ಗುರು ಬಸವಣ್ಣನವರು ತೋರಿದ ದಾರಿಯಲ್ಲಿ…


Team Udayavani, Apr 26, 2020, 5:15 AM IST

ಗುರು ಬಸವಣ್ಣನವರು ತೋರಿದ ದಾರಿಯಲ್ಲಿ…

ವಿಶ್ವಗುರು,ಇಷ್ಟಲಿಂಗ ಜನಕ, ಜಗಜ್ಯೋತಿ, ಮಹಾ ಮಾನವತಾ ವಾದಿ, ಅನುಭವ ಮಂಟಪ ನಿರ್ಮಾತೃ, ಸ್ತ್ರೀ ಕುಲೋದ್ಧಾರಕ, ದಲಿತೋದ್ಧಾರಕ, ಪೂರ್ವಾಚಾರಿ, ಭವಹರ, ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ, ಭಕ್ತಿ ಭಂಡಾರಿ, ಗುರುಲಿಂಗಜಂಗಮ, ಕರುಣಾಮೂರ್ತಿ, ಕಾಲಹರ, ಕರ್ಮಹರ, 770 ಅಮರಗಣಂಗಳ ಮಾಡಿದಾತ ಬಸವಣ್ಣ ಎಂದು ಮುಂತಾಗಿ ಅವರ ಸಮಕಾಲೀನ ಶರಣರು ತಮ್ಮ ವಚನಗಳಲ್ಲಿ ಬರೆದಿರುವುದನ್ನು ಕಾಣುತ್ತೇವೆ.

12ನೇ ಶತಮಾನದಿಂದ ಹಿಡಿದು ಇದುವರೆಗೂ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ, ಸಮಾಜ ಧರ್ಮ, ಕಲೆ, ವಿಜ್ಞಾನ, ಸಂಸ್ಕಾರ, ವಚನತತ್ವ ಚಿಂತನೆಗಳ ಮೇಲೆ ಬಸವಣ್ಣನವರಿಂದ ಆದಷ್ಟು ಪ್ರಭಾವ ಈ ಭರತ ಖಂಡದಲ್ಲಿ ಇನ್ನೊಬ್ಬರಿಂದಾಗಿಲ್ಲ ಎಂಬುದು ಅಷ್ಟೇ ಸತ್ಯ. ಬಸವಣ್ಣನವರ ಕುರಿತು ನಡೆದಷ್ಟು ಅಧ್ಯಯನಗಳು, ಪುಸ್ತಕ ಮುದ್ರಣಗಳು ಇನ್ನೊಬ್ಬರ ಬಗೆಗೆ ನಡೆದಿಲ್ಲ. ದೇಶ, ಕಾಲ, ಮಿತಿಗಳನ್ನು ಮೀರಿ ಮುಂದುವರೆದಿರುವ ಬಸವಣ್ಣನವರ ವ್ಯಕ್ತಿತ್ವದ ವಿಶೇಷತೆ ಇದು. ಅಂತೆಯೇ ಯುಗ ಯುಗದ ಉತ್ಸಾಹ, ಯುಗ ಪುರುಷ ಬಸವಣ್ಣ ಎಂದು ಕರೆಯುತ್ತಾರೆ. ಇಂದಿಗೂ ಅವರ ವಚನಗಳನ್ನು ಓದುತ್ತಿದ್ದರೆ ನಮ್ಮ ಇವತ್ತಿನ ಸಂದರ್ಭವನ್ನೇ ಕುರಿತು ಬಸವಣ್ಣನವರು ತಮ್ಮ ವಚನಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಅನಿಸುತ್ತದೆ. ನಾವಿಂದು ಎದುರಿಸುತ್ತಿರುವ ಅನೇಕ ಸಮಸ್ಯೆ, ತವಕ ತಲ್ಲಣಗಳಿಗೆ ಮತ್ತು ನಮಗೆ ಕಾಡುತ್ತಿರುವ ಪ್ರಶ್ನೆಗಳಿಗೆ ಬಸವಣ್ಣನವರು ವಚನಗಳ ಮೂಲಕ ಉತ್ತರಿಸುತ್ತಿದ್ದಾರೆಂದು ಅನಿಸುತ್ತದೆ. 12ನೇ ಶತಮಾನದ ಬಸವಣ್ಣನವರು 21ನೇ ಶತಮಾನಕ್ಕೆ ಸಲ್ಲುವ ಈ ಪರಿ ನಿಜಕ್ಕೂ ಅದ್ಭುತವೆನಿಸುತ್ತದೆ.

ಜಗತ್ತಿನಲ್ಲಿಯೇ ಹಿಂದೆ ಎಂದೂ ಕಾಣದ, ಮುಂದೆ ಎಂದೂ ನಡೆಯದ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಏಕಕಾಲದಲ್ಲಿ ವಚನಕ್ರಾಂತಿ, ಒಂದೇ ನೆಲದಲ್ಲಿ ಎಲ್ಲ ವರ್ಗದ, ಎಲ್ಲ ವರ್ಣದ, ಎಲ್ಲ ಕಾಯಕದ, ಗಂಡು-ಹೆಣ್ಣೆಂಬ ಭೇದವಿಲ್ಲದ, ಕನ್ನಡ ನಾಡಿನಲ್ಲಿ ಆಡುಭಾಷೆ, ಮಾತೃಭಾಷೆ, ಅಚ್ಚ ಕನ್ನಡ ಭಾಷೆಯಲ್ಲಿ ಲಿಂಗಾಯತ ಧರ್ಮಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ “ಸಾಮಾಜಿಕ-ಧಾರ್ಮಿಕ ಚಳವಳಿ’ಯು ಮಹಾತ್ಮ ಗೌತಮ ಬುದ್ಧನ ನಂತರದ ಪರಿಣಾಮಕಾರಿ ಚಳವಳಿಯೆಂದು ಹೆಸರಾಗಿದೆ. ಈ ಕ್ರಾಂತಿ ಅಸಮಾನತೆಯ ಎಲ್ಲ ಬಿರುಕುಗಳನ್ನು ಮುಚ್ಚಿ, ಶೋಷಣೆಯ ಎಲ್ಲ ಬೇರುಗಳನ್ನು ಬೇರು ಸಹಿತ ಕಿತ್ತು ಚೆಲ್ಲಿ, ಅಲ್ಲಿ ಸಮಾನತೆಯ ಸಮ ಸಮಾಜ ನೆಲೆಗೊಳ್ಳುವಂತೆ ಮಾಡಿತು.

“ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ನಾ ಒಬ್ಬ ಶರಣನ, ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ, ಮರ್ತ್ಯಲೋಕ-ಶಿವಲೋಕವೆರಡಕ್ಕೆ ನಿಚ್ಚಣಿಕೆಯಾದನು ನಮ್ಮ ಗುಹೇಶ್ವರನ ಶರಣ ಸಂಗನ ಬಸವಣ್ಣ’ ಎಂದು ಅಲ್ಲಮಪ್ರಭುದೇವರು ಅಂದೇ ಹೇಳಿದ್ದಾರೆ.

ಗುರು ಬಸವಣ್ಣನವರು
ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಎನ್ನುವಂತೆ “ಬಿತ್ತಿದ ಬೀಜದ ಫ‌ಲವು ವಿಪರೀತ ಚಾರಿತ್ರ್ಯ ನೋಡಾ, ತನ್ನಲ್ಲಿ ತಾನೆಯಾಗಿ ಆಗಮವ ನೇರಿದಾತನೇ ಸ್ವಯಂಕೃತ ಸಹಜ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು’ ಎಂದು ಚೆನ್ನಬಸವಣ್ಣ ನವರು ತಮ್ಮ ವಚನದಲ್ಲಿ ಸ್ವಯಂಕೃತ ಗುರು ಬಸವಣ್ಣನವರು ಎಂದು ಹೇಳಿದ್ದಾರೆ. ಬಸವಣ್ಣನವರು ಆ ನಿರಾಕಾರ ಚೈತನ್ಯ ಸ್ವರೂಪವಾದ ಕೂಡಲಸಂಗಮದೇವರನ್ನೇ ಜ್ಞಾನ ಗುರುವನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ವಚನದಲ್ಲಿ ಪ್ರಸ್ತುತಪಡಿಸಿರು ವುದನ್ನು ನೋಡಬಹುದು. “ಎನ್ನಗುರು ಪರಮಗುರು ನೀವೆ ಕಂಡಯ್ನಾ, ಎನ್ನ ಗತಿಮತಿ ನೀವೆ ಕಂಡಯ್ನಾ, ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ನಾ, ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ನಾ, ಕೂಡಲಸಂಗಮದೇವಾ, ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು ನಿಮ್ಮ ಶರಣ ಸಿದ್ದರಾಮಯ್ಯದೇವರೆ ಬಲ್ಲರು’ ಎಂದು ಸ್ಪಷ್ಟವಾಗಿ ಬಸವಣ್ಣನವರು ತಮ್ಮ ಗುರು ಕೂಡಲಸಂಗಮದೇವರು ಎಂಬುದನ್ನು ತಿಳಿಸಿದ್ದಾರೆ.

ಇಷ್ಟಲಿಂಗ ಜನಕ ಬಸವಣ್ಣನವರು
ಬಸವಣ್ಣನವರು ಕಪ್ಪಡಿಸಂಗಮದಲ್ಲಿದ್ದಾಗ ಹಲವಾರು ಧರ್ಮಗ್ರಂಥ, ವೇದಾಗಮ, ಶಾಸ್ತ್ರಪುರಾಣ ಗ್ರಂಥಗಳನ್ನು ಅಧ್ಯಯನ ಮಾಡಿ ಅದರಲ್ಲಿರುವ ನ್ಯೂನತೆಯನ್ನು ತಿಳಿದುಕೊಂಡು, ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಇರುವಂತಹ ಪರಮಾತ್ಮ (ದೇವರು) ನಿರಾಕಾರವಾಗಿದ್ದಾನೆಂದು ತಿಳಿದು ನಿಶ್ಚಯಿಸಿಕೊಂಡು ಜಗತ್ತು ಗೋಳಾಕಾರವಾಗಿದೆ ಆ ಗೋಳಾಕಾರ ರೂಪದಲ್ಲಿ ಇಷ್ಟಲಿಂಗ ವನ್ನು ಕಂಡು ಹಿಡಿದು, ಅದನ್ನು ತಯಾರಿಸಿ ಮೊದಲು ತಾವು ಧರಿಸಿ ನಂತರ ಅಕ್ಕ ನಾಗಲಾಂಬಿಕೆಯವರಿಗೆ ಕೊಟ್ಟು ಮುಂದೆ ಇತರ ಶರಣರ ಬಳಗಕ್ಕೆ ದೀಕ್ಷೆಯ ಮೂಲಕ ನೀಡಿದರು. ಈ ಕಾರ್ಯ ಕಪ್ಪಡಿ ಸಂಗಮದಲ್ಲಿದ್ದಾಗ 12 ವರ್ಷಗಳ ತಪಸ್ಸಿನ (ಅಧ್ಯಯನ) ಫ‌ಲವಾಗಿ ಸತತ ಪರಿಶ್ರಮ ಸಾಧನೆಯಿಂದ ಸಾಧ್ಯವಾಗಿದೆ ಎಂದು ತಮ್ಮ ವಚನದಲ್ಲಿಯೆ ತಿಳಿಸಿದ್ದಾರೆ. “ಎನ್ನ ಹೃದಯ ಸಿಂಹಾಸನದ ಮೇಲೆ ಮೂರ್ತಗೊಂಡಡೆ, ಎನ್ನ ಬಯಕೆ ಸಯವಾಯಿತ್ತು. ಹಿಂದೆ ಹನ್ನೆರಡು ವರುಷದಲ್ಲಿದ್ದ ಚಿಂತೆಯಿಂದು ನಿಶ್ಚಿಂತೆಯಾಯಿತ್ತು, ಕೂಡಲಸಂಗಮದೇವರು ಕೃಪಾಮೂರ್ತಿ ಯಾದ ಕಾರಣ ನಾನು ಬದುಕಿದೆನು’ ಎಂದಿದ್ದಾರೆ. ಇನ್ನು ಬಸವಣ್ಣನವರ ಸಮಕಾಲೀನ ಶರಣರು ತಮ್ಮ ವಚನಗಳಲ್ಲಿ “ಇಷ್ಟಲಿಂಗ ಜನಕ’ ಬಸವಣ್ಣನವ ರೆಂಬುದನ್ನು ಸ್ಪಷ್ಟಪಡಿಸಿದ್ದಾರೆ. “ಹರಿಬ್ರಹ್ಮಾದಿಗಳಿಗಗೋಚರವಾದ ಕೂಡಲಚೆನ್ನಸಂಗಯ್ಯನೆಂಬ ಲಿಂಗವ ತೋರಿದ ಬಸವಣ್ಣ ಗುರುವೆ ಶರಣು ಶರಣು’. “ಅಯ್ನಾ ನಿಮ್ಮ ಶರಣ ಬಸವಣ್ಣನಿಂದ ಲಿಂಗವ ಕಂಡು ಒಳಗೆ ಬೈಚಿಟ್ಟುಕೊಂಡೆನಯ್ನಾ’, “ಪ್ರಥಮಂತು ಬಸವಣ್ಣ ದ್ವಿತಿಯಂತು ಲಿಂಗವು ತೃತಿಯಂತು ತತ್ವಬ್ರಹ್ಮಾಂಡವೆಲ್ಲ ಅಕಳಂತ ಗುಣನಿಧಿ ಚಿದಾನಂದ ಬಸವಂಗೆ ಬಕುತನಾದನೈ ಯೋಗಿನಾಥ’, “ಆದಿ ಲಿಂಗ ಅನಾದಿ ಬಸವಣ್ಣನು. ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು’, “ಜಗತ್‌ ಸ್ವಯಂಭು’ ಎಂಬ ಗುಹೇಶ್ವರನ ಕರಸ್ಥಲದಲ್ಲಿ ಹಿಡಿದಾಡುತ್ತಿರ್ದಡೆ ಆದಿಲಿಂಗವೆಂದು ಬಗೆಯದು ಲೋಕವೆಲ್ಲ. ಗುಹೇಶ್ವರಾ ನಿಮ್ಮ ಶರಣ ಬಸವಣ್ಣ, ಅಚ್ಚಲಿಂಗವ ಹಿಡಿದ ಕಾರಣ. ಬರಿಯ ಲಿಂಗದ ಮಸ್ತಕವಾಯಿತ್ತು ತ್ರಿಜಗದೊಳಗೆ!

ಅನುಭವ ಮಂಟಪ, 770 ಅಮರಗಣಂಗಳ ಮಾಡಿದ ಬಸವಣ್ಣನವರುವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್‌ (ಸಂಸತ್‌) ಎಂದು ಕರೆಯಲ್ಪಡುತ್ತಿರುವ “ಅನುಭವ ಮಂಟಪ’ 12ನೇ ಶತಮಾನದಲ್ಲಿ ಧರ್ಮಗುರು ಬಸವಣ್ಣನವರು ಸ್ಥಾಪಿಸಿದರು. ಈ ಅನುಭವ ಮಂಟಪದಲ್ಲಿ ಎಲ್ಲ ಕಾಯಕದ, ಎಲ್ಲ ಜನಾಂಗದ, ಶರಣ-ಶರಣೆಯರು ಸದಸ್ಯರಾದರು. ನಿತ್ಯ ಶರಣರು ತಮ್ಮ ಅನುಭಾವದ ವಚನಗಳನ್ನು ರಚಿಸಿ, ಇಲ್ಲಿ ಚರ್ಚಿಸಿ ವಚನ ಭಂಡಾರಕ್ಕೆ ಒಪ್ಪಿಸುತ್ತಿದ್ದರು. ಈ ಅನುಭವ ಮಂಟಪದಲ್ಲಿಯೇ ಶೂನ್ಯಪೀಠ ಸ್ಥಾಪಿಸಲ್ಪಟ್ಟು, ಅದರ ಪ್ರಥಮಾಧ್ಯಕ್ಷರನ್ನಾಗಿ ವ್ಯೋಮಕಾಯ ಜಂಗಮ ಮೂರ್ತಿ ಅಲ್ಲಮ ಪ್ರಭುದೇವರನ್ನು ನೇಮಿಸಿದ್ದರು. ಇವರ ಮಾರ್ಗ ದರ್ಶನದಂತೆ ಬಸವಣ್ಣನವರು ಮೊದಲುಗೊಂಡು ಎಲ್ಲ ಶರಣ ಬಂಧುಗಳು ನಡೆದುಕೊಳ್ಳುತ್ತಿದ್ದರು. ಇವ‌ರಲ್ಲಿ 770 ಅಮರಗಣಂ ಗಳು, ಉಳಿದ ಶರಣ-ಶರಣೆಯರು ಬಂದು ಚಿಂತನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

“ಅನುಭವ ಮಂಟಪವನು ಮಾಡಿ ಅನುಭವ ಮೂರ್ತಿಯಾದ ನಮ್ಮ ಬಸವ‌ಯ್ಯನು. ಏಳುನೂರೆಪ್ಪತ್ತು ಅಮರಗಣಂಗಳ ಅನುಭವಮೂರ್ತಿ ಮಾಡಿದಾತ ನಮ್ಮ ಬಸವಯ್ಯನು’ ಎಂದು ತಾಯಿ ನೀಲಾಂಬಿಕೆಯವರು ತಮ್ಮ ವಚನದಲ್ಲಿ ಉಲ್ಲೇಖೀಸಿದ್ದಾರೆ. ಇಂತಹ ಮಹಾಮಹಿಮ ಸಂಗನಬಸವ‌ಣ್ಣ ಎನಗೆಯೂ ಗುರು, ನಿಮಗೆಯೂ ಗುರು, ಜಗವೆಲ್ಲಕ್ಕೂ ಗುರು ಕಾಣಾ ಗುಹೇಶ್ವರ ಎಂದು ಪ್ರಭುದೇವರು ಹೇಳಿದ್ದಾರೆ.

ಗುರು ಬಸವಣ್ಣನವರು ಕ್ರಿ.ಶ. 1105ರಲ್ಲಿ ಈಗಿನ ವಿಜಯಪುರ ಜಿಲ್ಲೆಯ ಬಾಗೇವಾಡಿ ಮಂಡಿಗೆಯ ಮಾದರಸನ ಸತಿ ಮಾದ= ಲಾಂಬಿಕೆಯರ ಉದರದಲ್ಲಿ ಜನ್ಮತಾಳಿ ಬಾಗೇವಾಡಿ ಯಿಂದ-ಕಪ್ಪಡಿಸಂಗಮಕ್ಕೆ ನಂತರ ಮಂಗಳವೆಡೆಗೆ -ಇಲ್ಲಿಂದ ಕಲ್ಯಾಣಕ್ಕೆ ಬಂದು 62 ವರ್ಷಗಳ ಕಾಲ ಬಾಳಿ ನಮ್ಮ ನಿಮ್ಮೆಲ್ಲರಿಗೂ ಬೆಳಕಾಗಿದ್ದಾರೆ. ಈ ಮಹಾತ್ಮರ ಕರುಣೆ ನಮ್ಮ ನಿಮ್ಮೆಲ್ಲರಿಗೆ ದೊರೆಯಲೆಂದು ಪ್ರಾರ್ಥಿಸುವೆ. ಬಸವ ಗುರುವಿನ ಪಾದಕ್ಕೆ ಶರಣು ಶರಣಾರ್ಥಿಗಳು.

-ಪ್ರಕಾಶ ಅಸುಂಡಿ

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.