ಕೆಂಪುಕೋಟೆಯ ಸ್ಮರಣೀಯ ಗಳಿಗೆ: ನೀರಜ್
Team Udayavani, Aug 16, 2021, 12:35 AM IST
ಹೊಸದಿಲ್ಲಿ: ಐತಿಹಾಸಿಕ ಕೆಂಪುಕೋಟೆಯಲ್ಲಿದ್ದು, ದೇಶದ ಸ್ವಾತಂತ್ರ್ಯ ಸಡಗರದ ಈ ಅಮೃತ ಮಹೋತ್ಸದ ಗಳಿಗೆಯನ್ನು ಸವಿದದ್ದು ತನಗೊಲಿದ ಮಹಾನ್ ಗೌರವ, ಇದು ಇನ್ನೊಂದು ಸ್ಮರಣೀಯ ಗಳಿಗೆ ಎಂಬುದಾಗಿ ಚಿನ್ನದ ಆ್ಯತ್ಲೀಟ್ ನೀರಜ್ ಚೋಪ್ರಾ ಹೇಳಿದ್ದಾರೆ.
“ಕ್ರೀಡಾಪಟುವಾಗಿ ಹಾಗೂ ಓರ್ವ ಸೈನಿಕನಾಗಿ ಐತಿಹಾಸಿಕ ಕೆಂಪುಕೋಟೆಯ ಸ್ವಾತಂತ್ರ್ಯ ಸಡಗರದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದ್ದು ನನ್ನ ಪಾಲಿನ ಸ್ಮರಣೀಯ ಗಳಿಗೆ. ನನಗೆ ಲಭಿಸಿದ ಮಹಾನ್ ಗೌರವ. ನಮ್ಮ ರಾಷ್ಟ್ರಧ್ವಜ ಮೇಲೇರಿ ಅರಳಿದಾಗ ನನ್ನ ಹೃದಯ ತುಂಬಿ ಬಂತು. ಜೈ ಹಿಂದ್’ ಎಂದು ನೀರಜ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ 8 ದಿನಗಳ ಹಿಂದಷ್ಟೇ ಜಾವೆಲಿನ್ ಬಂಗಾರ ಜಯಿಸಿದ್ದ ನೀರಜ್ ಚೋಪ್ರಾ ಭಾರತದ ಕ್ರೀಡಾಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿದ್ದರು. ಆದರೆ ತೀವ್ರ ಜ್ವರದಿಂದಾಗಿ ಆ. 15ರ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವ ಕಾಶ ತಪ್ಪಬಹುದೆಂಬ ಭೀತಿ ಅವರನ್ನು ಆವರಿಸಿತ್ತು. ಹಾಗೇನೂ ಆಗಲಿಲ್ಲ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದ ಬಹುತೇಕ ಕ್ರೀಡಾಪಟುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ಗುಣಗಾನ
ಟೋಕಿಯೋದಲ್ಲಿ ಅಮೋಘ ಸಾಧನೆಗೈದ ದೇಶದ ಕ್ರೀಡಾ ಸಾಧಕರು ಈ ಬಾರಿಯ ಸ್ವಾತಂತ್ರ್ಯ ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇವರಿಗೆ ಆಹ್ವಾನನಿತ್ತಿದ್ದರು. ಪಿ.ವಿ. ಸಿಂಧು, ಮೀರಾಬಾಯಿ ಚಾನು, ಭಜರಂಗ್ ಪುನಿಯ, ರವಿಕುಮಾರ್ ದಹಿಯಾ, ಹಾಕಿಪಟುಗಳೆಲ್ಲ ಸಮಾರಂಭವನ್ನು ಕಣ್ತುಂಬಿಸಿಕೊಂಡರು.
“ನಮ್ಮ ಯುವ ಪೀಳಿಗೆಯ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ದೇಶವನ್ನೇ ಹೆಮ್ಮೆಪಡುವಂತೆ ಮಾಡಿದ್ದಾರೆ. ನೀವೆಲ್ಲ ನಮ್ಮ ಹೃದಯವನ್ನು ಗೆಲ್ಲುವ ಜತೆಗೆ ಈ ದೇಶದ ಯುವ ಜನತೆಗೆ ದೊಡ್ಡ ಸ್ಫೂರ್ತಿ ಆಗಿದ್ದೀರಿ’ ಎಂಬುದಾಗಿ ಪ್ರಧಾನಿ ಮೋದಿ ಒಲಿಂಪಿಕ್ಸ್ ಸಾಧಕರ ಗುಣಗಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ