ಸೋಂಕು ನಿವಾರಣೆಗೆ ಯಜ್ಞ ಮಾಡಿ : ಮಧ್ಯಪ್ರದೇಶ ಸಂಸ್ಕೃತಿ ಸಚಿವೆಯ ಹೇಳಿಕೆ
Team Udayavani, May 12, 2021, 11:00 PM IST
ಇಂದೋರ್: ಕೊರೊನಾ ಸೋಂಕು ನಿವಾರಣೆಯಾಗಬೇಕಾಗಿದ್ದರೆ ಯಜ್ಞ ಮಾಡಬೇಕು. ಈ ಹಳೆಯ ಪದ್ಧತಿಯ ಮೂಲಕ ಪರಿಸರವನ್ನು ಶುದ್ಧಗೊಳಿಸಲು ಸಾಧ್ಯವಿದೆ ಎಂದು ಮಧ್ಯಪ್ರದೇಶ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಹೇಳಿದ್ದಾರೆ.
ಸೋಂಕಿನ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಎಲ್ಲರೂ ಯಾಜ್ಞ ಮಾಡಿ, ವಿವಿಧ ಸುವಸ್ತುಗಳನ್ನು ಆಹುತಿ ನೀಡಬೇಕು. ಇದರಿಂದ ಪರಿಸರ ಶುದ್ಧವಾಗುತ್ತದೆ. ಶತಮಾನಗಳಿಂದ ಈ ಪದ್ಧತಿ ಆಚರಣೆಯಲ್ಲಿದೆ ಎಂದು ಹೇಳಿದ್ದಾರೆ.
ಇದೊಂದು ಧರ್ಮಾಂಧತೆಯ ಕ್ರಮ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ. ಯಜ್ಞ ಮಾಡಿ, 2 ಬಾರಿ ಪವಿತ್ರ ವಸ್ತುಗಳನ್ನು ಆಹುತಿ ನೀಡುವುದರಿಂದ ದೇಶಕ್ಕೆ ಸೋಂಕಿನ 3ನೇ ಅಲೆ ಬಾಧಿಸಲಾರದು ಎಂದರು. ಸಚಿವೆ ಹೇಳಿಕೆಗೆ ಭಾರೀ ಆಕ್ಷೇಪಗಳು ಜಾಲತಾಣದಲ್ಲಿ ವ್ಯಕ್ತವಾಗಿವೆ.