ಮಂಗಳೂರಿನ ಅಭಿವೃದ್ಧಿ ಪುತ್ತೂರಿನಲ್ಲಿ ಸಾಧ್ಯ


Team Udayavani, Feb 26, 2021, 5:30 AM IST

ಮಂಗಳೂರಿನ ಅಭಿವೃದ್ಧಿ ಪುತ್ತೂರಿನಲ್ಲಿ ಸಾಧ್ಯ

ಒಂದು ಜಿಲ್ಲೆಯಾಗಿ ರೂಪುಗೊಳ್ಳುವುದರಿಂದ ಹೊಸ ಜಿಲ್ಲೆಯ ಕೇಂದ್ರ ಸ್ಥಾನದೊಂದಿಗೆ ಜಿಲ್ಲೆಯ ಇತರ ತಾಲೂಕುಗಳ ನಗರಗಳೂ ಅಭಿವೃದ್ದಿ ಹೊಂದಲು ಅವಕಾಶ ಸಿಗುತ್ತದೆ. ದೊಡ್ಡ ಜಿಲ್ಲೆಯೊಳಗೆ ಸೇರಿಕೊಂಡಿದ್ದರೆ ಇಂತಹ ಅವಕಾಶಗಳು ಕಡಿಮೆ ಎಂದೇ ಹೇಳಬಹುದು. ಗ್ರಾಮಾಂತರ ಪ್ರದೇಶಗಳೇ ಇರುವ ಪುತ್ತೂರು ಜಿಲ್ಲೆಯಾದರೆ ಇದರಡಿಯ ಹಲವು ನಗರಗಳು ಸಮಾನವಾಗಿ ಬೆಳೆಯಲು ಸಾಧ್ಯವಿದೆ.

ಪುತ್ತೂರು: ಶಿಕ್ಷಣ, ಆರೋಗ್ಯ ಹಾಗೂ ಇತರ ವಾಣಿಜ್ಯ ಆಧಾರಿತ ಚಟುವಟಿಕೆಗೆ ಮಂಗಳೂರು ನಗರ ದ.ಕ. ಜಿಲ್ಲೆಗೆ ಕೇಂದ್ರ ಸ್ಥಾನದಲ್ಲಿರುವಂತೆ, ಪುತ್ತೂರು ಜಿಲ್ಲೆಯಾದಲ್ಲಿ ನಾಲ್ಕು ಗ್ರಾಮಾಂತರ ತಾಲೂಕುಗಳಿಗೆ ಪುತ್ತೂರು ನಗರವು ಕೇಂದ್ರ ಸ್ಥಾನವಾಗಿ ಬೆಳೆಯಬಹುದು.

ಮಂಗಳೂರಿನ ಪ್ರಗತಿಯ ಚಿತ್ರಣ ಕ್ರಮೇಣ ಪುತ್ತೂರಿನಲ್ಲಿಯು ಅನುಷ್ಠಾನಿಸಲು ಜಿಲ್ಲೆ ವೇದಿಕೆ ಒದಗಿಸಬಹುದು. ಜಿಲ್ಲಾ ಕೇಂದ್ರವೊಂದು ಮೂಲ ಸೌಕರ್ಯ ಹೊಂದಿರಬೇಕಿರುವುದು ಅದರ ಅನಿವಾರ್ಯತೆಗೆ ಕಾರಣವೂ ಹೌದು. ಇದು ಸಂಚಾರ, ಸಂಪರ್ಕ, ಶಿಕ್ಷಣ, ಆರೋಗ್ಯ ಸಹಿತ ವಿವಿಧ ವಲಯಗಳ ಬೆಳವಣಿಗೆ, ಚೇತರಿಕೆಗೆ ನೆರವಾಗುವ ಒಂದು ಮಹತ್ವದ ಹೆಜ್ಜೆಯೂ ಆಗುತ್ತದೆ. ಉದಾಹರಣೆಗೆ ಮಂಗಳೂರಿನ ಸ್ಮಾರ್ಟ್‌ ಸಿಟಿ ಕಲ್ಪನೆ ಪುತ್ತೂರಿಗೂ ಕಾಲಿಡ ಬಹುದು. ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಇರುವ ಕಾರಣ ಕೃಷಿ ಆಧಾರಿತ ಘಟಕಗಳ ಸ್ಥಾಪನೆಗೆ ಹೊರಗಿನಿಂದ ಬಂಡವಾಳ ಹೂಡಿಕೆಗೆ ಅವಕಾಶ ಸೃಷ್ಟಿಯಾಗಬಹುದು. ರಸ್ತೆ, ರೈಲ್ವೇ ಸಂಚಾರ ಮಾರ್ಗ ಉಭಯ ಜಿಲ್ಲೆಗಳ ನಡುವಿನ ಸೇತುವಾಗಿ ಬಳಸಬಹುದು. ಇದೇ ರೀತಿ ಮಂಗಳೂರು ನಗರದ ಸುಧಾರಣೆಗೆ ಕಾರಣವಾದ ಹಲವು ಅಂಶಗಳು ಪುತ್ತೂರು ನಗರದ ಬೆಳವಣಿಗೆಗೂ ಪೂರಕವಾಗಬಹುದು.

ಸುಧಾರಣೆಯ ಪರಿಣಾಮ ಮಂಗಳೂರನ್ನು ಆರ್ಥಿಕ ಶಕ್ತಿಯಾಗಿ ರೂಪಿಸಿ ಜಿಲ್ಲೆಯ ಬೆಳವಣಿಗೆಗೆ ಕೊಡುಗೆ ನೀಡಿದೆಯೋ ಅದೇ ರೀತಿ ಪುತ್ತೂರು ನಗರವು ಗ್ರಾಮಾಂತರ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡ ಬಹುದು. ದ.ಕ. ಜಿಲ್ಲೆಯಲ್ಲಿ ಮಂಗಳೂರಿಗೆ ಪರ್ಯಾಯವಾಗಿ ಪುತ್ತೂರು ನಗರದ ಮುಖೇನ ಇನ್ನೊಂದು ನಗರ ಸೃಷ್ಟಿ ಯಾಗಲು ಸಾಧ್ಯವಿದೆ. ಇದರ ಜತೆಗೆ ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ತಾಲೂಕುಗಳಿಗೆ ಪುತ್ತೂರು ನಗರವು ಉತ್ತೇಜನೆ ನೆಲೆಯಾಗಿಯೂ ರೂಪುಗೊಳ್ಳಬಹುದು ಮಾತ್ರ ವಲ್ಲದೆ ಇಲ್ಲಿನ ಮೂಲ ಸೌಕರ್ಯವೂ ವೃದ್ಧಿಗೊಳ್ಳಲು ಕಾರಣ ವಾಗುತ್ತದೆ. ಇದು ಜಿಲ್ಲಾ ಕೇಂದ್ರ ರಚನೆಯಿಂದ ಬೀರುವ ಪ್ರಮುಖ ಪರಿಣಾಮಕಾರಿ ಅಂಶ ಎಂದೇ ಭಾವಿಸಲಾಗಿದೆ.

ವಿಸ್ತರಿತ ನಗರಕ್ಕೆ ದಿಕ್ಸೂಚಿ
ಯಾವುದೇ ನಗರಕ್ಕೆ ಮೂಲ ಸೌಕರ್ಯ ಒದಗಿಸಬೇಕಾದರೆ ಅದಕ್ಕೆ ದೂರದೃಷ್ಟಿತ್ವ ಯೋಜನೆ, ಸಾಕಷ್ಟು ಅನುದಾನಗಳ ಅಗತ್ಯವಿದೆ. ಹೊಸ ಜಿಲ್ಲೆ ಅಂತಹ ಅವಕಾಶವೊಂದನ್ನು ತೆರೆದಿಡುವ ಸಾಮರ್ಥ್ಯ ಹೊಂದಿದೆ. ರಿಂಗ್‌ ರೋಡ್‌, ಪಾರ್ಕಿಂಗ್‌, ಸುಸಜ್ಜಿತ ತೆರೆದ, ಒಳಚರಂಡಿ ವ್ಯವಸ್ಥೆ, ವಲಯಗಳ ಸ್ಥಾಪನೆ ಮೊದಲಾದ ಮೂಲಸೌಕರ್ಯಗಳ ಅಗತ್ಯತೆಗಳಿಗೆ ಸ್ಪಂದನೆ ಸಿಗಬಹುದು. ಸೀಮಿತ ವ್ಯಾಪ್ತಿಯೊಳಗಿನ ಚಟುವಟಿಕೆಗಳು ವಿವಿಧ ಭಾಗಗಳಿಗೆ ಹರಡಿ ಜಿಲ್ಲಾ ಕೇಂದ್ರದ ವಿಸ್ತರಿತ ನಗರವಾಗುವ ಅವಕಾಶ ಇದೆ. ಭವಿಷ್ಯದ 15-20 ವರ್ಷಗಳ ದೃಷ್ಟಿಕೋನ ಇರಿಸಿ ಪುತ್ತೂರು ನಗರವನ್ನು ಬೆಳೆಸಬಹುದು.

ಮಂಗಳೂರು ಮಹಾನಗರಪಾಲಿಕೆ ಬೃಹತ್‌ ಮಹಾನಗರ ಪಾಲಿಕೆ ಆಗುವ ಹಂತಕ್ಕೆ ತಲುಪಿದಂತೆ, ಪುತ್ತೂರು ಗ್ರಾಮಾಂತರ ತಾಲೂಕಿನ ನಗರಗಳಿಗೆ ಅಂತಹದೊಂದು ಅವಕಾಶ ಲಭಿಸಲಿದೆ. ಪುತೂರು ನಗರಸಭೆ ನಗರಪಾಲಿಕೆ ಆಗುವ ಅವಕಾಶ ಸಿಗಬಹುದು. ಅದರೊಂದಿಗೆ ಸುಳ್ಯ, ಬೆಳ್ತಂಗಡಿ, ಕಡಬ ನಗರ ಪಂಚಾಯತ್‌ನಿಂದ ಪುರಸಭೆ, ಬಂಟ್ವಾಳ ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೆ ಏರಿಸಬೇಕು ಎಂಬ ಕೂಗಿಗೆ ಬಲ ಸಿಗಲಿದೆ.

ಸಂಚಾರ ವ್ಯವಸ್ಥೆಯ ಸುಧಾರಣೆಗೆ ಎರಡನೆ ಬಸ್‌ ನಿಲ್ದಾಣ ಸ್ಥಾಪಿಸಬೇಕು ಎಂಬ ಬಗ್ಗೆ ಪ್ರಸ್ತಾವನೆಯಿದೆ. ಜತೆಗೆ ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಬೇಡಿಕೆ ಇದ್ದು ಅದಕ್ಕಾಗಿ 40 ಎಕರೆ ಜಾಗ ಕಾದಿರಿಸಲಾಗಿದೆ. ಸಾಗರೋತ್ಪನ್ನ ತಯಾರಿ ಘಟಕ, ಕೈಗಾರಿಕೆ ಕಾರಿಡಾರ್‌ ಸ್ಥಾಪನೆ ಮೊದಲಾದಿ ಯೋಜನೆಗಳನ್ನು ಪುತ್ತೂರು ನಗರದೊಳಗೆ ಅನುಷ್ಠಾನಿಸಲು ಜಿಲ್ಲಾ ಕೇಂದ್ರ ಶಕ್ತಿ ತುಂಬಲಿದೆ.

ಹಲವು ತಾಲೂಕಿನ ಸಂಪರ್ಕ
ಈಗಾಗಲೇ ಉಪವಿಭಾಗ ವ್ಯಾಪ್ತಿಯ ಮಹಿಳಾ ಠಾಣೆ, ಎಎಸ್ಪಿ ಕಚೇರಿ, ಎಸಿ ಕಚೇರಿ, ಕಾರ್ಕಳ, ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ವ್ಯಾಪ್ತಿಯನ್ನು ಒಳಗೊಂಡ ವಿಭಾ ಗೀಯ ಅಂಚೆ ಕಚೇರಿ, ಮಡಿಕೇರಿ, ಸುಳ್ಯ, ಪುತ್ತೂರು, ಬಿ.ಸಿ.ರೋಡು, ಧರ್ಮಸ್ಥಳ ಘಟಕದ ವ್ಯಾಪ್ತಿಯೊಂದಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಗಳು ಪುತ್ತೂರು ನಗರದೊಳಗಿವೆ. ಹೀಗಾಗಿ ಕನಿಷ್ಠ ಐದರಿಂದ ಆರು ತಾಲೂಕಿಗೆ ಪುತ್ತೂರು ನಗರ ವಿವಿಧ ಕಾರಣಗಳಿಂದ ಕೇಂದ್ರ ಸ್ಥಾನದಲ್ಲಿದೆ. ಜಿಲ್ಲೆಯಾದಲ್ಲಿ ಅಂತಹ ಇನ್ನಷ್ಟು ಕಚೇರಿಗಳ ಸ್ಥಾಪನೆಗೆ ಕಾರಣವಾಗಬಹುದು. ಭವಿಷ್ಯದ ಗ್ರಾಮಾಂತರ ತಾಲೂಕಿನ ಸಂಪರ್ಕವು ಮತ್ತಷ್ಟು ಹತ್ತಿರವಾಗಬಹುದು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.