ಜೀವವಾಯುವಿಗಾಗಿ ಹಾಹಾಕಾರ : ಕೋವಿಡ್ ಎರಡನೇ ಅಲೆ ವೇಳೆ ಹೆಚ್ಚಿದ ಬೇಡಿಕೆ


Team Udayavani, Apr 22, 2021, 6:40 AM IST

oxygen

ವೈದ್ಯಕೀಯ ಆಮ್ಲಜನಕ ತಯಾರಿಕೆ ಹೇಗೆ?
ಕೋವಿಡ್‌ನ‌ 2ನೇ ಅಲೆಯು ದೇಶದಲ್ಲಿ ಹೆಚ್ಚಾಗುತ್ತಿದೆ. ಆಸ್ಪತ್ರೆ ಗಳಲ್ಲಿ ಹಾಸಿಗೆ ಇಲ್ಲದೇ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಔಷಧಗಳನ್ನು ಪಡೆಯುವುದಕ್ಕಿಂತ ಹೆಚ್ಚಾಗಿ ರೋಗಿಗಳು ಆಮ್ಲಜನಕವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ 50,000 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಖರೀದಿಸಲು ಸರಕಾರ ಜಾಗತಿಕ ಮಾರು ಕಟ್ಟೆಯ ಮೊರೆಹೋಗಿದೆ. ಹಾಗಾದರೆ ಏನಿದು ವೈದ್ಯಕೀಯ ಆಮ್ಲಜನಕ? ನಾವೆಲ್ಲರೂ ಪರಿಸರದಲ್ಲಿರುವ ಗಾಳಿಯನ್ನು ಉಸಿರಾಡುತ್ತೇವೆ. ಇದನ್ನು ಸಿಲಿಂಡರ್‌ನಲ್ಲಿ ಯಾಕೆ ತುಂಬಲಾಗುತ್ತದೆ? ಈ ಎಲ್ಲ ಗೊಂದಲಗಳು ಉದ್ಭವಿಸುವುದು ಸಹಜ. ಹಾಗಾದರೆ ಏನಿದು ವೈದ್ಯಕೀಯ ಆಮ್ಲಜನಕ? ಅದನ್ನು ಹೇಗೆ ತಯಾರಿಸಲಾಗುತ್ತದೆ? ಇಲ್ಲಿದೆ ಮಾಹಿತಿ.

ವೈದ್ಯಕೀಯ ಆಮ್ಲಜನಕ ಎಂದರೇನು?
2015ರಲ್ಲಿ ಬಿಡುಗಡೆಯಾದ ದೇಶದ ಅಗತ್ಯ ಔಷಧಗಳ ಪಟ್ಟಿಯಲ್ಲಿ ಆಮ್ಲಜನಕವೂ ಸೇರಿದೆ. ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಈ ಮೂರು ಹಂತದ ಆರೋಗ್ಯ ರಕ್ಷಣೆಗೆ ಇದು ಅಗತ್ಯವೆಂದು ಘೋಷಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಗತ್ಯ ಔಷಧಗಳ ಪಟ್ಟಿಯಲ್ಲಿಯೂ ಇದನ್ನು ಸೇರಿಸಲಾಗಿದೆ. ವೈದ್ಯಕೀಯ ಆಮ್ಲಜನಕ ಎಂದರೆ ಶೇ. 98ರಷ್ಟು ಶುದ್ಧ ಆಮ್ಲಜನಕ, ತೇವಾಂಶ, ಧೂಳು ಅಥವಾ ಇತರ ಅನಿಲಗಳಲ್ಲಿ ಇರುವಂತಹ ಯಾವುದೇ ಕಲ್ಮಶಗಳಿಲ್ಲ.

ನಮ್ಮ ಸುತ್ತಲಿರುವ ಆಮ್ಲಜನಕ ಯಾವುದು?
ವಾತಾವರಣದಲ್ಲಿರುವ ಗಾಳಿಯನ್ನು ನಾವು ಉಸಿರಾಡುತ್ತೇವೆ. ಈ ಗಾಳಿಯಲ್ಲಿ ಕೇವಲ ಶೇ. 21ರಷ್ಟು ಆಮ್ಲಜನಕವಿರುತ್ತದೆ. ಇದು ಆರೋಗ್ಯವಂತ ವ್ಯಕ್ತಿಗೆ ಸಾಕಾಗುವಷ್ಟು ಆಮ್ಲಜನಕವನ್ನು ಒದಗಿಸುತ್ತದೆ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಇದನ್ನು ಬಳಸಲಾಗುವುದಿಲ್ಲ. ಹೀಗಾಗಿ ವೈದ್ಯಕೀಯ ಆಮ್ಲಜನಕವನ್ನು ವಿಶೇಷ ಪ್ಲಾಂಟ್‌ ಮೂಲಕ ವೈಜ್ಞಾನಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಅದೂ ದ್ರವರೂಪದ ಆಮ್ಲಜನಕ.

ಆಮ್ಲಜನಕವನ್ನು ಹೇಗೆ ತಯಾರಿಸಲಾಗುತ್ತದೆ?
ನಮ್ಮ ಸುತ್ತಲಿನ ಗಾಳಿಯಿಂದ ಶುದ್ಧ ಆಮ್ಲಜನಕವನ್ನು ವೈಜ್ಞಾನಿಕವಾದ ವಿಧಾನದಿಂದ ಬೇರ್ಪಡಿಸುವ ಮೂಲಕ ವೈದ್ಯಕೀಯ ಆಮ್ಲಜನಕವನ್ನು ತಯಾರಿಸಲಾಗುತ್ತದೆ. ವಾತಾವರಣದಲ್ಲಿರುವ ಗಾಳಿಯು ಶೇ. 78ರಷ್ಟು ಸಾರಜನಕ, ಶೇ. 21ರಷ್ಟು ಆಮ್ಲಜನಕ ಮತ್ತು ಉಳಿದ ಶೇ. 1ರಷ್ಟು ಅನಿಲಗಳಾದ ಆರ್ಗಾನ್‌, ಹೀಲಿಯಂ, ನಿಯಾನ್‌, ಕ್ರಿಪಾನ್‌, ಜಿನೋನ್‌ ಅನ್ನು ಹೊಂದಿರುತ್ತದೆ. ಈ ಎಲ್ಲ ಅನಿಲಗಳ ಕುದಿಯುವ ಹಂತವು ತೀರಾ ಕಡಿಮೆ ಮತ್ತು ವಿಭಿನ್ನವಾಗಿರುತ್ತದೆ. ನಾವು ಗಾಳಿಯನ್ನು ಸಂಗ್ರಹಿಸಿ ತಣ್ಣಗಾಗಿಸಿದರೆ, ಜಿನಾನ್‌ ಅನಿಲ -108 ಡಿಗ್ರಿಗಳಲ್ಲಿ ದ್ರವವಾಗಿ ಬದಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಾವು ಅದನ್ನು ಗಾಳಿಯಿಂದ ಬೇರ್ಪಡಿಸಬಹುದು. ಅಂತೆಯೇ -153.2 ಡಿಗ್ರಿಗಳಲ್ಲಿ ಕ್ರಿಪಾನ್‌, -183 ಡಿಗ್ರಿಗಳಲ್ಲಿ ಆಮ್ಲಜನಕ ದ್ರವವಾಗುತ್ತವೆ.

ಕ್ರಯೋಜೆನಿಕ್‌ ತಂತ್ರ
ಗಾಳಿಯಿಂದ ಅನಿಲಗಳನ್ನು ಬೇರ್ಪಡಿಸುವ ಈ ತಂತ್ರವನ್ನು “ಕ್ರಯೋಜೆನಿಕ್‌ ತಂತ್ರ’ ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ ತಯಾರಿಸಿದ ದ್ರವ ಆಮ್ಲಜನಕವನ್ನು ಶೇ. 99.5ರ ವರೆಗೆ ಶುದ್ಧೀಕರಿಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಹೆಚ್ಚಿನ ಒತ್ತಡದಲ್ಲಿ ( high pressure) ಪೂರ್ಣಗೊಳ್ಳುತ್ತದೆ. ಇದರಿಂದ ಅನಿಲಗಳ ಕುದಿಯುವ ಹಂತವು ಹೆಚ್ಚಾಗುತ್ತದೆ. ಅಂದರೆ ಹೆಚ್ಚು ತಂಪಾ  ಗಿಸದೆ, ಅನಿಲವು ದ್ರವವಾಗಿ ಬದಲಾಗುತ್ತದೆ. ಈ ಪ್ರಕ್ರಿ  ಯೆಯು ಮೊದಲು ಗಾಳಿಯನ್ನು ತಂಪಾಗಿಸಲಾಗುತ್ತದೆ ಮತ್ತು ತೇವಾಂಶ ಮತ್ತು ಶೋಧಕಗಳ ಮೂಲಕ ಧೂಳು ಮತ್ತು ತೈಲ ಮತ್ತು ಇತರ ಕಲ್ಮಶಗಳನ್ನು ಅದರಿಂದ ತೆಗೆದುಹಾಕಲಾಗುತ್ತದೆ.

ದ್ರವ ಆಮ್ಲಜನಕ ಆಸ್ಪತ್ರೆಗಳನ್ನು ಹೇಗೆ ತಲುಪುತ್ತದೆೆ?
ತಯಾರಕರು ಈ ದ್ರವ ಆಮ್ಲಜನಕವನ್ನು ದೊಡ್ಡ ಟ್ಯಾಂಕರ್‌ಗಳಲ್ಲಿ ಸಂಗ್ರಹಿಸುತ್ತಾರೆ. ಇಲ್ಲಿಂದ ಅತ್ಯಂತ ಶೀತಲವಾಗಿರುವ ಕ್ರಯೋಜೆನಿಕ್‌ ಟ್ಯಾಂಕರ್‌ಗಳಲ್ಲಿ ಇದನ್ನು ವಿತರಕರಿಗೆ ಕಳುಹಿಸುತ್ತಾರೆ. ವಿತರಕರು ಅದರ ಒತ್ತಡ(ಪ್ರಶರ್‌)ವನ್ನು ಕಡಿಮೆ ಮಾಡುತ್ತಾರೆ. ಬಳಿಕ ಅದನ್ನು ಅನಿಲ ರೂಪದಲ್ಲಿ ವಿವಿಧ ರೀತಿಯ ಸಿಲಿಂಡರ್‌ಗಳಿಗೆ ತುಂಬಲಾಗುತ್ತದೆ. ಈ ಸಿಲಿಂಡರ್‌ಗಳನ್ನು ನೇರವಾಗಿ ಆಸ್ಪತ್ರೆಗಳಿಗೆ ಅಥವಾ ಸಣ್ಣ ಪೂರೈಕೆದಾರರಿಗೆ ತಲುಪಿಸಲಾಗುತ್ತದೆ. ಕೆಲವು ದೊಡ್ಡ ಆಸ್ಪತ್ರೆಗಳು ತಮ್ಮದೇ ಆದ ಸಣ್ಣ ಆಮ್ಲಜನಕ ಉತ್ಪಾದನ ಕೇಂದ್ರಗಳು(ಆಕ್ಸಿಜನ್‌ ಪ್ಲಾಂಟ್‌)ಗಳನ್ನು ಹೊಂದಿವೆ.

ಒಬ್ಬ ವ್ಯಕ್ತಿಗೆ ಎಷ್ಟು ಆಮ್ಲಜನಕ ಬೇಕು?
ವಯಸ್ಕನು ಯಾವುದೇ ಕೆಲಸವನ್ನು ಮಾಡದಿದ್ದಾಗ ಉಸಿರಾಡಲು ಪ್ರತೀ ನಿಮಿಷಕ್ಕೆ 7ರಿಂದ 8 ಲೀಟರ್‌ ಗಾಳಿಯ ಅಗತ್ಯವಿದೆ. ಅಂದರೆ ಪ್ರತೀದಿನ ಸುಮಾರು 11,000 ಲೀಟರ್‌ ಗಾಳಿ. ಉಸಿರಾಟದ ಮೂಲಕ ಶ್ವಾಸಕೋಶಕ್ಕೆ ಹೋಗುವ ಗಾಳಿಯು ಶೇ. 20ರಷ್ಟು ಆಮ್ಲಜನಕವನ್ನು ಹೊಂದಿದ್ದರೆ, ಹೊರಹೋಗುವ ಉಸಿರಾಟವು ಶೇ. 15ರಷ್ಟು ಹೊಂದಿರುತ್ತದೆ. ಅಂದರೆ ಉಸಿರಾಟದಲ್ಲಿ ಶೇ. 5ರಷ್ಟು ಆಮ್ಲಜನಕವನ್ನು ಮಾತ್ರ ಬಳಸಲಾಗುತ್ತದೆ. ಒಬ್ಬ ವ್ಯಕ್ತಿಗೆ 24 ಗಂಟೆಗಳಲ್ಲಿ ಸುಮಾರು 550 ಲೀಟರ್‌ ಶುದ್ಧ ಆಮ್ಲಜನಕ ಬೇಕಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡುವಾಗ ಅಥವಾ ವ್ಯಾಯಾಮ ಮಾಡುವಾಗ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅಗತ್ಯವಿರುತ್ತದೆ.

ಸಿಲಿಂಡರ್‌ ಗಾತ್ರ, ಸಾಮರ್ಥ್ಯ ಎಷ್ಟು?
ಆಸ್ಪತ್ರೆಗಳು ಸಾಮಾನ್ಯವಾಗಿ 7 ಘನ ಮೀಟರ್‌ ಸಾಮರ್ಥ್ಯದ ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸುತ್ತವೆ. ಇದರ ಎತ್ತರವು ಸುಮಾರು 4 ಅಡಿ 6 ಇಂಚುಗಳು. ಇದರ ಸಾಮರ್ಥ್ಯ ಕೇವಲ 47 ಲೀಟರ್‌, ಆದರೆ ಸುಮಾರು 7,000 ಲೀಟರ್‌ ಆಮ್ಲಜನಕವನ್ನು ಒತ್ತಡದಿಂದ ತುಂಬಿಸಲಾಗುತ್ತದೆ. 7 ಘನ ಮೀಟರ್‌ ಸಿಲಿಂಡರ್‌ನಲ್ಲಿರುವ ಆಮ್ಲಜನಕವನ್ನು ರೋಗಿಯೊಬ್ಬನಿಗೆ ನಿರಂತರವಾಗಿ ಸುಮಾರು 20 ಗಂಟೆಗಳವರೆಗೆ ನೀಡಬಹುದಾಗಿದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.