ಚೆಂಡು ಒಂದು ಅಡಿ ದೂರ ಹೋಗಿದ್ದರೆ ಫಲಿತಾಂಶವೇ ಬದಲಾಗುತ್ತಿತ್ತು !

ಬ್ರಾಥ್ ವೇಟ್ ಹೋರಾಡಿದರೂ ಸೋತ ವಿಂಡೀಸ್

Team Udayavani, Jun 23, 2019, 10:49 AM IST

carlos

ಮ್ಯಾಂಚೆಸ್ಟರ್: ಈ ವಿಶ್ವಕಪ್ ನ ಅತೀ ರೋಮಾಂಚನಕಾರಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಐದು ರನ್ ಅಂತರದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಅದ್ಭುತ ಬ್ಯಾಟಿಂಗ್ ಮಾಡಿದ ವಿಂಡೀಸ್ ನ ಕಾರ್ಲೋಸ್ ಬ್ರಾಥ್ ವೇಟ್ ಶತಕ ಸಿಡಿಸಿದರೂ ತಂಡಕ್ಕೆ ಗೆಲುವು ತರುವಲ್ಲಿ ವಿಫಲರಾದರು.

ಇಲ್ಲಿನ ಓಲ್ಡ್ ಟ್ರಫಾರ್ಡ್ ಮೈದಾನದಲ್ಲಿ ಶನಿವಾರ ನಡೆದ 29ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿತ್ತು. ವೇಗಿ ಕಾಟ್ರೆಲ್ ವಿಂಡೀಸ್ ಗೆ ಉತ್ತಮ ಆರಂಭವನ್ನೇ ನೀಡಿದರು. ಕೇವಲ 7 ರನ್ ಗೆ ಕಿವೀಸ್ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಯಾಗಿತ್ತು. ನಂತರ ಒಂದಾದ ನಾಯಕ ವಿಲಿಯಮ್ಸನ್ ಮತ್ತು ಅನುಭವಿ ರಾಸ್ ಟೇಲರ್ ತಂಡಕ್ಕೆ ಆಧಾರವಾದರು. ಟೇಲರ್ 69 ರನ್ ಬಾರಿಸಿದರೆ, ವಿಲಿಯಮ್ಸನ್ ಕೂಟದ ಮತ್ತೊಂದು ಶತಕ ಬಾರಿಸಿದರು(148 ರನ್ ) . ಕೊನೆಯಲ್ಲಿ ಮತ್ತೆ ಕುಸಿತ ಕಂಡ ಕಿವೀಸ್ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು.

ಉತ್ತಮ ಆರಂಭ ಪಡೆಯದ ವಿಂಡೀಸ್
292 ರನ್ ಗುರಿ ಸವಾಲು ಪಡೆದ ವಿಂಡೀಸ್ ಗೆ ಕೂಡ ನಿರೀಕ್ಷಿತ ಆರಂಭ ಸಿಗಲಿಲ್ಲ. ಶೈ ಹೋಪ್ ಮತ್ತು ನಿಕೊಲಸ್ ಪೂರನ್ ತಲಾ ಒಂದು ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಅನುಭವಿ ಗೇಲ್ ಮತ್ತು ಯುವ ಆಟಗಾರ ಶಿಮ್ರನ್ ಹೆತ್ಮೈರ್ ಮೂರನೇ ವಿಕೆಟ್ ಗೆ 122 ರನ್ ಜೊತೆಯಾಟ ನಡೆಸಿದರು. ಹೆತ್ಮೈರ್ 54 ರನ್ ಗಳಿಸಿ ಔಟಾದರೆ, ಗೇಲ್ 87 ರನ್ ಗಳಿಸಿದರು. ಅಲ್ಲಿಯ ತನಕ ವಿಂಡೀಸ್ ಕೈಯಲ್ಲೇ ಇದ್ದ ಪಂದ್ಯವನ್ನು ನ್ಯೂಜಿಲ್ಯಾಂಡ್ ನಿಧಾನವಾಗಿ ತನ್ನೆಡೆಗೆ ಸೆಳೆದುಕೊಂಡಿತು. ವಿಂಡೀಸ್ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು.

ಬ್ರಾಥ್ ವೇಟ್ ಅಬ್ಬರ
ಒಂದು ಹಂತದಲ್ಲಿ 167 ರನ್ ಗೆ ಏಳು ವಿಕೆಟ್ ಕಳೆದು ಕೊಂಡ ವಿಂಡೀಸ್ ಇನ್ನೂರು ರನ್ ಒಳಗೆ ಆಲೌಟ್ ಆಗುವ ಲಕ್ಷಣ ಕಂಡು ಬಂದಿತ್ತು. ಆಗ ಏಕಾಂಗಿಯಾಗಿ ಹೋರಾಡಿದ ಕಾರ್ಲೋಸ್ ಬ್ರಾಥ್ ವೇಟ್ ಕಿವೀಸ್ ಫೀಲ್ಡರ್ ಗಳಿಗೆ ಮೈದಾನದ ಮೂಲೆ ಮೂಲೆಯ ಪರಿಚಯ ಮಾಡಿಸಿದರು. ಬಾಲಂಗೋಚಿಗಳ ಜೊತೆ ಸೇರಿ ಹೋರಾಟ ನಡೆಸಿದ ಬ್ರಾಥ್ ವೇಟ್ ವಿಂಡೀಸ್ ಗೆ ಮತ್ತೆ ಗೆಲುವಿನ ಅಸೆ ಚಿಗುರಿಸಿದರು. ಕೇವಲ 82 ಎಸೆತಗಳಲ್ಲಿ 101 ರನ್ ಬಾರಿಸಿದ ಬ್ರಾಥ್ ವೇಟ್ ಒಂಬತ್ತು ಫೋರ್ ಮತ್ತು ಐದು ಸಿಕ್ಸರ್ ಚಚ್ಚಿದರು.

ಕ್ಷಣ ಕ್ಷಣದ ರೋಮಾಂಚನ
ಕೊನೆಯ ಮೂರು ಓವರ್ ಗಳಲ್ಲಿ ಗೆಲುವಿಗೆ 33 ರನ್ ಅಗತ್ಯವಿತ್ತು. ಈ ಕೂಟದ ಯಶಸ್ವಿ ಬೌಲರ್ ಆದ ಮ್ಯಾಟ್ ಹೆನ್ರಿ ಎಸೆದ 48ನೇ ಓವರ್ ನಲ್ಲಿ ಭರ್ಜರಿ ಮೂರು ಸಿಕ್ಸರ್ ಸಹಾಯದಿಂದ 25 ರನ್ ಚಚ್ಚಿದ ಬ್ರಾಥ್ ವೇಟ್ ಗೆ ಕೊನೆಯ 12 ಎಸೆತಗಳಲ್ಲಿ ಕೇವಲ 8 ರನ್ ಗಳಿಸಲಷ್ಟೇ ಬಾಕಿ ಇತ್ತು. ಆದರೆ ನೀಶಮ್ ಎಸೆದ 49ನೇ ಓವರ್ ನ ಮೊದಲ ಮೂರು ಎಸೆತಗಳಲ್ಲಿ ಯಾವುದೇ ರನ್ ಬರಲಿಲ್ಲ. ನಾಲ್ಕನೇ ಎಸೆತಕ್ಕೆ ಎರಡು ರನ್ ತೆಗೆದ ಬ್ರಾಥ್ ವೇಟ್ ಅದ್ಭುತ ಶತಕ ಪೂರೈಸಿದರು.

ಗೆಲುವಿಗೆ ಕೇವಲ 6 ರನ್ ಅಗತ್ಯವಿತ್ತು. ಕೊನೆಯ ಒಂದು ವಿಕೆಟ್ ಕೈಯಲ್ಲಿತ್ತು. ಓವರ್ ನ ಅಂತಿಮ ಎಸೆತವನ್ನು ಬಾನೆತ್ತೆರಕ್ಕೆ ಎತ್ತಿದ ಕಾರ್ಲೋಸ್ ಬ್ರಾಥ್ ವೇಟ್ ವಿಂಡೀಸ್ ಗೆ ಅದ್ಭುತ ಗೆಲುವು ತಂದರು ಎಂದೇವಿಂಡೀಸ್ ಅಭಿಮಾನಿಗಳು ಭಾವಿಸಿರುವಾಗ ಚೆಂಡು ಸಿಕ್ಸರ್ ಗೆರೆಯ ಹತ್ತಿರವೇ ನಿಂತಿದ್ದ ಟ್ರೆಂಟ್ ಬೌಲ್ಟ್ ಕೈ ಸೇರಿತ್ತು. ಕಿವೀಸ್ 5 ರನ್ ಅಂತರದಿಂದ ಗೆದ್ದಿತು. ಚೆಂಡು ಒಂದು ಅಡಿ ದೂರ ಹೋಗಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತಿತ್ತು. ಒಂದು ಕ್ಷಣ 2016 ಟಿ ಟ್ವೆಂಟಿ ವಿಶ್ವಕಪ್ ಫೈನಲ್ ನೆನಪು ಮಾಡಿದ್ದ ಕಾರ್ಲೋಸ್ ಬ್ರಾಥ್ ವೇಟ್ ಕೊನೆಯವರೆಗೂ ಹೋರಾಡಿದರೂ ಗೆಲುವು ದಕ್ಕಲಿಲ್ಲ.

ಕಿವೀಸ್ ನಾಯಕ ವಿಲಿಯಮ್ಸನ್ ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ನ್ಯೂಜಿಲ್ಯಾಂಡ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ನೆಗೆಯಿತು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.