ಪ್ಯಾಕೇಜ್ ಪಡೆಯಲು ಶೀಘ್ರ ಮಾರ್ಗಸೂಚಿ
ಸೇವಾ ಸಿಂಧು ಮೂಲಕ ಅರ್ಜಿಗೆ ಅವಕಾಶ ; ನೋಡಲ್ ಅಧಿಕಾರಿ ನೇಮಿಸಲು ನಿರ್ಧಾರ
Team Udayavani, May 9, 2020, 5:50 AM IST
ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಮುದಾಯಗಳಿಗೆ ರಾಜ್ಯ ಸರಕಾರ ಘೋಷಿಸಿರುವ 1,610 ಕೋ.ರೂ. ಪ್ಯಾಕೇಜನ್ನು ವಿತರಿಸಲು ಶೀಘ್ರ ಮಾರ್ಗಸೂಚಿ ರೂಪಿಸಲು ನಿರ್ಧರಿಸಿದೆ.
ಸರಕಾರ ಎಲ್ಲರಿಗೂ ಏಕರೂಪದ ಮಾರ್ಗಸೂಚಿ ರಚಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ನೀಡಲು ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮೇಲುಸ್ತುವಾರಿಗೆ ನೋಡಲ್ ಅಧಿಕಾರಿ ನೇಮಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಸರಕಾರ ಪರಿಹಾರ ಘೋಷಿಸಿರುವ ಸಮುದಾಯಗಳು ಹಿಂದುಳಿದ ವರ್ಗದ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಹಾಗೂ ತೋಟಗಾರಿಕೆ, ಸಾರಿಗೆ, ಸಣ್ಣ ಕೈಗಾರಿಕೆ, ಜವುಳಿ ಹಾಗೂ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡುತ್ತವೆ.
ಸೇವಾ ಸಿಂಧು ಆ್ಯಪ್ನಲ್ಲಿ ಅರ್ಜಿ
– ಪರಿಹಾರ ಪಡೆಯುವ ಫಲಾನುಭವಿಗಳು ಸರಕಾರದ ಸೇವಾ ಸಿಂಧು ಆ್ಯಪ್ನಲ್ಲಿ ಸರಕಾರ ಸೂಚಿಸುವ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಭರ್ತಿ ಮಾಡಬೇಕು.
– ಫಲಾನುಭವಿ ಹೆಸರು, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ನಂಬರನ್ನು ಕಡ್ಡಾಯವಾಗಿ ನೀಡಬೇಕು.
– ಜತೆಗೆ ಕಟ್ಟಡ ಕಾರ್ಮಿಕರು ತಮ್ಮ ಕಾರ್ಮಿಕ ನೋಂದಣಿ ಕಾರ್ಡ್ ನಂಬರ್ ನೀಡಬೇಕು.
– ನೇಕಾರರು ತಮ್ಮ ಹೆಸರಿನಲ್ಲಿ ಕೈಮಗ್ಗ ಇರುವ ದಾಖಲೆ ಸಲ್ಲಿಸಬೇಕು.
– ಆಟೋ ಹಾಗೂ ಟ್ಯಾಕ್ಸಿ ಚಾಲಕರು, ತಮ್ಮ ವಾಹನ ನಂಬರ್, ಡ್ರೈವಿಂಗ್ ಲೈಸನ್ಸ್, ಕಾರ್ಡ್ ಬ್ಯಾಡ್ಜ್ ನಂಬರ್, ಮಾರ್ಚ್ ಒಂದರವರೆಗೆ ಚಾಲನೆಯಲ್ಲಿರುವ ಚಾಲನಾ ಪ್ರಮಾಣ ಪತ್ರವನ್ನು ಸೇವಾ ಸಿಂಧು ಆ್ಯಪ್ ಮೂಲಕ ಭರ್ತಿ ಮಾಡಬೇಕು.
– ಹೂವು ಬೆಳೆಗಾರರು ತಮ್ಮ ಹೊಲದ ಪಹಣಿ ಪತ್ರ, ಒಂದು ಹೆಕ್ಟೇರ್ ಬೆಳೆಗೆ ಮಾತ್ರ ಪರಿಹಾರ ನೀಡಲು ಸರಕಾರ ನಿರ್ಧಾರ.
– ಹೂವು ಬೆಳೆಗಾರರ ಬಗ್ಗೆ ಗ್ರಾಮ ಪಂಚಾಯತ್ ಮೂಲಕ ಮಾಹಿತಿ ಸಂಗ್ರಹಿಸಲು ಸರಕಾರ ನಿರ್ಧರಿಸಿದೆ.
– ಕ್ಷೌರಿಕರು ಹಾಗೂ ಮಡಿವಾಳ ಸಮುದಾಯದವರಿಗೆ ದೇವರಾಜ ಅರಸು ನಿಗಮದಿಂದ ಪರಿಹಾರ ನೀಡಲು ಚಿಂತನೆ.
– ಚರ್ಮ ಕುಶಲಕರ್ಮಿಗಳಿಗೆ ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮದಿಂದ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ