ವಿಧಾನಸೌಧದಲ್ಲಿ ನೂತನ ಶಾಸಕರ ಪ್ರಮಾಣ ವಚನ
Team Udayavani, Dec 22, 2019, 10:14 AM IST
ಬೆಂಗಳೂರು: ಇತ್ತೀಚೆಗೆ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನೂತನ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ಇಂದು ನಡೆಯಿತು.
ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ ನಲ್ಲಿ ನೂತನ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು
ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.
ಬಿಜೆಪಿಯ 12 ಶಾಸಕರು, ಕಾಂಗ್ರೆಸ್ ನ ಇಬ್ಬರು ಮತ್ತು ಪಕ್ಷೇತರ ಶಾಸಕರಿಗೆ ಸ್ಪೀಕರ್ ಪ್ರತಿಜ್ಞಾವಿಧಿ ಬೋಧಿಸಿದರು.
ಹೊಸಕೋಟೆಯ ಶರತ್ ಬಚ್ಚೇಗೌಡ ಮತ್ತು ರಾಣೆಬೆನ್ನೂರು ಕ್ಷೇತ್ರದ ಅರುಣ್ ಕುಮಾರ್ ಪೂಜಾರ ಇದೇ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸುತ್ತಿದ್ದಾರೆ. ಶಿವಾಜಿನಗರದ ರಿಜ್ವಾನ್ ಅರ್ಷದ್ ವಿಧಾನಪರಿಷತ್ ಸದಸ್ಯರಾಗಿದ್ದು, ವಿಧಾನಸಭೆಗೆ ಮೊದಲ ಬಾರಿಗೆ ಪ್ರವೇಶಿಸುತ್ತಿದ್ದಾರೆ.
ಕೆ ಆರ್ ಪುರಂ: ಬೈರತಿ ಬಸವರಾಜ್
ಚಿಕ್ಕಬಳ್ಳಾಪುರ: ಡಾ ಕೆ ಸುಧಾಕರ್
ಯಲ್ಲಾಪುರ: ಶಿವರಾಂ ಹೆಬ್ಬಾರ್
ಕೆ ಆರ್ ಪೇಟೆ: ನಾರಾಯಣ ಗೌಡ
ರಾಣೆಬೆನ್ನೂರು: ಅರುಣ್ ಕುಮಾರ್ ಪೂಜಾರ
ಮಹಾಲಕ್ಷ್ಮೀ ಲೇಔಟ್: ಕೆ ಗೋಪಾಲಯ್ಯ
ಅಥಣಿ: ಮಹೇಶ್ ಕುಮಟಳ್ಳಿ
ಹಿರೇಕೆರೂರು: ಬಿ.ಸಿ. ಪಾಟೀಲ್
ವಿಜಯ ನಗರ: ಆನಂದ್ ಸಿಂಗ್
ಕಾಗವಾಡ: ಶ್ರೀಮಂತ ಪಾಟೀಲ್
ಯಶವಂತಪುರ: ಎಸ್ ಟಿ ಸೋಮಶೇಖರ್
ಗೋಕಾಕ: ರಮೇಶ್ ಜಾರಕಿಹೊಳಿ
ಹುಣಸೂರು: ಮಂಜುನಾಥ್
ಶಿವಾಜಿನಗರ: ರಿಜ್ವಾನ್ ಅರ್ಷದ್
ಹೊಸಕೋಟೆ: ಶರತ್ ಬಚ್ಚೇಗೌಡ