ಸ್ಪೀಕರ್ ಕಾಗೇರಿಗೆ ಎದುರಾದ ಚಿರತೆ! ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ
Team Udayavani, Apr 7, 2022, 10:04 PM IST
ಶಿರಸಿ: ಕಾರ್ಯಕ್ರಮ ಮುಗಿಸಿ ಸ್ವಗ್ರಾಮ ಕಾಗೇರಿಗೆ ತೆರಳುತ್ತಿದ್ದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಾಹನಕ್ಕೆ ಸುಮಾರು ನಾಲ್ಕೈದು ಅಡಿ ಎತ್ತರದ ಚಿರತೆಯೊಂದು ಎದುರಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಶಿರಸಿ ಪೇಟೆಯಿಂದ ೮ ಕಿಮಿ ದೂರದ ಕಾಗೇರಿಗೆ ಬರೂರು ಮಾರ್ಗದಲ್ಲಿ ತೆರಳಬೇಕು. ಈ ಹಿಂದೆ ಕೂಡ ಚಿರತೆ ಇತ್ತೆಂದು ಹೇಳಲಾಗಿತ್ತು. ಆದರೆ, ಈಗ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ.
ಕಾಗೇರಿ ಅವರ ವಾಹನ ಚಾಲಕ ಕಿರಣ್ ಹೆಗಡೆ ಅವರು ಸ್ಪೀಕರ್ ಅವರನ್ನು ಮನೆಗೆ ಬಿಡುವಾಗ ಕಾಗೇರಿ ಸಮೀಪದ ನೇಗಾರ ಕತ್ರಿಯ ಬಳಿ ರಸ್ತೆಯ ಮೇಲೆ ಇತ್ತು. ವಾಹನದ ಬೆಳಕನ್ನು ನೋಡಿ ಕಾಡಿನತ್ತ ಓಡಿತ್ತು. ಆದರೆ, ಕಿರಣ್ ವಾಪಸ್ ಬರುವಾಗ ಮರೆಯಲ್ಲಿ ಅಡಗಿ ಕುಳಿತಿದ್ದನ್ನು ಪೊಟೊದಲ್ಲಿ ಕ್ಲಿಕ್ಕಿಸಿದ್ದಾರೆ.
ಈ ಚಿರತೆ ಇದೀಗ ಕಾನಮೂಲೆ, ಕಾಗೇರಿ, ಪಡಿಗೇರೆ, ದೀಗೊಪ್ಪ, ಯಡಹಳ್ಳಿ, ಬೆಟ್ಟಕೊಪ್ಪ, ಅರಸಿಕೆರೆ, ಕುಳವೆ, ಬರಗಾರ, ಬೆಳಖಂಡ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ : ಪಿಯು ಪರೀಕ್ಷೆಗೂ ಸಮವಸ್ತ್ರ ಕಡ್ಡಾಯ : ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!