ಕುಷ್ಟಗಿ: 2 ಲಕ್ಷ ರೂ. ನಗದು ಕರ್ಣಾಟಕ ಬ್ಯಾಂಕ್ ಮುಂದೆ ಕಳವು !
Team Udayavani, Jun 30, 2022, 1:56 PM IST
ಕುಷ್ಟಗಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕುಷ್ಟಗಿ ಶಾಖೆಯ ಬ್ಯಾಂಕಿನಲ್ಲಿ ವ್ಯಕ್ತಿಯೋರ್ವ ಡ್ರಾ ಮಾಡಿದ್ದ 2,16,500 ರೂ. ನಗದು ಕರ್ಣಾಟಕ ಬ್ಯಾಂಕ್ ಮುಂದೆ ಕಳವು ಆಗಿದೆ!.
ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ಶಿವಪ್ಪ ಚನ್ನಪ್ಪ ಚೌಡಕಿ ಎಂಬವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ 2,16,500 ರೂ. ಡ್ರಾ ಮಾಡಿ, ತಮ್ಮ ಬೈಕ್ ಸೈಡ್ ಬಾಕ್ಸ್ ನಲ್ಲಿ ಬೀಗ ಹಾಕಿ ಭದ್ರ ಪಡಿಸಿದ್ದರು.
ಬಳಿಕ ಕರ್ಣಾಟಕ ಬ್ಯಾಂಕ್ ನಲ್ಲಿ ಸ್ವಲ್ಪ ಕೆಲಸಕ್ಕೆಂದು ಹೋಗಿ ಹೊರ ಬರುವಷ್ಟರಲ್ಲಿ ಬೈಕಿನ ಸೈಡ್ ಬಾಕ್ಸ್ ನಲ್ಲಿಟ್ಟಿದ್ದ ಹಣ ಮಂಗಮಾಯವಾಗಿರುವುದು ಗೊತ್ತಾಗಿದೆ. ಕೂಡಲೇ ಗಾಬರಿಯಿಂದ ಕರ್ಣಾಟಕ ಬ್ಯಾಂಕಿನ ಸಿಸಿ ಟಿವಿ ಫುಟೇಜ್ ಪರಿಶೀಲಿಸಿದಾಗ ಓರ್ವ ಯುವಕ ಬೈಕ್ ಸೈಡ್ ಬಾಕ್ಸ್ ನಿಂದ ಹಣ ಎಗರಿಸುವ ದೃಶ್ಯ ಸೆರೆಯಾಗಿದೆ.
ಸ್ಥಳೀಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ