ನೇಪಾಲದ ನಕ್ಷೆ ಮೊಂಡಾಟ

ಭಾರತದಿಂದ ವಿರೋಧದ ನಡುವೆ ವಿವಾದಿತ ನಕ್ಷೆ ಅಂಗೀಕರಿಸಿದ ನೆರೆ ದೇಶ

Team Udayavani, Jun 14, 2020, 7:00 AM IST

ನೇಪಾಲದ ನಕ್ಷೆ ಮೊಂಡಾಟ

ಕಾಠ್ಮಂಡು: ಚೀನದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ನೇಪಾಲವು ವಿವಾದಿತ ನಕ್ಷೆಗೆ ಕೊನೆಗೂ ಸಂಸತ್ತಿನಲ್ಲಿ ಶನಿವಾರ ಅಂಗೀಕಾರದ ಮುದ್ರೆಯೊತ್ತಿದೆ. ಭಾರತದ ತೀವ್ರ ವಿರೋಧದ ನಡುವೆಯೂ ಉತ್ತರಾಖಂಡದ ಕಾಲಾಪಾನಿ, ಲಿಪುಲೇಕ್‌, ಲಿಂಪಿಯಾಧುರಾಗಳನ್ನು ತನ್ನದೆಂದು ಅಧಿಕೃತವಾಗಿ ಭೂಪಟದಲ್ಲಿ ಪ್ರಕಟಿಸಿ ಉದ್ಧಟತನ ಪ್ರದರ್ಶಿಸಿದೆ.

ನಕ್ಷೆ ಸಂಬಂಧಿತವಾಗಿ ಕೆ.ಪಿ. ಶರ್ಮಾ ಓಲಿ ಸರಕಾರ ಮಂಡಿಸಿದ್ದ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಸಂಪೂರ್ಣ ಬಹುಮತ ಸಿಕ್ಕಿದೆ. ಈ ವಿಚಾರದಲ್ಲಿ ಅಲ್ಲಿನ ವಿಪಕ್ಷಗಳೂ ಒಗ್ಗಟ್ಟು ಪ್ರದರ್ಶಿಸಿವೆ. ಎನ್‌ಸಿಪಿ, ನೇಪಾಲಿ ಕಾಂಗ್ರೆಸ್‌, ರಾಷ್ಟ್ರೀಯ ಜನತಾ ಪಕ್ಷ- ನೇಪಾಲ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಸಹಿತ ಎಲ್ಲ 258 ಸಂಸದರೂ ಮಸೂದೆಯ ಪರ ಮತ ಚಲಾಯಿಸಿದ್ದಾರೆ.

ಮತದಾನಕ್ಕೆ ಮುನ್ನ ಹೌಸ್‌ ಆಫ್ ರೆಪ್ರಸೆಂಟೇ ಟಿವ್ಸ್‌ನಲ್ಲಿ ಮಸೂದೆ ಕುರಿತು 4 ತಾಸುಗಳ ಚರ್ಚೆ ನಡೆದಿತ್ತು. ಕಾಲಾಪಾನಿ, ಲಿಪುಲೇಕ್‌, ಲಿಂಪಿಯಾ ಧುರಾಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವೆಲ್ಲ ಕ್ರಮ ತೆಗೆದುಕೊಳ್ಳಬಹುದು ಎಂದು ಓಲಿ, ಪಕ್ಷದ ಸಂಸದರನ್ನು ಕೇಳಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ಗಡಿಯಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲು ಕಮ್ಯೂನಿಸ್ಟ್‌ ಪಾರ್ಟಿ ಆಫ್ ನೇಪಾಲ (ಮಾವೋವಾದಿ)ದ ಕೆಲವು ಸದಸ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಂದೇನು?
ಕೆಳಮನೆಯಲ್ಲಿ ಅಂಗೀಕೃತವಾದ ಈ ಮಸೂದೆ ಯನ್ನು ರಾಷ್ಟ್ರೀಯ ಅಸೆಂಬ್ಲಿಗೆ ಕಳುಹಿಸಲಾಗುತ್ತದೆ. ಮಸೂದೆಯ ನಿಬಂಧನೆಗಳ ವಿರುದ್ಧ ಏನಾದರೂ ತಿದ್ದುಪಡಿ ಸೂಚಿಸಲು ಅಸೆಂಬ್ಲಿ ಸದಸ್ಯರಿಗೆ 72 ತಾಸು ಕಾಲಾವಕಾಶವಿರುತ್ತದೆ. ಅಲ್ಲಿ ಅಂಗೀಕರಿಸ ಲ್ಪಟ್ಟ ಬಳಿಕ ರಾಷ್ಟ್ರಪತಿಗೆ ಸಲ್ಲಿಕೆಯಾಗುತ್ತದೆ. ನೇಪಾಲದ ಈ ನಡೆ ಆಕ್ಷೇಪಾರ್ಹವಾದುದು ಎಂದು ಭಾರತೀಯ ವಿದೇಶಾಂಗ ಖಾತೆ ಪ್ರತಿಕ್ರಿಯಿಸಿದೆ.

ನೇಪಾಲಕ್ಕೇ ಗೊಂದಲ
ಮೂರು ದಿನಗಳ ಹಿಂದಷ್ಟೇ ಓಲಿ ಸರಕಾರ ವಿವಾದಿತ ಪ್ರದೇಶಗಳ ಐತಿಹಾಸಿಕ ಸಂಗತಿ, ಪುರಾವೆ ಸಂಗ್ರಹಿಸಲು ತಜ್ಞರ ತಂಡ ನೇಮಿಸಿತ್ತು. ನಕ್ಷೆ ಬಿಡುಗಡೆಯ ಹಂತ ದಲ್ಲಿರುವಾಗ ಈ ತಂಡ ರಚಿಸುವ ಅಗತ್ಯ ಏನಿತ್ತು ಎಂದು ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಪ್ರದೇಶಗಳು ತನ್ನದು ಎನ್ನಲು ಸ್ವತಃ ಓಲಿ ಸರಕಾರಕ್ಕೆ ಗೊಂದಲ ಇರುವುದು ಎದ್ದು ತೋರುತ್ತಿದೆ. ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಬಾಕಿ ಇರುವಾಗಲೇ ಓಲಿ ಸರಕಾರ ನಕ್ಷೆಗೆ ಅಧಿಕೃತ ಮುದ್ರೆ ಒತ್ತಿರುವುದು ಭಾರತ- ನೇಪಾಲ ಸಂಬಂಧ ಹದಗೆಡುವಂತೆ ಮಾಡಿದೆ.

“ಭಾರತ ಸಂಬಂಧ ಬಲಿಷ್ಠ’
ಒಂದೆಡೆ ನೇಪಾಲದ ವಿವಾದಿತ ನಕ್ಷೆಯ ತಗಾದೆ. ಇನ್ನೊಂದೆಡೆ ಬಿಹಾರದ ಗಡಿಯಲ್ಲಿ ನೇಪಾಲದ ಪೊಲೀಸ್‌ ಪಡೆಯಿಂದ ಭಾರತೀಯನ ಮೇಲೆ ಗುಂಡಿನ ದಾಳಿ. ಹೀಗಿದ್ದರೂ ಆ ಪುಟ್ಟ ರಾಷ್ಟ್ರವನ್ನು ದೂರ ತಳ್ಳದೆ ಭಾರತ ಹೃದಯ ವೈಶಾಲ್ಯ ಮೆರೆದಿದೆ.

“ನಾವು ನೇಪಾಲದೊಂದಿಗೆ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ ಸಂಬಂಧ ಹಂಚಿ ಕೊಂಡಿದ್ದೇವೆ. ನಮ್ಮ ಮತ್ತು ನೇಪಾಲದ ಸಂಬಂಧ ಬಲಿಷ್ಠವೇ ಆಗಿರುತ್ತದೆ. ಭವಿಷ್ಯ ದಲ್ಲಿ ಇನ್ನಷ್ಟು ಗಾಢ ಸಂಬಂಧವನ್ನು ಹೊಂದ ಲಿದ್ದೇವೆ’ ಎಂದು ಭೂಸೇನೆ ಮುಖ್ಯಸ್ಥ ಎಂ.ಎಂ. ನರವಾಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.