ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ
ಸಚಿವ ಮುರುಗೇಶ್ ನಿರಾಣಿ ಅವರ ಸತತ ಪ್ರಯತ್ನದ ಫಲ
Team Udayavani, Oct 18, 2021, 7:43 PM IST
ದುಬೈ : ಭಾರತ ಹಾಗೂ ಯುನೈಟೆಡ್ ಅರಬ್ ಯಮಿರೆಟ್ಸ್ ( ಯುಎಇ) ನಡುವೆ ಹೂಡಿಕೆ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಪಡಿಸಲು ಗಲ್ಫ್ ಇಸ್ಲಾಮಿಕ್ ಹೂಡಿಕೆ ( GII) ತನ್ನ ಕಚೇರಿಯನ್ನು ರಾಜಧಾನಿ ಬೆಂಗಳೂರಿನಲ್ಲಿ ತೆರೆಯಲು ಮುಂದೆ ಬಂದಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ,ಹಾಗೂ ಐಟಿ ಮತ್ತು ಬಿಟಿ ಸಚಿವ ಸಿಎನ್ ಅಶ್ವಥ್ ನಾರಾಯಣ್ ಅವರುಗಳು ದುಬೈ ಎಕ್ಸ್ಪೋ 2020 ಸಮಾರಂಭದಲ್ಲಿ
ಸೋಮವಾರ ಕರ್ನಾಟಕ ವಸ್ತುಪ್ರದರ್ಶನ ಕೇಂದ್ರದಲ್ಲಿ ಪ್ರಮುಖ ಉದ್ಯಮಿಗಳ ಜೊತೆ ನಡೆಸಿದ ‘ ಯಶಸ್ವಿ’ ಮಾತುಕತೆ ಪರಿಣಾಮ ‘ ಐಟಿ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಗಲ್ಫ್ ಇಸ್ಲಾಮಿಕ್ ಹೂಡಿಕೆ ಕಚೇರಿಯನ್ನು ಆರಂಭಿಸಲು ತೀರ್ಮಾನಿಸಲಾಯಿತು.
ಮುಂದಿನ 3 ವರ್ಷಗಳಲ್ಲಿ ಭಾರತದಲ್ಲಿ 500 ಮಿಲಿಯನ್ ಯುಎಸ್ (₹ 3,500 ಕೋಟಿ) ಹೂಡಿಕೆ ಮಾಡಲು ಜಿಐಐ ಯೋಜಿಸಿದ್ದು, ಇದರಿಂದಾಗಿ ಸಾವಿರಾರು ಉದ್ಯೋಗಗಳು
ಸೃಷ್ಟಿಯಾಗುವ ಸಂಭವವಿದೆ.
ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ಮೆಂಟ್ ಯುಎಇ ಮೂಲದ ಪ್ರಮುಖ ಷರಿಯಾ-ಕಂಪ್ಲೈಂಟ್ ಹಣಕಾಸು ಸೇವೆಗಳ ಸಂಸ್ಥೆಯಾಗಿದ್ದು, ನಿರ್ವಹಣೆಯ ಅಡಿಯಲ್ಲಿ $ 2 ಬಿಲಿಯನ್ಗಿಂತ ಹೆಚ್ಚಿನ ಆಸ್ತಿಗಳನ್ನು ಹೊಂದಿದೆ.
ಇದನ್ನೂ ಓದಿ : ಮುಂಬರುವ ದಿನಗಳಲ್ಲಿ ಕರ್ನಾಟಕ ಎಲ್ಲಾ ಕ್ಷೇತ್ರದಲ್ಲೂ ಅಗ್ರಸ್ಥಾನ ಪಡೆಯಲಿದೆ :ಅಶ್ವತ್ಥನಾರಾಯಣ
ಜಿಐಎಯು ತಮ್ಮ ಮಧ್ಯಪ್ರಾಚ್ಯ ವಿಸ್ತರಣಾ ಯೋಜನೆಗಳನ್ನು ಹೆಚ್ಚಿಸಲು ಭಾರತೀಯ ಸ್ಟಾರ್ಟ್ಅಪ್ಗಳೊಂದಿಗೆ ಸಹಯೋಗವನ್ನು ಪಡೆಯುವ ಯೋಜನೆಯನ್ನೂ ಹಾಕಿಕೊಂಡಿದೆ.
ಇದೇ ಸಂದರ್ಭದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ವ್ಯಾಪಾರವನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ( GII) ಸಮೂಹಗಳೊಂದಿಗೆ ವ್ಯಾಪಾರ ಒಪ್ಪಂದ ( MOU) ಮಾಡಿಕೊಂಡಿತು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮಾತನಾಡಿ, ” ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ತೆರೆಯಲು ಜಿಐಐ ನಿರ್ಧಾರವು ಭಾರತ ಮತ್ತು ಯುಎಇ ನಡುವಿನ ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಸಂತಸ ವ್ಯಕ್ತಪಡಿಸಿದರು.
ನಮ್ಮ ರಾಜ್ಯವು ಹೂಡಿಕೆ ಮಾಡಲು ಸೂಕ್ತ
ತಾಣವಾಗಿದೆ ಏಕೆಂದರೆ, ನಾವು ಉದ್ಯಮ-ವಹಿವಾಟು ನಡೆಸಲು ಸುಲಭ ಮತ್ತು ಹೂಡಿಕೆದಾರರ ಸ್ನೇಹಿ ವಾತಾವರಣವನ್ನುನಿರ್ಮಿಸಿದ್ದೇವೆ. ಬೆಂಗಳೂರಿನಲ್ಲಿ ಜಿಐಐ ಕಚೇರಿ ಆರಂಭವಾಗುತ್ತಿರುವುದರಿಂದ ಹೆಚ್ಚಿನ ಹೂಡಿಕೆಗಳು, ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದ ಕಾನ್ಸುಲ್ ಜನರಲ್ ಡಾ ಅಮಾನ್ ಪುರಿ ಮಾತನಾಡಿ,ದುಬೈಗೆ ಕರ್ನಾಟಕ ಏಷ್ಯಾ ಖಂಡದ ರಾಜಧಾನಿಯಾಗಿದೆ.ಬೆಂಗಳೂರಿನಲ್ಲಿ ಭಾರತದ 40% ಯುನಿಕಾರ್ನ್ಗಳಿಗೆ ನೆಲೆಯಾಗಿದೆ 5 ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕತೆಯಾಗುವ ಭಾರತದ ಅನ್ವೇಷಣೆಯಲ್ಲಿ ಯುಎಇ ದೊಡ್ಡ ಪಾಲುದಾರವಾಗಿದೆ ಎಂದು ಪ್ರಶಂಸಿದರು.
ಇದೇ ವೇಳೆ ಶ್ರೀ ಮೊಹಮ್ಮದ್ ಅಲ್ಹಾಸನ್ ಮತ್ತು ಶ್ರೀ ಪಂಕಜ್ ಗುಪ್ತಾ, ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ಮೆಂಟ್ಸ್ ನ ಸ್ಥಾಪಕ ಪಾಲುದಾರರು ಮತ್ತು ಸಹ ಸಿಇಒಗಳು ತಮ್ಮ ಜಂಟಿ ಹೇಳಿಕೆಯಲ್ಲಿ,
“ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಜಿಐಐ ಕಚೇರಿಯನ್ನು ಸ್ಥಾಪಿಸುವ ನಮ್ಮ ಯೋಜನೆಗಳನ್ನು ಅಧಿಕೃತವಾಗಿ ಘೋಷಿಸಲು ನಾವು ಸಂತೋಷಪಡುತ್ತೇವೆ” ಎಂದರು.
ಭಾರತವು ಜಿಐಐಗೆ ಒಂದು ಪ್ರಮುಖ ಹೂಡಿಕೆಯ ತಾಣವಾಗಿದೆ.ಈ ವಿಸ್ತರಣೆಯು ದೇಶದಲ್ಲಿ ಬೆಳೆಯುತ್ತಿರುವ ಆರಂಭ ಮತ್ತು ಉನ್ನತ ಬೆಳವಣಿಗೆಯ ಉದ್ಯಮ ಜಾಗದಲ್ಲಿ ಭವಿಷ್ಯದ ಹೂಡಿಕೆಗಳಿಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಭಾರತ ಬೆಳವಣಿಗೆ ಪೋರ್ಟ್ಫೋಲಿಯೋ ಸರಣಿಯ ಮೂಲಕ ನಮ್ಮ ಪ್ರಾಥಮಿಕ ಹೂಡಿಕೆ ಸುತ್ತುಗಳ ಯಶಸ್ಸನ್ನು ಗಮನಿಸಿದರೆ, ₹ 1,000 ಕೋಟಿಗೂ ಅಧಿಕ ಮೌಲ್ಯದ ವಹಿವಾಟು ನಡೆಸಲು ಉತ್ಸುಕತೆ ಹೊಂದಿದ್ದೇವೆ. ಭಾರತ-ಯುಎಇ ಹೂಡಿಕೆ ಕಾರಿಡಾರ್ ಅನ್ನು ಹೆಚ್ಚಿಸಲು ಕಾರ್ಯತಂತ್ರವಾಗಿ ಕೊಡುಗೆ ನೀಡಲು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.
ಉದ್ಯಮಿಗಳ ಆಕರ್ಷಣೆ
ಇನ್ನು ಕಳೆದ ಮೂರು ದಿನಗಳಿಂದ ಸಚಿವ ಮುರುಗೇಶ್ ನಿರಾಣಿ ಅವರು ಹಲವಾರು ಉದ್ಯಮಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮನವರಿಕೆ ಮಾಡಿದ್ದಾರೆ.
ನಿರಂತರವಾಗಿ ಹೆಸರಾಂತ ನಿಯೋಗಗಳನ್ನು ಭೇಟಿ ಮಾಡಿರುವ ಅವರು, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವಾರು ಕಂಪನಿಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಲುಲು ಗುಂಪು, ಡುಕಾಬ್ ಮತ್ತು ಎಲೆಕ್ಟ್ರಿಕ್ ವೇ ಇತರವುಗಳು ರಾಜ್ಯದಲ್ಲಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದವು.
ನಿರಾಣಿ ಅವರು, B2G (ಬಿಸಿನೆಸ್-ಟು-ಗವರ್ನಮೆಂಟ್) ಸಭೆಯನ್ನು ಗೌರವ್ ಖನ್ನಾ, ಗ್ರೂಪ್ ಕಾರ್ಪೊರೇಟ್ ಫೈನಾನ್ಸ್ ಮತ್ತು ಡಿಪಿ ವರ್ಲ್ಡ್ ನ ವ್ಯಾಪಾರ ಅಭಿವೃದ್ಧಿ ಉಪಾಧ್ಯಕ್ಷರ ಜೊತೆ ಮಾತುಕತೆ ನಡೆಸಿದರು.
ಕೇಬಲ್ಗಳು, ಕೈಗಾರಿಕಾ ದೀಪಗಳು ಮತ್ತು ವಿದ್ಯುತ್ ವ್ಯವಸ್ಥೆಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ವೇ ಕಂಪನಿಯ ಸಿಇಒ ಅಥೀಕ್ ಅನ್ಸಾರಿ, ತಾಮ್ರದ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಲ್ಯೂಮಿನಿಯಂ ತಂತಿ ಮತ್ತು ಕೇಬಲ್ ಉತ್ಪನ್ನಗಳ ಜನರಲ್ ಮ್ಯಾನೇಜರ್, ಸರ್ಕಾರಿ ವ್ಯವಹಾರಗಳ ಮೊಹಮ್ಮದ್ ಎ. ಅಲ್ ಕುರಾಶಿ, ಆಸ್ಟರ್ ಹೆಲ್ತ್ ಕೇರ್ ಡಿಎಂ ಶ್ರೀನಾಥ್ ಪಿ ರೆಡ್ಡಿ ಸೇರಿದಂತೆ ಅನೇಕ ಉದ್ಯಮಿಗಳನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
Airstrike; ಅಫ್ಘಾನಿಸ್ಥಾನದಲ್ಲಿ ಪಾಕ್ನಿಂದ ವೈಮಾನಿಕ ದಾಳಿ: 8 ಸಾವು
Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!
America ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಹತ್ಯೆ: 3ನೇ ಕೇಸು
Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…
MUST WATCH
ಹೊಸ ಸೇರ್ಪಡೆ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Vande Bharat: 1.5 ವರ್ಷದಲ್ಲಿ ವಂದೇ ಭಾರತ್ಗೆ 50 ಬಾರಿ ಕಲ್ಲೆಸೆತ
Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು
Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್ಗೆ ದೂರು
Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ