ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

12 ರಾಶಿಗಳಿವೆ. ಈ 27 ನಕ್ಷತ್ರಗಳು, 12 ರಾಶಿಗಳಲ್ಲಿ ತಮ್ಮ ಸ್ಥಾನಗಳನ್ನು 3 ಭಾಗಗಳಾಗಿ ಪಡೆದುಕೊಂಡಿದೆ.

Team Udayavani, Apr 8, 2022, 2:27 PM IST

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ವೇದಾಂಗ ಜ್ಯೋತಿಷ್ಯದಲ್ಲಿ ನವಗ್ರಹಗಳಿಗಿಂತಲೂ ನಕ್ಷತ್ರಗಳಿಗೆ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಸಾಮಾನ್ಯವಾಗಿ ನಾವು ಜನ್ಮ ನಕ್ಷತ್ರವನ್ನು ಮಾತ್ರ ತಿಳಿದುಕೊಳ್ಳುತ್ತೇವೆ. ಜನ್ಮ ನಕ್ಷತ್ರವೆಂದರೆ ಒಂದು ವ್ಯಕ್ತಿಯ ಜನನ ಸಮಯದಲ್ಲಿ ಚಂದ್ರ ಯಾವ ನಕ್ಷತ್ರದಲ್ಲಿ ಇರುತ್ತದೆ ಮತ್ತು ಜನ್ಮ ರಾಶಿ ಅಂದರೆ ಆ ನಕ್ಷತ್ರ ಇರುವ ರಾಶಿ. ಅದೇ ಪ್ರಕಾರ ಇತರ ಗ್ರಹಗಳೂ ಕೂಡಾ ಜನನದ ಸಮಯದಲ್ಲಿ ಒಂದೊಂದು ನಕ್ಷತ್ರದಲ್ಲಿಯ, ಅದೇ ಪ್ರಕಾರ ಒಂದೊಂದು ರಾಶಿಯಲ್ಲಿಯೂ ಇರುತ್ತದೆ. ಜ್ಯೋತಿಷ್ಯದ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ನಕ್ಷತ್ರಗಳನ್ನು ಪರಿಗಣನೆ ಮಾಡಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ, ಚಂದ್ರಾದಿಯಾಗಿ ರಾಹು ಕೇತು ತನಕ ನವಗ್ರಹಗಳಿಗೆ ಪ್ರಾಮುಖ್ಯತೆಯನ್ನು ಕೊಡುವ ರೀತಿಯಲ್ಲೇ ನಕ್ಷತ್ರಗಳಿಗೂ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಒಟ್ಟು 27 ನಕ್ಷತ್ರಗಳಿಗೆ. ಅದೇ ರೀತಿ 12 ರಾಶಿಗಳಿವೆ. ಈ 27 ನಕ್ಷತ್ರಗಳು, 12 ರಾಶಿಗಳಲ್ಲಿ ತಮ್ಮ ಸ್ಥಾನಗಳನ್ನು 3 ಭಾಗಗಳಾಗಿ ಪಡೆದುಕೊಂಡಿದೆ.

ಉದಾಹರಣೆಗೆ: ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಗಳಲ್ಲಿ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ, ಆದ್ರಾ, ಪುನರ್ವಸು, ಪುಷ್ಯ, ಆಶ್ಲೇಷ.

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಗಳಲ್ಲಿ, ಮಘಾ, ಪೂರ್ವ ಪಾಲ್ಗುಣಿ, ಉತ್ತರ ಪಾಲ್ಗುಣಿ, ಹಸ್ತ, ಚಿತ್ರ, ಸ್ವಾತಿ, ವಿಶಾಖ, ಅನುರಾಧ, ಜ್ಯೇಷ್ಠ,

ಧನು, ಮಕರ, ಕುಂಭ, ಮೀನ ರಾಶಿಗಳಲ್ಲಿ, ಮೂಲ, ಪೂರ್ವ ಆಷಾಢ, ಉತ್ತರ ಆಷಾಢ, ಶ್ರಾವಣ, ಧನಿಷ್ಠ, ಶತಭಿಷ, ಪೂರ್ವಭಾದ್ರ, ಉತ್ತರಭಾದ್ರ, ರೇವತಿ ನಕ್ಷತ್ರಗಳು ತಮ್ಮ ಸ್ಥಾನವನ್ನು ಪಡೆದುಕೊಂಡಿದೆ.

ಈಗ ನವಾಂಶದ ಬಗ್ಗೆ ತಿಳಿಯೋಣ:

ನವಾಂಶ ಅಂದರೆ 9 ಭಾಗ, ಸೌರವ್ಯೂಹವನ್ನು ಒಂದು ವೃತ್ತವನ್ನಾಗಿ ತೆಗೆದುಕೊಂಡು, ಅಂದರೆ 360 ಡಿಗ್ರಿ, ಅದರಲ್ಲಿ 12 ರಾಶಿಗಳು, ಪ್ರತಿ ರಾಶಿ 30 ಡಿಗ್ರಿ (360 % 12= 30 ಡಿಗ್ರಿ), 27 ನಕ್ಷತ್ರಗಳು (360 ಭಾಗಿಸು 27= 13 ಡಿಗ್ರಿ 20’) ಅಂದರೆ ಪ್ರತಿ ನಕ್ಷತ್ರದ ವಿಸ್ತಾರ 13 ಡಿಗ್ರಿ, 20 ನಿಮಿಷ.

ಪ್ರತಿ ನಕ್ಷತ್ರದ ವಿಸ್ತಾರವನ್ನು (13 ಡಿಗ್ರಿ, 20 ಮಿನಿಟ್) ನಾಲ್ಕು ಭಾಗ ಮಾಡಿದಾಗ ಪ್ರತಿ ಭಾಗ 3 ಡಿಗ್ರಿ, 20 ಮಿನಿಟ್ ಆಗುತ್ತದೆ. ಅದನ್ನು ಚರಣ ಎಂಬುದಾಗಿಯೂ, ಪಾದ ಎಂದೂ ಕರೆಯುತ್ತಾರೆ. ಅಂದರೆ ಒಂದು ಪಾದ 3 ಡಿಗ್ರಿ 20 ಮಿನಿಟ್.

ನಾಲ್ಕು ಪಾದ, = 13 ಡಿಗ್ರಿ 20 ಮಿನಿಟ್ ( 3ಡಿಗ್ರಿ 20 + 3 ಡಿಗ್ರಿ 20 + 3 ಡಿಗ್ರಿ 20 + 3 ಡಿಗ್ರಿ 20 ಮಿನಿಟ್ = 13 ಡಿಗ್ರಿ 20 ಮಿನಿಟ್). ಒಂದು ರಾಶಿ ಅಂದರೆ 30 ಡಿಗ್ರಿ, ಹಾಗಾದರೆ ಒಂದು ರಾಶಿಯಲ್ಲಿ 9 ಪಾದಗಳೂ (ಚರಣ, ಅಂಶ) ಇದೆ ಅಂತಾಯಿತು. (3 ಡಿಗ್ರಿ 20 ಮಿನಿಟ್ X9 = 30 ಡಿಗ್ರಿ).

ಅಂದರೆ ಮೇಷ ರಾಶಿಯಲ್ಲಿ..

ಅಶ್ವಿನಿ 4 ಭಾಗ (ಪಾದ, ಚರಣ)

ಭರಣಿ 4 ಭಾಗ (ಪಾದ, ಚರಣ)

ಕೃತಿಕ 1 ಭಾಗ (ಪಾದ, ಚರಣ)

ವೃಷಭ ರಾಶಿಯಲ್ಲಿ…

ಕೃತಿಕ 3 ಭಾಗ

ರೋಹಿಣಿ 4 ಭಾಗ

ಮೃಗಶಿರ 2 ಭಾಗ

ಮಿಥುನ ರಾಶಿಯಲ್ಲಿ…

ಮೃಗಶಿರ 2 ಭಾಗ

ಆದ್ರಾ 4 ಭಾಗ

ಪುನರ್ವಸು 3 ಭಾಗ

ಕರ್ಕಾಟಕ ರಾಶಿಯಲ್ಲಿ…

ಪುನರ್ವಸು 1 ಭಾಗ

ಪುಷ್ಯ 4 ಭಾಗ

ಅಶ್ಲೇಷ 4ಭಾಗ

ಮೇಷದಲ್ಲಿ 9 ನವಾಂಶ, ವೃಷಭದಲ್ಲಿ 9 ನವಾಂಶ, ಮಿಥುನದಲ್ಲಿ 9 ನವಾಂಶ, ಕರ್ಕಾಟಕದಲ್ಲಿ 9 ನವಾಂಶ. ಹೀಗೆ ಮುಂದುವರೆದು, ಸಿಂಹದಿಂದ ವೃಶ್ಚಿಕದವರೆಗೆ, ಮಘ ಆದಿಯಾಗಿ ಜ್ಯೇಷ್ಠವೂ, ಧನುದಿಂದ ಮೀನಾದವರೆಗೆ, ಮೂಲ ಆದಿಯಾದಿ ರೇವತಿ ನಕ್ಷತ್ರದ ಪ್ರತಿ ಪಾದವು ತಮ್ಮ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರ ಪಾದವು ವಿಶೇಷ ಸ್ಥಾನವನ್ನು ಪಡೆದುಕೊಂಡಿರುತ್ತದೆ. ನಕ್ಷತ್ರ ಪಾದದ ಆಧಾರದ ಮೇಲೆ ನವಾಂಶ ಕುಂಡಲಿಯನ್ನು ಮಾಡಲಾಗುತ್ತದೆ. ನವಾಂಶ ಕುಂಡಲಿಯು ಜನ್ಮ ಕುಂಡಲಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗ್ರಹಗಳ ನಿಜವಾದ ಸಾಮರ್ಥ್ಯವನ್ನು ನೋಡಲು ನವಾಂಶ ಕುಂಡಲಿಯನ್ನು ಪರೀಕ್ಷಿಸಬೇಕಾಗುತ್ತದೆ.

ಉದಾಹರಣೆಗೆ, ಜನ್ಮ ಕುಂಡಲಿಯಲ್ಲಿ ಶನಿ ಮೇಷ ರಾಶಿಯಲ್ಲಿದ್ದರೆ, ಸಾಮಾನ್ಯವಾಗಿ ಶನಿದಶಾ(ಕಾಲ)ದಲ್ಲಿ ಅಶುಭ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಆದರೆ ನವಾಂಶ ಕುಂಡಲಿಯಲ್ಲಿ ಶನಿ ಒಂದು ವೇಳೆ ತುಲಾ ರಾಶಿಯಲ್ಲಿದ್ದರೆ, ಅತ್ಯಂತ ಶುಭ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಆದ ಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ ನವಾಂಶವು ಬಹಳ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಪ್ರತಿ ನಕ್ಷತ್ರವು 4 ಅಂಶಗಳೊಂದಿಗೆ, 27 ನಕ್ಷತ್ರವು 108 ಅಂಶಗಳನ್ನು ಹೊಂದಿದೆ. ಆದ ಕಾರಣ 108 ಅಥವಾ ಅಷ್ಟೋತ್ತರಿ (ಅಷ್ಟ ಶತ ಉತ್ತರಿ)ಗೆ ಬಹಳ ಪ್ರಾಮುಖ್ಯತೆಯನ್ನು ಜ್ಯೋತಿಷ್ಯದಲ್ಲಿ ನೀಡಲಾಗಿದೆ.

ರವೀಂದ್ರ.ಎ, ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶ್ಲೇಷಕರು, ಜ್ಯೋತಿಷ್ಯ ವಿಶಾರದ

ಉಡುಪಿ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.