ಮಗ ಸಚಿವನಾಗಿದ್ದರೂ ಹೆತ್ತವರ ಸ್ವಾಭಿಮಾನ ಜೀವನ
Team Udayavani, Jul 19, 2021, 6:55 AM IST
ಕೊನೂರ್: ಪತಿ ಲೋಕನಾಥನ್ (68), ಪತ್ನಿ ಎಲ್. ವರುದಮ್ಮಾಳ್(59) ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಕೊನೂರ್ನ ಈ ದಂಪತಿ ಕೂಲಿ-ನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂ ಡವರು. ಈಗಲೂ ಯಾರಾದರೂ ಕೆಲಸ ಇದೆ ಎಂದ ಕೂಡಲೇ ಹೊಲಗಳಿಗೆ ತೆರಳಿ, ಕೂಲಿ ಕೆಲಸ ಮುಗಿಸಿ ಅಂದಿನ ತುತ್ತನ್ನು ಉಣ್ಣುವವರು. ಈ ದಂಪತಿ ಬೇರಾರೂ ಅಲ್ಲ. ಇತ್ತೀಚೆಗೆ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದ ಸಚಿವ ಎಲ್. ಮುರುಗನ್ ಅವರ ಹೆತ್ತವರು!
ಈ ಹಿಂದೆ ತ.ನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಮುರುಗನ್, ಈಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರಾಗಿದ್ದಾರೆ. ಆದರೂ, ಅವರ ತಂದೆ - ತಾಯಿ ಈಗಲೂ ಕೂಲಿ ಮಾಡಿ ದುಡಿದು ಉಣ್ಣುತ್ತಿದ್ದಾರೆ. ದಲಿತ ಉಪಪಂಗಡ ಅರುಂತತಿಯಾರ್ ಸಮುದಾಯಕ್ಕೆ ಸೇರಿದ ಇವರ ಮಗ ಸಚಿವರಾಗಿದ್ದು, ನೆರೆಮನೆಯವರಿಂದ ಗೊತ್ತಾಗಿತ್ತಂತೆ.
ಅದು ದೊಡ್ಡ ಹುದ್ದೆಯೇ?: ಕೇಂದ್ರ ಸಂಪುಟಕ್ಕೆ ಸೇರಿದ ದಿನ ನಮಗೆ ಕರೆ ಮಾಡಿ ಮಾತನಾಡಿದ. ಈಗಿರುವ ಹುದ್ದೆ (ರಾಜ್ಯಾಧ್ಯಕ್ಷ)ಗಿಂತ ಅದು (ಕೇಂದ್ರ ಸಚಿವ ಸ್ಥಾನ) ದೊಡ್ಡ ಹುದ್ದೆಯೇ ಎಂದು ಪ್ರಶ್ನಿಸಿದೆ ಎಂದು ಹೇಳುತ್ತಾರೆ ಮುಗ್ಧ ವರುದಮ್ಮಾಳ್. “ಆತ ಇಷ್ಟು ಎತ್ತರಕ್ಕೇರಲು ನಾವೇನೂ ಮಾಡಿಲ್ಲ. ಎಲ್ಲ ಅವನದ್ದೇ ಶ್ರಮ’ ಎಂದೂ ಈ ದಂಪತಿ ಹೇಳು ತ್ತಾರೆ.ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಈ ಬಗ್ಗೆ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು