ಕೋವಿಡ್-19 ಕಾಲದಲ್ಲೂ ಕಪಟತನ ಬಿಡದ ಪಾಕ್ !
ಗಲ್ಫ್ ದೇಶಗಳಲ್ಲಿ ಭಾರತದ ವಿರುದ್ಧ ಟ್ವಿಟರ್ ಅಪಪ್ರಚಾರ ನಡೆಸುತ್ತಿರುವ ನೆರೆರಾಷ್ಟ್ರ
Team Udayavani, May 4, 2020, 6:15 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಕೋವಿಡ್-19 ದಂಥ ಕಷ್ಟಕಾಲದಲ್ಲೂ ತನ್ನ ಕುತ್ಸಿತ ಬುದ್ಧಿ ಬಿಡದ ಪಾಕಿಸ್ಥಾನವು ಗಲ್ಫ್ ದೇಶಗಳಲ್ಲಿ ಭಾರತದ ವಿರುದ್ಧ ಅಪಪ್ರಚಾರಕ್ಕೆ ನಕಲಿ ಟ್ವಿಟರ್ ಖಾತೆಗಳನ್ನು ಬಳಸಿಕೊಳ್ಳುತ್ತಿದೆ.
ಗಲ್ಫ್ ನ ಬಹುತೇಕ ರಾಷ್ಟ್ರಗಳು ಭಾರತದ ಜತೆಗಿದ್ದು, ಉತ್ತಮ ಸಂಬಂಧ ಹೊಂದಿವೆ. ಜತೆಗೆ ಕಾಶ್ಮೀರದ ವಿಚಾರದಲ್ಲಿ ಬಹುತೇಕ ದೇಶಗಳು ಭಾರತದ ಬೆನ್ನಿಗಿವೆ. ಹೀಗಾಗಿ ಭಾರತದ ವಿರುದ್ಧ ಹೊಸ ಮಾದರಿಯ ಅಪಪ್ರಚಾರಕ್ಕೆ ಮುಂದಾಗಿರುವ ಪಾಕ್ ಇದಕ್ಕಾಗಿ ಏಳು ಸಾವಿರ ನಕಲಿ ಟ್ವಿಟರ್ ಖಾತೆಗಳನ್ನು ಬಳಸಿಕೊಳ್ಳುತ್ತಿದೆ.
ಭಾರತೀಯ ಭದ್ರತಾ ಪಡೆಗಳು ಈ ನಕಲಿ ಖಾತೆಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿವೆ. ಈ ಎಲ್ಲ ಖಾತೆಗಳನ್ನು 2020ರ ಎಪ್ರಿಲ್ನಲ್ಲಿ ಪಾಕ್ನಲ್ಲಿ ತೆರೆಯಲಾಗಿದ್ದು, ಅಲ್ಲಿಂದಲೇ ನಿರ್ವಹಿಸಲಾಗುತ್ತಿದೆ ಎಂಬ ಆಘಾತಕಾರಿ ಅಂಶವೂ ಬಯಲಾಗಿದೆ.
ಉಗ್ರರ ಫೋಟೋ ಬಳಕೆ
ಭಾರತದಲ್ಲಿ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸುಳ್ಳು ಸುದ್ದಿಯನ್ನು ಗಲ್ಫ್ ದೇಶಗಳಲ್ಲಿ ಹಂಚುವುದು ಈ ಟ್ವಿಟರ್ ಖಾತೆಗಳ ಉದ್ದೇಶ. ಇದಕ್ಕಾಗಿ ಕಾಶ್ಮೀರದಲ್ಲಿ ಹತ ಉಗ್ರರ ಫೋಟೋ ಹಾಕಿ, ತಪ್ಪು ಮಾಹಿತಿ ನೀಡಲಾಗುತ್ತಿದೆ. ಕಳೆದ ಆಗಸ್ಟ್ನಲ್ಲಿ ನಡೆದ ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದಲ್ಲಿ ಮುಸ್ಲಿಮರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಭಾರತದ ವಿರುದ್ಧ ಗಲ್ಫ್ ದೇಶಗಳನ್ನು ಎತ್ತಿಕಟ್ಟುವುದೇ ಅವರ ಉದ್ದೇಶ. ಅದರ ಭಾಗವಾಗಿಯೇ ಈ ಟ್ವಿಟರ್ ಅಭಿಯಾನ ನಡೆಯುತ್ತಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಇದರಿಂದ ಗಲ್ಫ್ ಮತ್ತು ಭಾರತದ ನಡುವಿನ ಸಂಬಂಧ ಹಳಸುವುದಿಲ್ಲ, ಗಟ್ಟಿಯಾಗಿದೆ ಎಂದಿದ್ದಾರೆ.
ಮೋದಿ ವಿರುದ್ಧ ಅಪಪ್ರಚಾರ
ಕೆಲವು ದಿನಗಳ ಹಿಂದೆ ಭಾರತೀಯ ಗುಪ್ತಚರ ಇಲಾಖೆಯು ಭಾರತ ಸರಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿತ್ತು. ಅದರಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪಾಕಿಸ್ಥಾನವು ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಭಾರತವನ್ನು ಮುಸ್ಲಿಂ ವಿರೋಧಿ ರಾಷ್ಟ್ರವೆಂದು ಬಿಂಬಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಈ ವರ್ಷದ ಜನವರಿ-ಮಾರ್ಚ್ ನಡುವೆ ಸೃಷ್ಟಿಸಲಾದ ಟ್ವಿಟರ್ ಖಾತೆಗಳ ಮೂಲಕ ಈ ಅಪಪ್ರಚಾರ ನಡೆಸಲಾಗುತ್ತಿದ್ದು, ಕೊಲ್ಲಿ ರಾಷ್ಟ್ರಗಳ ಬಹುತೇಕ ಜನರು ಇದನ್ನು ನಂಬತೊಡಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ