ರಾಜೀನಾಮೆ ನೀಡುವಂತೆ ನನಗೂ ಭಾರೀ ಒತ್ತಡ : ರಾಜೇಗೌಡ
Team Udayavani, Jul 10, 2019, 1:31 PM IST
ಬೆಳ್ತಂಗಡಿ: ರಾಜೀನಾಮೆ ನೀಡುವಂತೆ ನನಗೂ ಭಾರೀ ಒತ್ತಡ ಬರುತ್ತಿದೆ. ಆಸೆ, ಆಮೀಷಗಳನ್ನು ಒಡ್ಡುತ್ತಿದ್ದಾರೆ. ಆದರೆ ನಾನು ಪಕ್ಷ ಬಿಡುವುದಿಲ್ಲ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೇಗೌಡ ಅವರು ಬುಧವಾರ ಸ್ಟೋಟಕ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ , ಇಂದು ಬೆಳಗ್ಗೆಯಿಂದ ಕೂಡ ನನಗೆ ಕರೆ ಬರುತ್ತಿದೆ. ಯಾರು ಆಮೀಷ ಒಡ್ಡುತ್ತಿದ್ದಾರೆ ಎನ್ನುವ ಹೆಸರು ಹೇಳುವುದಿಲ್ಲ ಎಂದರು.
ನಾನು ಪಕ್ಷದ ನಿಷ್ಠಾವಂತ, ಮೊದಲ ಬಾರಿಗೆ ಆಯ್ಕೆಯಾಗಿದ್ದು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಎಂದರು.
ಇದೇ ವೇಳೆ ಸೋನಿಯಾ ಗಾಂಧಿ ಅವರು ತ್ಯಾಗಮಯಿ, ಪ್ರಧಾನ ಮಂತ್ರಿ ಹುದ್ದೆಯನ್ನೇ ಬಿಟ್ಟುಕೊಟ್ಟವರು ಎಂದರು.