ಸ್ಥಳೀಯ ಸಂಸ್ಥೆ: ಕಾಂಗ್ರೆಸ್‌ ಪಾರಮ್ಯ

ಪಟ್ಟಣ ಪಂಚಾಯತ್‌ಗಳಲ್ಲಿ ಬಿಜೆಪಿಗೆ ಮುನ್ನಡೆ

Team Udayavani, Jun 1, 2019, 6:00 AM IST

Congess-545

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿನ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಗೆ ಸ್ಥಳೀಯ ಸಂಸ್ಥೆಗಳ ಫ‌ಲಿತಾಂಶ ಒಂದಷ್ಟು ಸಮಾಧಾನ ನೀಡಿದೆ.

ರಾಜ್ಯದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳ 1,361 ಸ್ಥಾನಗಳಿಗೆ ನಡೆದಿದ್ದ ಚುನಾವಣೆ ಪೈಕಿ, 1,221 ಕ್ಷೇತ್ರಗಳ ಫ‌ಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಿಕೊಂಡಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಎಸ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆದ 61 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 7 ನಗರಸಭೆ, 30 ಪುರಸಭೆ ಮತ್ತು 19 ಪಟ್ಟಣ ಪಂಚಾಯತ್‌ಗಳ ಫ‌ಲಿತಾಂಶ ಹೊರಬಿದ್ದಿದೆ. ಪುರಸಭೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಾರಮ್ಯ ಮೆರೆದಿದ್ದಾರೆ.

7 ನಗರಸಭೆಗಳ ಪೈಕಿ 4ರಲ್ಲಿ ಕಾಂಗ್ರೆಸ್‌, 2ರಲ್ಲಿ ಬಿಜೆಪಿ, 1 ಜೆಡಿಎಸ್‌ ತೆಕ್ಕೆಗೆ ಸೇರಿವೆ. 30 ಪುರಸಭೆಗಳಲ್ಲಿ 15 ಪುರಸಭೆ ಕಾಂಗ್ರೆಸ್‌ ಪಾಲಾಗಿವೆ. ಬಿಜೆಪಿ 11 ಪುರಸಭೆಗಳನ್ನು ಮತ್ತು ಎರಡನ್ನು ಜೆಡಿಎಸ್‌ ಪಡೆದುಕೊಂಡಿವೆ.

ಎರಡು ಕಡೆ ಅತಂತ್ರ ಫ‌ಲಿತಾಂಶ ಬಂದಿದೆ. 19 ಪ. ಪಂ.ಗಳಲ್ಲಿ 12 ಪ. ಪಂ.ಗಳನ್ನು ಬಿಜೆಪಿ ವಶಕ್ಕೆ ತೆಗೆದುಕೊಂಡಿದ್ದು, ಐದು ಕಡೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಎರಡು ಅತಂತ್ರ ಫ‌ಲಿತಾಂಶ ಹೊರಬಿದ್ದಿದೆ.

ಒಟ್ಟಾರೆಯಾಗಿ 7 ನಗರ ಸಭೆಯ 217 ವಾರ್ಡ್‌ ಗಳಲ್ಲಿ 90 ಕಾಂಗ್ರೆಸ್‌, 56 ಬಿಜೆಪಿ, 38 ಜೆಡಿಎಸ್‌, 2 ಬಿಎಸ್‌ಪಿ, 6 ಇತರ ಪಕ್ಷ ಮತ್ತು 25 ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 30 ಪುರಸಭೆಯ 714 ವಾರ್ಡ್‌ಗಳಲ್ಲಿ 184 ಕಡೆ ಬಿಜೆಪಿ, 322 ಕಡೆ ಕಾಂಗ್ರೆಸ್‌, 102ಕಡೆ ಜೆಡಿಎಸ್‌, ಬಿಎಸ್‌ಪಿ ಮತ್ತು ಇತರ ಪಕ್ಷಗಳು ತಲಾ ಒಂದೊಂದು ಕಡೆ, ಸಿಪಿಎಂ ಎರಡು ಕಡೆ ಮತ್ತು ಪಕ್ಷೇತರರು 102ಕಡೆ ಗೆದ್ದಿದ್ದಾರೆ.

ನಗರ ಸ್ಥಳೀಯ ಸಂಸ್ಥೆ ಫ‌ಲಿತಾಂಶದಲ್ಲಿ ಬಿಜೆಪಿ 366, ಕಾಂಗ್ರೆಸ್‌ 509 ಮತ್ತು ಜೆಡಿಎಸ್‌ 74 ಮತ್ತು ಪಕ್ಷೇತರರು 160 ಕಡೆಗಳಲ್ಲಿ ಜಯ ಸಾಧಿಸಿದ್ದಾರೆ.

ನಗರ ಸಭೆ ವಿವರ(ಅತೀ ಹೆಚ್ಚು ಸೀಟು ಪಡೆದ ಪಕ್ಷಗಳು)
ಕಾಂಗ್ರೆಸ್‌: ಹಿರಿಯೂರು, ಶಿಡ್ಲಘಟ್ಟ, ಬಸವಕಲ್ಯಾಣ, ಶಹಪುರ

ಬಿಜೆಪಿ: ನಂಜನಗೂಡು, ತಿಪಟೂರು

ಜೆಡಿಎಸ್‌: ಹರಿಹರ

ಪುರಸಭೆ ಫ‌ಲಿತಾಂಶ(ಅತೀ ಹೆಚ್ಚು ಸೀಟು ಪಡೆದ ಪಕ್ಷಗಳು)
ಬಿಜೆಪಿ: ಮೂಡುಬಿದರೆ, ಮುಂಡರಗಿ, ಬ್ಯಾಡಗಿ, ಶಿಗ್ಗಾಂವ್‌, ಗುಂಡ್ಲುಪೇಟೆ, ಇಂಡಿ, ಬಂಗಾರಪೇಟೆ

ಜೆಡಿಎಸ್‌: ಬನ್ನೂರು, ಮಾವಳ್ಳಿ, ಶ್ರೀರಂಗಪಟ್ಟಣ, ನವಲಗುಂದ, ಶ್ರೀನಿವಾಸಪುರ

ಕಾಂಗ್ರೆಸ್‌: ಮಾಲೂರು, ಬಾಗೇಪಲ್ಲಿ, ಕಡೂರು, ಪಾವಗಡ, ಭಾಲ್ಕಿ, ಹುಮ್ನಬಾದ್‌, ಚಿಟಗುಪ್ಪ, ಸಂಡೂರು, ಹೂವಿನ ಹಡಗಲಿ ಹಾಗೂ ಹರಪ್ಪನಹಳ್ಳಿ, ಕುಣಿಗಲ್, ಕೆ.ಆರ್‌.ಪೇಟೆ, ಕೆ.ಆರ್‌.ನಗರ, ಬಸವನ ಬಾಗೇವಾಡಿ ಮತ್ತು ಆನೇಕಲ್

ಪಕ್ಷೇತರ: ತಾಳಿಕೋಟೆ ಹಾಗೂ ಭಟ್ಕಳ

ಪಟ್ಟಣ ಪಂಚಾಯತ್‌ ಫ‌ಲಿತಾಂಶ
(ಅತೀ ಹೆಚ್ಚು ಸೀಟು ಪಡೆದ ಪಕ್ಷಗಳು)

ಬಿಜೆಪಿ: ಮೊಣಕಾಲ್ಮೂರು, ಹೊಳಲ್ಕೆರೆ, ತುರುವೇಕೆರೆ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಸುಳ್ಯ, ಕಲಘಟಗಿ, ಹೊನ್ನಾವರ, ಸಿದ್ದಾಪುರ

ಕಾಂಗ್ರೆಸ್‌: ಮೂಲ್ಕಿ, ಕಮಲಾಪುರ, ಅಳ್ನಾವರ, ಯಳಂದೂರು, ನರಸಿಂಹರಾಜಪುರ

ಜೆಡಿಎಸ್‌:ಆಲೂರು

ಅತಂತ್ರ: ಹನೂರು, ಅರಕಲಗೋಡು

 

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.