ಅದೃಷ್ಟ ಅಂದರೆ ಇದು : ಎರಡು ವರ್ಷದಲ್ಲಿ ತನ್ನದೇ ಜಮೀನಿನಲ್ಲಿ ರೈತನಿಗೆ ಸಿಕ್ಕಿತು 6 ವಜ್ರಗಳು
Team Udayavani, Aug 29, 2021, 7:40 AM IST
ಪನ್ನಾ: ಅದೃಷ್ಟ ಅಂದರೆ ಇದು… ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತ ಪ್ರಕಾಶ್ ಮಜುಂದಾರ್ ಎಂಬವರಿಗೆ ಕಳೆದ ಎರಡು ವರ್ಷಗಳಲ್ಲಿ 6ನೇ ಬಾರಿಗೆ ತಮ್ಮ ಜಮೀನಿನಲ್ಲಿ ವಜ್ರ ಸಿಕ್ಕಿದೆ!
ಸರ್ಕಾರದಿಂದ ಭೋಗ್ಯಕ್ಕೆ ಪಡೆದುಕೊಂಡಿರುವ ಜಮೀನಿನಲ್ಲಿ ಗಣಿಗಾರಿಕೆ ನಡೆಸಿರುವ ಅವರು; ಈ ಬಾರಿ 6.47 ಕ್ಯಾರೆಟ್ ಮೌಲ್ಯದ ವಜ್ರದ ಹರಳನ್ನು ತೆಗೆದಿದ್ದಾರೆ. ಅದನ್ನು ನ್ಯಾಯವಾಗಿ ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದಾರೆ. ಇದನ್ನು ಹರಾಜು ಹಾಕಲಿರುವ ಜಿಲ್ಲಾಡಳಿತ ಬಂದ ಹಣದಲ್ಲಿ ಪ್ರಕಾಶ್ಗೆ ಪಾಲು ನೀಡಲಿದೆ. ಈ ಹಣವನ್ನು ಪ್ರಕಾಶ್, ಇತರೆ ನಾಲ್ವರು ಪಾಲುದಾರರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಈಗಿನ ಅಂದಾಜಿನ ಪ್ರಕಾರ ಪ್ರಸ್ತುತ ಸಿಕ್ಕಿರುವ 6.47 ಕ್ಯಾರೆಟ್ ಮೌಲ್ಯದ ವಜ್ರ ಕ್ಕೆ 30 ಲಕ್ಷ ರೂ. ಸಿಗಲಿದೆ. ಕಳೆದ ವರ್ಷವೂ ಅವರಿಗೆ 7.44 ಕ್ಯಾರೆಟ್ ಮೌಲ್ಯದ ವಜ್ರ ಸಿಕ್ಕಿದ್ದರೆ, ಅದಕ್ಕೂ ಮುನ್ನ 2ರಿಂದ 2.5 ಕ್ಯಾರೆಟ್ನ 4 ನಾಲ್ಕು ಅಮೂಲ್ಯ ಹರಳು ಅವರ ಪಾಲಾಗಿತ್ತು.