವರ ಅಣ್ಣ ಮಲ್ಲು ನಾಯ್ಕ ಅವರು ಪ್ಯಾರೆಲಿಸ್ನಿಂದ ಕಳೆದ 3 ವರ್ಷದ ಹಿಂದೆ ಮೃತಪಟ್ಟಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ