ಕಟಪಾಡಿ: ಬ್ಯಾರಿಕೇಡ್ -ಸರ್ವೀಸ್ ರಸ್ತೆಯ ಗುಂಡಿಗೆ ಮುಕ್ತಿ: ಹೆದ್ದಾರಿ ಇಲಾಖೆಯಿಂದ ಸ್ಪಂದನೆ
Team Udayavani, Apr 25, 2021, 6:00 AM IST
ಕಟಪಾಡಿ: ಮಂಗಳೂರಿನತ್ತ ತೆರಳುವ ಪೂರ್ವ ಪಾರ್ಶ್ವದ ಸರ್ವೀಸ್ ರಸ್ತೆಯಲ್ಲಿ ಕಳೆದ ಸುಮಾರು 8 ತಿಂಗಳಿನಿಂದ ಸೃಷ್ಟಿಯಾಗಿದ್ದ ದೊಡ್ಡ ಗಾತ್ರದ ಗುಂಡಿಯೊಂದನ್ನು ಹೆದ್ದಾರಿ ಇಲಾಖೆಯು ಎ.24ರಂದು ಡಾಮರೀಕರಣ ನಡೆಸಿದ್ದು, ಆ ಮೂಲಕ ಈ ಭಾಗದಲ್ಲಿ ತಲೆದೋರಿದ್ದ ಗುಂಡಿಯನ್ನು ಮುಚ್ಚಿ ಇಲ್ಲಿ ಇಡಲಾಗಿದ್ದ ಬ್ಯಾರಿಕೇಡ್ಗೆ ಮುಕ್ತಿಯನ್ನು ಕಲ್ಪಿಸಿದೆ.
ಸದಾ ವಾಹನ ದಟ್ಟಣೆ, ಜನನಿಬಿಡ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಬಳಿಯಲ್ಲಿನ ಈ ರಸ್ತೆಯು ಬಸ್ಗಳ ತಂಗುದಾಣವನ್ನು ಹೊಂದಿದ್ದು, ಸದಾ ವಾಹನ, ಜನದಟ್ಟಣೆಯಿಂದ ಕೂಡಿದ್ದು, ಈ ಗುಂಡಿಯಿಂದಾಗಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ತ್ಯಾಜ್ಯದ ಗುಂಡಿಯಾಗಿಯೂ ಪರಿವರ್ತನೆ ಗೊಳ್ಳುತ್ತಿದೆ. ಜನ ಸಂಚಾರಕ್ಕೂ ತೊಡಕು ಉಂಟಾಗುತ್ತಿದೆ ಎಂಬ ಸಾರ್ವಜನಿಕರ, ವಾಹನ ಸವಾರರ ದೂರಿನ ಬಗ್ಗೆ ಜನಪರ ಕಾಳಜಿಯ ವರದಿಯನ್ನು “ಉದಯವಾಣಿ ಸುದಿನವು’ ಎ.22ರಂದು
ಪ್ರಕಟಿಸಿತ್ತು.
ಈ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿದ ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣ ಗುತ್ತಿಗೆದಾರರ, ಇಲಾಖಾಧಿಕಾರಿಗಳ ತುರ್ತು ಸ್ಪಂದನೆಗೆ ವಾಹನ ಸವಾರರು, ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ