ಪಿಪಿಎ ಕಿಟ್ ಧರಿಸಿ ಅಂತ್ಯ ಸಂಸ್ಕಾರಕ್ಕೆ ನೆರವಾದ ರಬಕವಿ-ಬನಹಟ್ಟಿ ಕರವೇ ಕಾರ್ಯಕರ್ತರು
ಅಂತ್ಯಸಂಸ್ಕಾರ ಮಾಡಲು ನಗರಸಭೆ ಪೌರಕಾರ್ಮಿಕರ ಹಿಂದೇಟು
Team Udayavani, May 15, 2021, 8:51 PM IST
ಬನಹಟ್ಟಿ : ಕೋವಿಡ್ನಂತ ಸಂದಿಗ್ಧ ಪರಸ್ಥಿತಿಯಲ್ಲಿ ಕೋವಿಡ್ ಪಾಜಿಟಿವ್ ಆಗಿ ತೀರಿ ಕೊಂಡಿದ್ದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಗರಸಭೆ ಸಿಬ್ಬಂದಿ ಮಾಡಲು ಒಪ್ಪದೇ ಇದ್ದ ಕಾರಣ ಕೋವಿಡ್ ನಿಯಮಾನುಸಾರ ರಬಕವಿ-ಬನಹಟ್ಟಿ ತಾಲ್ಲೂಕಿನ ಕರವೇ ಕಾರ್ಯಕರ್ತರು ಪಿಪಿಎ ಕಿಟ್ ಧರಿಸಿ ನೆರವೆರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಅಣ್ಣಪ್ಪ ಅಂಬಿ (68) ಒಂದು ವಾರಗಳ ಕಾಲ ಕೋವಿಡ್ನಿಂದಾಗಿ ಜಮಖಂಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ.11 ರಂದು ಸಂಜೆ 6 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ಮಾಡಲು ಜಮಖಂಡಿ ನಗರಸಭೆ ಸಿಬ್ಬಂದಿ ರಾತ್ರಿ ವೇಳೆ ಬರಲು ನಿರಾಕರಿಸಿದರು.
ಆ ಹಿನ್ನಲೆಯಲ್ಲಿ ರಾತ್ರಿ ವೇಳೆಯಾದರೂ ವಿಷಯ ತಿಳಿದ ರಬಕವಿ-ಬನಹಟ್ಟಿ ತಾಲೂಕು ಕರವೇ ಅಧ್ಯಕ್ಷರು ಮತ್ತು 15 ಸದಸ್ಯರು ಹೋಗಿ ಸಂಭಂದಪಟ್ಟ ಅಧಿಕಾರಿಗಳ ಜೊತೆ ಮಾತಾಡಿ ಶವ ಸಾಗಿಸುವ ಗಾಡಿ ಕರೆಯಿಸಿದರು. ಪೌರ ಕಾರ್ಮಿಕರು ಪಿಪಿಎ ಕಿಟ್ ಧರಿಸಿ ಶವ ಸಂಸ್ಕಾರ ಮಾಡಲು ನಿರಾಕರಿಸಿದರು. ನಂತರ ಅವರ ಕುಟುಂಬದ ದುಃಖವನ್ನು ನೋಡಲಾಗದೆ ಕರವೇ ಅಧ್ಯಕ್ಷರಾದ ಮಾಳು ದುರ್ಗನ್ನವರ ಮತ್ತು ಪದಾಧಿಕಾರಿಗಳಾದ ಮೈಬೂಬ ನದಾಫ, ಲಿಂಗರಾಜ ಮಠಪತಿ, ಮಂಜುನಾಥ ರಾವಳ ಮತ್ತು ಪ್ರೇಮ್ ಚಿತ್ತರಗಿ ಪಿಪಿಎ ಕಿಟ್ ಧರಿಸಿ ರಾತ್ರಿ ವೇಳೆ ಕಟ್ಟಿಗೆ ವ್ಯವಸ್ಥೆ ಮಾಡಿ ನಗರಸಭೆಯ ಒರ್ವ ಮೇಲ್ವಿಚಾರಕರ ಸಹಾಯದೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ಇದನ್ನೂ ಓದಿ :ಪಡಿತರ ವಿತರಣೆಯಲ್ಲಿ ಅಕ್ರಮ: ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಭರತ್ ಶೆಟ್ಟಿ
ಕರವೇ ಕಾರ್ಯಕರ್ತರ ಈ ಮಾನವಿಯತೆಯ ಕಾರ್ಯವನ್ನು ರಬಕವಿ ಬನಹಟ್ಟಿ ತಾಲ್ಲೂಕಿನ ಜನರು ಶ್ಯ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ