ಪೊಳಲಿ: ಸರಳ ಜಾತ್ರೆ ; ರಥೋತ್ಸವ ಸಂಪನ್ನ
Team Udayavani, Apr 11, 2021, 11:30 PM IST
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಈ ಬಾರಿ ಕೊರೊನಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ನಡೆದಿದ್ದು, ರವಿವಾರ ಸಂಜೆ ಶ್ರೀ ದೇವಿಯ ರಥೋತ್ಸವ ನೆರವೇರಿತು.
ಶನಿವಾರ ಸಂಜೆ ಕಡೇ ಚೆಂಡಿನ ಉತ್ಸವ, ಚೆಂಡಿನ ಬಲಿ, ಆಳು ಪಲ್ಲಕ್ಕಿ ರಥ, ಬೆಳ್ಳಿ ರಥೋತ್ಸವ ನಡೆದಿತ್ತು. ಕೋವಿಡ್ ಮುನ್ನೆಚ್ಚರಿಕೆಗಳನ್ನು ವಹಿಸಿಕೊಂಡಿದ್ದು, ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತರಿಗೆ ಆಗಾಗ ಸೂಚನೆ ನೀಡಲಾಗುತ್ತಿತ್ತು.
ದೇವಸ್ಥಾನದ ಕುರಿತು ಮೃಣ್ಮಯ ಮೂರ್ತಿ ಕಿರುಚಿತ್ರವನ್ನು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಶನಿವಾರ ಸಂಜೆ ಕ್ಷೇತ್ರದ ಆವರಣದಲ್ಲಿ ಬಿಡುಗಡೆಗೊಳಿಸಿದರು. ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯು.ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಪೊಳಲಿ ಮಾಧವ ಭಟ್, ಕೆ.ಕೆ.ಪೂಂಜ, ಸುಭಾಶ್ ಆಳ್ವ, ಚಿತ್ರದ ನಿರ್ಮಾಪಕ ವಾಮನ ಪೂಜಾರಿ ಕೈಕಂಬ ಮೊದಲಾದವರು ಉಪಸ್ಥಿತರಿದ್ದರು.
ರಥೋತ್ಸವದ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗಿನಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಕ್ಷೇತ್ರದಲ್ಲಿ ಸೇವೆ ಮಾಡುವುದಕ್ಕೆ ಅವಕಾಶ ನೀಡ ಲಾಗಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಕಲ್ಲಂಗಡಿ ವ್ಯಾಪಾರ ಕಂಡುಬಂದಿದ್ದು, ಹೆಚ್ಚಿನ ಸಂತೆ ಮಳಿಗೆಗಳಿಗೆ ಅವಕಾಶ ವಿರಲಿಲ್ಲ. ರಾತ್ರಿವರೆಗೂ ಭಕ್ತರು ಆಗಮಿಸುತ್ತಲೇ ಇದ್ದು, ಗುಂಪು ಸೇರದಂತೆ ಪ್ರಕಟನೆ ನೀಡಲಾಗುತ್ತಿತ್ತು. ಕ್ಷೇತ್ರದ ಆಡಳಿತ ಮಂಡಳಿ, ಕಾರ್ಯ ನಿರ್ವ ಹಣಾಧಿಕಾರಿ, ತಂತ್ರಿ ವರ್ಗ, ಅರ್ಚಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?