ಮೋದಿ ಸಂಪುಟದ 43 ಸಚಿವರಿಗೆ ಜಯದ ಸಿಹಿ

ರಾಜನಾಥ್‌, ಗಡ್ಕರಿ, ಸದಾನಂದಗೌಡರಿಗೆ ಗೆಲುವು

Team Udayavani, May 25, 2019, 6:00 AM IST

Modi

ನವದೆಹಲಿ: ಮೋದಿ ಅಲೆಯಲ್ಲಿ ಬಿಜೆಪಿ ಸಂಸದರ ಜತೆಗೆ, ಸಂಪುಟದ ಸಚಿವರೂ ಜಯದ ಪತಾಕೆ ಹಾರಿಸಿದ್ದಾರೆ. ಮೋದಿ ಅವರ 48 ಸದಸ್ಯರ ಸಂಪುಟದಲ್ಲಿ 43 ಮಂದಿ ಗೆದ್ದಿದ್ದು, ಐವರು ಮಾತ್ರ ಸೋತಿದ್ದಾರೆ.

ಆಡಳಿತ ವಿರೋಧಿ ಅಲೆಯಲ್ಲಿ ಸಂಪುಟದ ಸದಸ್ಯರೇ ಸೋಲಿನ ರುಚಿ ಕಾಣುವುದು ಸಾಮಾನ್ಯ. ಆದರೆ, ಮೋದಿ ಸಂಪುಟದಲ್ಲಿ ಹಾಗೆ ಆಗಿಲ್ಲ. ಹೆಚ್ಚು ಕಡಿಮೆ ಎಲ್ಲರೂ ಭಾರೀ ಅಂತರದಿಂದಲೇ ಗೆದ್ದಿದ್ದಾರೆ. ಇವರೆಲ್ಲರಲ್ಲಿ ಅದ್ಭುತ ಗೆಲುವು ಎಂಬುದು ಸ್ಮತಿ ಇರಾನಿ ಅವರ ಕಡೆಯಿಂದ ಬಂದಿದೆ. ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೇ ಗೆಲ್ಲುವ ಮೂಲಕ ಸ್ಮತಿ ಎಲ್ಲರ ಹುಬ್ಬೇರಿಸಿದ್ದಾರೆ.

ಪ್ರಧಾನಿಗೆ ಪ್ರಚಂಡ ಗೆಲುವು: ವಾರಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಸಮಾಜವಾದಿ ಪಕ್ಷದ ಶಾಲಿನಿ ಯಾದವ್‌ ವಿರುದ್ಧ 4,79,505 ಮತಗಳ ಅಂತರದಿಂದ ಗೆದ್ದಿದ್ದಾರೆ. ವಿಶೇಷವೆಂದರೆ, ಕಳೆದ ಬಾರಿಗಿಂದ ಈ ಬಾರಿ ಗೆಲುವಿನ ಅಂತರವನ್ನೂ ಮೋದಿ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಭಾರೀ ಗೆಲುವು ಸಿಕ್ಕಿರುವುದು ಮತ್ತೂಬ್ಬ ಸಚಿವ ಗಿರಿರಾಜ್‌ ಸಿಂಗ್‌ ಅವರಿಗೆ. ಇವರು ಬಿಹಾರ್‌ನ ಬೆಗುಸೆರಾಯ್‌ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ ಕನ್ನಯ್ಯಕುಮಾರ್‌ ವಿರುದ್ಧ 4.22.217 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇತ್ತ ಕರ್ನಾಟಕದ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಂತಕುಮಾರ್‌ ಹೆಗಡೆ ಅವರು, 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಕರ್ನಾಟಕದ ಪಾಲಿಗೆ ಇವರದ್ದೇ ಅತ್ಯಂತ ದೊಡ್ಡ ಗೆಲುವು. ಇನ್ನು ಕರ್ನಾಟಕದಿಂದ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಡಿ.ವಿ.ಸದಾನಂದ ಗೌಡ, ರಮೇಶ್‌ ಜಿಗಜಿಣಗಿ ಅವರೂ ಭಾರೀ ಅಂತರದಿಂದಲೇ ಗೆದ್ದಿದ್ದಾರೆ.

ಉಳಿದಂತೆ, ಗಜೇಂದ್ರ ಸಿಂಗ್‌ ಶೇಖಾವತ್‌, ಸತ್ಯಪಾಲ್ ಸಿಂಗ್‌, ಸಂಜೀವ್‌ ಬಲ್ಯಾನ್‌, ಮನೇಕಾ ಗಾಂಧಿ, ಎಸ್‌.ಎಸ್‌.ಅಹ್ಲುವಾಲಿಯಾ, ಸುದರ್ಶನ್‌ ಭಗತ್‌, ವಿ.ಕೆ.ಸಿಂಗ್‌, ಕಿರಣ್‌ ರಿಜಿಜು, ರಾಜ್ಯವರ್ಧನ್‌ ರಾಥೋರ್‌, ಅರ್ಜುನ್‌ ರಾಮ್‌ ಮೆಘಾವಲ್, ಮಹೇಶ್‌ ಶರ್ಮಾ, ಸಂತೋಷ್‌ ಗಂಗ್ವಾರ್‌, ರಾಮ್‌ ಕೃಪಾಲ್ ಯಾದವ್‌, ಹರ್ಸೀಮೃತ್‌ ಕೌರ್‌ ಬಾದಲ್, ಬಾಬುಲ್ ಸುಪ್ರೀಯೋ, ಹರ್ಷವರ್ಧನ್‌, ಓ್ರಮ್‌, ಶ್ರೀಪಾದ್‌ ನಾಯಕ್‌, ಜಿತೇಂದ್ರ ಸಿಂಗ್‌, ಇಂದ್ರಜಿತ್‌ ಸಿಂಗ್‌, ನರೇಂದ್ರ ಸಿಂಗ್‌ ತೋಮರ್‌, ಅಜಯ್‌ ತಮಾ ಅವರೂ ಗೆದ್ದಿದ್ದಾರೆ.

ಗೆದ್ದ ಪ್ರಮುಖ ಸಚಿವರು
•ರಾಜನಾಥ್‌ ಸಿಂಗ್‌-ಲಕ್ನೋ •ನಿತಿನ್‌ ಗಡ್ಕರಿ-ನಾಗ್ಪುರ •ರಾಧಾಮೋಹನ್‌ ಸಿಂಗ್‌- ಪೂರ್ವಿ ಚಂಪಾರಣ್‌ • ರವಿಶಂಕರ್‌ ಪ್ರಸಾದ್‌-ಪಾಟ್ನಾಸಾಹೀಬ್‌ •ಅಶ್ವಿ‌ನ್‌ಕುಮಾರ್‌ ಚೌಬೆ – ಫ‌ರೀದಾಬಾದ್‌

ಸೋತ ಸಚಿವರು
•ಕೆ.ಜೆ.ಅಲ್ಫೋನ್ಸ್‌ – ಎರ್ನಾಕುಲಂ •ಹರ್ದೀಪ್‌ ಪುರಿ – ಅಮೃತಸರ •ಮನೋದ್‌ ಸಿನ್ಹಾ – ಘಾಜೀಪುರ •ಅನಂತ್‌ ಗೀತೆ – ರಾಯ್‌ಘಡ •ಹನ್ಸ್‌ರಾಜ್‌ ಗಂಗಾರಾಮ್‌ – ಚಂದ್ರಾಪುರ

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.