ಭುವನೇಶ್ವರ: ಮೊಬೈಲ್ ಟವರ್ ಉದ್ಘಾಟನೆಗೆ ಬಂದ ಶಾಸಕರಿಗೇ ಶಾಕ್ ನೀಡಿದ ಗ್ರಾಮಸ್ಥರು !
Team Udayavani, Jan 6, 2022, 11:00 PM IST
ಭುವನೇಶ್ವರ: ಮೊಬೈಲ್ ಟವರ್ ಉದ್ಘಾಟನೆಗೆ ಬಂದ ಶಾಸಕರಿಗೆ ಗ್ರಾಮಸ್ಥರೆಲ್ಲ ಸೇರಿ ಶಾಕ್ ಕೊಟ್ಟು ಶಾಸಕರೇ ತಲೆ ತಗ್ಗಿಸುವಂತೆ ಮಾಡಿದ ಘಟನೆ ಒಡಿಶಾದ ಬಂಧಾಪರಿ ಗ್ರಾಮದಲ್ಲಿ ನಡೆದಿದೆ.
ಲಂಜೀಗಢದ ಆರ್ಜೆಡಿ ಶಾಸಕ ಪ್ರದೀಪ್ ಕುಮಾರ್ ದಿಶಾರಿ ಅವರಿಗೆ ಬಂಧಾಪರಿಯಲ್ಲಿ ನಿರ್ಮಿಸಲಾಗಿರುವ ಮೊಬೈಲ್ ಟವರ್ ಉದ್ಘಾಟನೆಗೆ ಗ್ರಾಮಸ್ಥರು ಆಹ್ವಾನಿಸಿದ್ದಾರೆ. ಅದಕ್ಕೆಂದು ಮಂಗಳವಾರ ಗ್ರಾಮಕ್ಕೆ ಬಂದ ಪ್ರದೀಪ್ ಕುಮಾರ್ ಗ್ರಾಮಸ್ಥರೆದುರು ತಲೆ ತಗ್ಗಿಸುವಂತಾಗಿದೆ. ಏಕೆಂದರೆ ಅಲ್ಲಿ ಮೊಬೈಲ್ ಟವರ್ ನಿರ್ಮಾಣವೇ ಆಗಿರಲಿಲ್ಲ. ಅಲ್ಲಿದ್ದದ್ದು ಗ್ರಾಮಸ್ಥರೇ ತಯಾರಿಸಿದ್ದ ಬಿದಿರಿನ ಟವರ್!
ಊರಿನಲ್ಲಿ ನೆಟ್ವರ್ಕ್ ಸಮಸ್ಯೆಯಿದೆ. ಕರೆ ಮಾಡಬೇಕೆಂದರೆ 4 ಕಿ.ಮೀ ದೂರ ತೆರಳಬೇಕು, ದಯವಿಟ್ಟು ನಮ್ಮೂರಲ್ಲೂ ಟವರ್ ನಿರ್ಮಿಸಿ ಎಂದು ಅದೆಷ್ಟೇ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಅದನ್ನು ಕಿವಿಗೆ ಹಾಕಿಕೊಂಡಿಲ್ಲವಂತೆ. ಆ ಹಿನ್ನೆಲೆಯಲ್ಲಿ ಈ ರೀತಿ ನಕಲಿ ಟವರ್ ತಯಾರಿಸಿ ಈ ರೀತಿ ಅವಮಾನಿಸುವ ಯೋಜನೆ ಹಾಕಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಇದನ್ನೂ ಓದಿ : ಮೋದಿಗಾಗಿ ಬಿಜೆಪಿ ಕಾರ್ಯಕರ್ತರಿಂದ ದೇಶಾದ್ಯಂತ ಯಾಗ : ಸಚಿವ ಅನುರಾಗ್ ಠಾಕೂರ್ ಮಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್