ಮುದ್ದೇಬಿಹಾಳ : ಸಾವಿರಾರು ಜನರ ಶೋಕ ಸಾಗರದ ಮಧ್ಯೆ ಯೋಧನ ಅಂತ್ರಕ್ರಿಯೆ
Team Udayavani, Feb 3, 2022, 2:57 PM IST
ಮುದ್ದೇಬಿಹಾಳ: ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಬುಧವಾರ ಸಾವನ್ನಪ್ಪಿದ ಬಿಎಸ್ಎಫ್ ಯೋಧ ಬಸವರಾಜ ಸಿದ್ದಪ್ಪ ಡೊಂಗರಗಾಂವಿ ಅವರ ಅಂತ್ಯಕ್ರಿಯೆ ಕುಟುಂಬದವರು ಸೇರಿ ಸಾವಿರಾರು ಜನರ ಶೋಕ ಸಾಗರದ ಮದ್ಯೆ ಸೇನಾ ಗೌರವದೊಂದಿಗೆ ಗುರುವಾರ ಮದ್ಯಾಹ್ನ ಸ್ವಗ್ರಾಮ ತಂಗಡಗಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ನೆರವೇರಿತು.
ಮಹಾರಾಷ್ಟ್ರದ ಸಾತಾರ ಕ್ಯಾಂಪ್ ನಿಂದ ಆಗಮಿಸಿದ್ದ ಯೋಧರ ತಂಡ ಸವ ಪೆಟ್ಟಿಗೆಯ ಮೇಲೆ ರಾಷ್ಟ್ರಧ್ವಜ ಹೊದಿಸಿ ಸೇನಾ ಗೌರವ ಅರ್ಪಿಸಿತು. ಯೋಧನ ಪಾರ್ಥೀವ ಶರೀರವನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ನಡೆಸಲಾಯಿತು. ಬುಧವಾರ ರಾತ್ರಿ ಮುದ್ದೇಬಿಹಾಳದಿಂದ ತಂಗಡಗಿಗೆ ಆಗಮಿಸಿದ ಪಾರ್ಥೀವ ಶರೀರಕ್ಕೆ ಭಾವಪೂರ್ಣ ಸ್ವಾಗತ ನೀಡಿ ಪಂಚಾಯಿತಿ ಆವರಣದಲ್ಲೆ ರಾತ್ರಿ ಇಡೀ ಸಾರ್ವಜನಿಕರ ದರ್ಶನಕ್ಕಿರಿಸಲಾಗಿತ್ತು.
ಬೆಳಿಗ್ಗೆ ಅಂತಿಮ ಕ್ರಿಯಾವಿಧಿಗಳನ್ನು ನೆರವೇರಿಸಲಾಯಿತು. ಈ ವೇಳೆ ಯೋಧನ ತಾಯಿ, ಪತ್ನಿ, ಸಹೋದರ, ಪುಟ್ಟ ಮಕ್ಕಳು, ಬಂಧುಗಳು ಮತ್ತು ಅಪಾರ ಜನರ ಶೋಕದ ಕಟ್ಟೆ ಒಡೆದಿತ್ತು. ಬಸವರಾಜ್ ಅಮರ್ ರಹೆ ಘೋಷಣೆಗಳು ಮೊಳಗುತ್ತಿದ್ದವು.
ಅಂತಿಮ ಸಂಸ್ಕಾರಕ್ಕು ಮುನ್ನ ಶವ ಪೆಟ್ಟಿಗೆಯ ಮೇಲೆ ಹೊದಿಸಿದ್ದ ರಾಷ್ಟ್ರದ್ವಜವನ್ನು ಯೋಧರು ಮೃತ ಯೋಧನ ತಾಯಿ, ಪತ್ನಿಗೆ ಹಸ್ತಾಂತರಿಸಿದರು. ಯೋಧ ಬಸವರಾಜ ಸೇವೆಯಲ್ಲಿದ್ದ ರೆಜಿಮೆಂಟಿನಿಂದ ಕಳಿಸಲಾಗಿದ್ದ ಶವ ಸಂಸ್ಕಾರದ ಸಹಾಯಧನದ ಮೊತ್ತವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ತಂಗಡಗಿ ಮತ್ತು ಸುತ್ತಲಿನ ಹಳ್ಳಿಗಳ ಸಾವಿರಾರು ಜನ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಶ್ರೀರಂಗಪಟ್ಟಣದ ಈ ಅಧಿಕಾರಿಗೆ ಪ್ರತಿ ಕೆಲಸದಲ್ಲೂ ಪರ್ಸಂಟೇಜ್ ಕೊಡಬೇಕಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ