“ಮೋದಿಗೆ ತಾಕತ್ತಿದ್ದರೆ ಪಾಕಿಸ್ತಾನ ಧ್ವಂಸ ಮಾಡಲಿ’
Team Udayavani, Jan 3, 2020, 9:57 PM IST
ಬೆಂಗಳೂರು: ಪ್ರಧಾನಿ ಮೋದಿ ಕಾಂಗ್ರೆಸ್ ಪಾಕಿಸ್ತಾನ ಪರ ಇದೆ ಎಂದು ಹೇಳುವ ಬದಲು ಅವರಿಗೆ ನಿಜವಾಗಲೂ ತಾಕತ್ ಇದ್ದರೆ ಪಾಕಿಸ್ತಾನದೊಡನೆ ಯುದ್ಧ ಮಾಡಿ ನಾಶ ಮಾಡಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನ ಪ್ರಧಾನಿ ಮೋದಿ ರಾಜ್ಯದಲ್ಲಿ ಜಂಬೂ ಸವಾರಿ ನಡೆಸಿದ್ದಾರೆ. ಪ್ರಧಾನಿ ರಾಜ್ಯದ ಜನತೆಗೆ ಏನಾದರೂ ಕೊಡುಗೆ ನೀಡುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಸಿದ್ಧಗಂಗಾ ಮಠದ ವಿದ್ಯಾರ್ಥಿಗಳ ಮುಂದೆ ಮೋದಿ ಶಿಕ್ಷಣ, ಸಂಸ್ಕೃತಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ನಾಯಕರಿಗೆ ಪಾಕಿಸ್ತಾನ ಜೊತೆ ಹೆಚ್ಚಿನ ಸ್ನೇಹ ಇದೆ. ಪಾಕ್ಗೆ ಟ್ರೇನ್ ಓಡಿಸಿದ್ದು, ನವಾಜ್ ಷರೀಪ್ಗೆ ಉಡುಗೊರೆ ಕಳುಹಿಸಿದ್ದು ಯಾರು? ಶಿಷ್ಟಾಚಾರ ಉಲ್ಲಂಘಿಸಿ ಕದ್ದು ಮುಚ್ಚಿ ಪಾಕ್ಗೆ ಹೋಗಿದ್ದು ಯಾರು ಎಂದು ಉಗ್ರಪ್ಪ ಪ್ರಶ್ನಿಸಿದರು.
ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಸೀರೆಯನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ, ಕರ್ನಾಟಕ ಮುಖ್ಯಮಂತ್ರಿಗಳು ನೀರಾವರಿ ಯೋಜನೆಗೆ, ನೆರೆ ಪರಿಹಾರಕ್ಕೆ ಹಣ ಕೊಡಿ ಎಂದು ಬೇಡಿದರೆ ಅವರು ತಿರುಗಿಯೂ ನೋಡುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳುವಂತೆ ರಾಜ್ಯದ ನೆರೆ ಪರಿಹಾರಕ್ಕೆ, ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರಕ್ಕೆ ಮೂರ್ನಾಲ್ಕು ಬಾರಿ ಮನವಿ ಮಾಡಲಾಗಿದೆ. ಈಗ ಮತ್ತೆ ಮನವಿ ಮಾಡ್ತಿದ್ದಾರೆ.ಆದರೂ ಅದ್ಯಾವುದಕ್ಕೂ ಪ್ರಧಾನಿ ಬೆಲೆ ಕೊಡಲಿಲ್ಲ. ಇದು ಪ್ರಧಾನಿ ನಮ್ಮ ರಾಜ್ಯದ ಮುಖ್ಯಮಂತ್ರಿ ಅಷ್ಟೆಯಲ್ಲ. ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಉಗ್ರಪ್ಪ ಆರೋಪಿಸಿದರು.
ಇದೇ ವೇಳೆ, ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಒಬ್ಬ ಶಾಸಕನ ಮನಸ್ಥಿತಿ ಅಲ್ಲ. ಶಾಸಕರ ಉದ್ಧಟತನದ ಹೇಳಿಕೆಗೆ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರ ಕುಮ್ಮಕ್ಕಿದೆ. ಆ ಕುಮ್ಮಕ್ಕಿನಿಂದ ಇಂತಹ ಮಾತನ್ನು ಬಿಜೆಪಿಯ ಶಾಸಕರು ಆಡುತ್ತಿದ್ದು. ಸಮಾಜವನ್ನು ಒಡೆದು ಆಳುವ ಪ್ರವೃತ್ತಿ ಅವರದ್ದು. ಬಿಜೆಪಿಯವರು ಸಂವಿಧಾನದ ಆಶಯವನ್ನು ಗಾಳಿಗೆ ತೂರಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ