ಬಣ್ಣದ ವೈಭವ-4 : ಮರೆತು ಹೋದ ರಾಕ್ಷಸ ಪಾತ್ರಗಳ ಮೇಕಪ್ ಕಲೆಗಾರಿಕೆ

ಬಣ್ಣಗಾರಿಕೆಯ ಶ್ರಮ ಈಗ ಮಾಯ !.. ಬೇರೆಲ್ಲಾ ಪಾತ್ರಗಳಿಗಿಂದ ಹೆಚ್ಚು ಸಮಯ ವ್ಯಯ

Team Udayavani, Sep 28, 2022, 8:11 PM IST

1-sdsdddad

ಬಡಗು ತಿಟ್ಟು ಯಕ್ಷಗಾನ ರಂಗದಲ್ಲಿ ಬೇರೆಲ್ಲಾ ಪಾತ್ರಗಳಿಂದ ಬಣ್ಣದ ವೇಷಗಳ ಮುಖವರ್ಣಿಕೆಗೆ (ಮೇಕಪ್) ಹೆಚ್ಚು ಸಮಯ ಹಿಡಿಯುತ್ತದೆ. ರಂಗದಲ್ಲಿ ರಾಕ್ಷಸನಾಗಿ ಕಾಣುವ ಸಾಮಾನ್ಯ ವ್ಯಕ್ತಿಯ ಪರಿಚಯವೇ ಆಗದ ರೀತಿಯಲ್ಲಿ ಬಣ್ಣಗಾರಿಕೆಯ ಚಮತ್ಕಾರವಿರುತ್ತದೆ. ಸಾಮಾನ್ಯವಾಗಿ ತೆಂಕು ತಿಟ್ಟಿನಲ್ಲೂ ಬಣ್ಣದ ವೇಷಗಳಿಗೆ ಚಿಟ್ಟೆ ಇಟ್ಟು ಮುಖವರ್ಣಿಕೆ ಮಾಡಲಾಗುತ್ತದೆ. ಒಂದು ರಾಕ್ಷಸ ವೇಷದ ಸಿದ್ದತೆಗೆ ಗಂಟೆಗೂ ಹೆಚ್ಚು ಕಾಲ ಮೇಕಪ್ ಗಾಗಿ ಕಲಾವಿದ ಶ್ರಮ ವಹಿಸಬೇಕಾಗಿತ್ತು.

ಇದನ್ನೂ ಓದಿ: ಬಣ್ಣದ ವೈಭವ-3: ರಾವಣ, ಘಟೋತ್ಕಚನಂತಹ ಪಾತ್ರಗಳೂ ಬಣ್ಣದ ವೇಷದ ಸ್ಥಾನಮಾನ ಕಳೆದುಕೊಂಡಿವೆ…

ತಮ್ಮ ಬದುಕಿನ ಬಣ್ಣದ ಮಾತು ಮುಂದುವರಿಸಿದ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರು, ಹಿಂದಿನ ಪರಂಪರೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ರಂಗದಲ್ಲಿ ಪಾತ್ರದ ಪ್ರಸ್ತುತಿಯಲ್ಲಿನ ಅರ್ಥ ಪೂರ್ಣತೆಯ ಕುರಿತು ಹೇಳುತ್ತಾ ಸದ್ಯ ಬಡಗುತಿಟ್ಟಿನಲ್ಲಿ ಪಾರಂಪರಿಕ ಮುಖವರ್ಣಿಕೆ ಮರೆಯಾಗಿದೆ ಎಂದು ನೋವು ಹೊರ ಹಾಕಿದರು.

ಬಣ್ಣದ ವೇಷ ವೆಂದರೆ ರಾಕ್ಷಸ ಬಂದು ಅಬ್ಬರಿಸಿ ಮಡಿದು ಚೌಕಿ(ಬಣ್ಣದ ಮನೆ) ಸೇರುವುದಷ್ಟೆ ಅಲ್ಲ, ಆಯಾಯ ಪಾತ್ರಗಳಲ್ಲಿ ವಿಭಿನ್ನತೆ ಪ್ರತ್ಯೇಕತೆ ಅನ್ನುವುದು ಇದೆ ಎನ್ನುವುದೇ ವಿಶೇಷ ಎಂದರು.

ಬಣ್ಣದ ವೇಷಕ್ಕೆ ಹಿಂದೆ ಬೆಳ್ತಿಗೆ ಅಕ್ಕಿಯನ್ನು ನೆನೆಸಿಟ್ಟು ನುಣ್ಣಗೆ ಅರೆದು ಅದಕ್ಕೆ ಸುಣ್ಣ ಬೆರೆಸಿ ಚಿಟ್ಟೆ ಇಡಲು ಬಳಸುತ್ತಿದ್ದರು. ವೃತ್ತಿ ಮೇಳಗಳಲ್ಲಿ ಸಾಮಾನ್ಯವಾಗಿ ಕೆಲಸದ ಆಳುಗಳು ಅಕ್ಕಿಯನ್ನು ಎರಡು ದಿನಕ್ಕೊಮ್ಮೆ ಅರೆದು ತಂದು ಬಣ್ಣದ ವೇಷಧಾರಿಯ ಪೆಟ್ಟಿಗೆಯ ಬಳಿ ಇಡುತ್ತಿದ್ದರು ಎಂದು ಎಳ್ಳಂಪಳ್ಳಿಯವರು ಹೇಳಿದರು. ಈಗ ಆ ಕ್ರಮ ಮರೆಯಾಗಿದ್ದು ಹೊಸ ರೀತಿಯ ಬಣ್ಣಗಳನ್ನೂ ಥರ್ಮಕೋಲ್, ಅಂಟು ಪದಾರ್ಥಗಳ ಮೂಲಕ ಚಿಟ್ಟೆಯನ್ನೂ ತಯಾರಿಸಿ ಮೂಲ ಆಕಾರವನ್ನು ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶುಭ್ರವಾದ ಬೆಳ್ಳಗಿನ ಚಿಟ್ಟೆಗಳು ಮುಳ್ಳುಮುಳ್ಳಾಗಿ ರಕ್ಕಸ ರೂಪದ ಭೀಕರತೆಯನ್ನು ತೋರಿಸುತ್ತವೆ. ಅದು ಕಲಾವಿದನ ಸಾಮರ್ಥ್ಯ ದ ಮೇಲೆ ಗಾತ್ರವನ್ನು, ಅಂದವನ್ನೂ ಪಡೆದುಕೊಳ್ಳುತ್ತಿತ್ತು. ರಾಕ್ಷಸ ಮುಖವರ್ಣಿಕೆಯಲ್ಲಿ ವಿಭಿನ್ನತೆಯನ್ನೂ ಕಾಣಬಹುದು. ಏಕ ಸುಳಿ ಅಂದರೆ ಒಂದು ಸುಳಿ ಶಾಪಕ್ಕೆ ಗುರಿಯಾದ ಗಂಧರ್ವರಿಗೆ ಸಾಮಾನ್ಯವಾಗಿ ಕಂಸ ಜನ್ಮದಲ್ಲಿ ಬರುವ ಧ್ರುಮಿಳ ಗಂಧರ್ವನಿಗೆ ಈ ರೀತಿಯಲ್ಲಿ ಮುಖವರ್ಣಿಕೆ ಮಾಡಲಾಗುತ್ತದೆ. ದ್ವಿಸುಳಿ (ಎರಡು ಸುಳಿ) ಪಾತ್ರಗಳನ್ನು ಮಾಡಲಾಗುತ್ತದೆ. ಪಾತ್ರಗಳಿಗನುಗುಣವಾಗಿ ತ್ರಿಸುಳಿ(ಮೂರು ಸುಳಿ)ಯನ್ನು ಬರೆಯುವ ಕ್ರಮವಿದೆ ಎಂದು ವೈಶಿಷ್ಟ್ಯತೆಗಳ ಬಗ್ಗೆ ಹೇಳಿದರು.

ಚೇಳು ಸುಳಿ ಕಾಟು ಬಣ್ಣದ ವೇಷಗಳಿಗೆ ಬಳಸುವ ಕ್ರಮವಿದೆ. ಕವಿ ಮುದ್ದಣ ವಿರಚಿತ ರತ್ನಾವತಿ ಕಲ್ಯಾಣದಲ್ಲಿ ಬರುವ ಕಾಟು ಬಣ್ಣದ ವೇಷವಾದ ವಿದ್ಯುಲ್ಲೋಚನ ನ ಪಾತ್ರ ಅಂತಹ ವೇಷಗಳಲ್ಲಿ ಒಂದು. ಈಗ ರಂಗದಲ್ಲಿ ಆ ಪಾತ್ರ ಮರೆಯಾಗಿದ್ದು, ನಾಟಕೀಯ ಪಾತ್ರಗಳಲ್ಲೋ , ಪುಂಡು ವೇಷಧಾರಿಗಳ ಕೈಯಲ್ಲಿಯೋ ಮಾಡಿಸುತ್ತಿರುವುದು ಹೊಸತನಕ್ಕೆ ಸಾಕ್ಷಿಯಾಗಿದ್ದು, ಪ್ರೇಕ್ಷಕರಿಗೆ ರಾಕ್ಷಸ ವೇಷದ ಸವಿಯನ್ನು ಕಾಣಲು ಅಸಾಧ್ಯವಾಗಿದೆ ಎಂದರು.

ಪಾತಾಳದಲ್ಲಿರುವ ರಾಕ್ಷಸರಿಗೆ ಸರ್ಪ ಸುಳಿ ಬರೆಯುವ ಕ್ರಮವೂ ಇತ್ತು. ಬಣ್ಣದ ವೇಷದ ಪಾತ್ರಗಳ ಕಲ್ಪನೆಯೇ ಬಡಗುತಿಟ್ಟಿನಲ್ಲಿ ಮರೆಯಾಗುತ್ತಿರುವ ವೇಳೆ ಇನ್ನು ಆ ವಿಶೇಷತೆಗಳ ಕುರಿತು ಚಿಂತಿಸುವತ್ತ ಕಲಾವಿದರು ಮುಂದಾಗುತ್ತಿಲ್ಲ. ದೇವಿ ಮಾಹಾತ್ಮೆಯಲ್ಲಿ ಬರುವ ವಿದ್ಯುನ್ಮಾಲಿಯಂತಹ ಪ್ರಮುಖ ಪಾತ್ರ ವನ್ನು ಆ ರೀತಿ ಮಾಡಬಹುದು. ಆ ಪಾತ್ರವನ್ನು ಮುಂಡಾಸು ವೇಷವಾಗಿ ಮಾಡಲಾಗುತ್ತಿದೆ. ದೇವಿ ಮಾಹಾತ್ಮೆ ಪ್ರಸಂಗದಲ್ಲಿ ಬಣ್ಣದ ವೇಷಗಳಿಗೆ ಸಾಕಷ್ಟು ಅವಕಾಶವಿದೆ.ಸಾಂಪ್ರದಾಯಿಕ ವೇಷಗಳನ್ನು ತೋರಿಸಿಕೊಳ್ಳುವ ಅವಕಾಶವಿದೆ. ಆದರೆ ಬಡಗಿನಲ್ಲಿ ಆ ಪ್ರಯತ್ನ ಯಾರೂ ಮಾಡುತ್ತಿಲ್ಲ ಎಂದು ನೋವು ಹೊರ ಹಾಕಿದರು.

ಹೆಣ್ಣು ಬಣ್ಣ ದ ವೇಷಗಳಿಗೆ ಸಣ್ಣ ಚಿಟ್ಟೆ ಇಡುವುದು ಸಾಮಾನ್ಯವಾಗಿತ್ತು. ಶೂರ್ಪನಖಿ, ಅಜೋಮುಖಿ ಸೇರಿದಂತೆ ಇತರ ಪಾತ್ರಗಳು ತನ್ನದೇ ವಿಶಿಷ್ಟತೆ ಹೊಂದಿದ್ದವು. ಬಣ್ಣದ ವೇಷ ಮಾಡುವಲ್ಲಿ ಹೆಚ್ಚು ಶ್ರಮ ಮತ್ತು ಸಮಯ ಅಗತ್ಯವಾಗಿರುತ್ತದೆ. ಮುಖವರ್ಣಿಕೆಗೇ ಹೆಚ್ಚು ಸಮಯ ತಗಲುತ್ತದೆ. ತಾಳ್ಮೆ ಬಣ್ಣದ ವೇಷಧಾರಿಗೆ ಇರಲೇ ಬೇಕಾಗುತ್ತದೆ. ಆಗ ಮಾತ್ರ ಮುಖವರ್ಣಿಕೆಯಲ್ಲಿ ವಿಶೇಷತೆಯನ್ನು ತೋರಬಹುದು ಎಂದು ಎಳ್ಳಂಪಳ್ಳಿಯವರು ಹೇಳಿದರು.

ಮುಂದುವರಿಯುವುದು…

ಬರಹ : ವಿಷ್ಣುದಾಸ್ ಪಾಟೀಲ್

ಟಾಪ್ ನ್ಯೂಸ್

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.