ರಾಹುಲ್‌ ದ್ರಾವಿಡ್‌-ಸೌರವ್‌ ಗಂಗೂಲಿ ಟೆಸ್ಟ್‌ ಪದಾರ್ಪಣೆಯ ಬೆಳ್ಳಿಹಬ್ಬ


Team Udayavani, Jun 20, 2021, 7:00 AM IST

ರಾಹುಲ್‌ ದ್ರಾವಿಡ್‌-ಸೌರವ್‌ ಗಂಗೂಲಿ ಟೆಸ್ಟ್‌ ಪದಾರ್ಪಣೆಯ ಬೆಳ್ಳಿಹಬ್ಬ

ಅದು ಐತಿಹಾಸಿಕ ಲಾರ್ಡ್ಸ್‌. 1996ರಲ್ಲಿ ಮೊಹಮ್ಮದ್‌ ಅಜರುದ್ದೀನ್‌ ಸಾರಥ್ಯದ ಭಾರತ 0-1 ಹಿನ್ನಡೆ ಬಳಿಕ ಇಂಗ್ಲೆಂಡ್‌ ವಿರುದ್ಧ ಇಲ್ಲಿ ಸರಣಿಯ ದ್ವಿತೀಯ ಟೆಸ್ಟ್‌ ಆಡಲಿಳಿದಿತ್ತು. ಪ್ರವಾಸಿ ಭಾರತ ಇಬ್ಬರು ನೂತನ ಬ್ಯಾಟ್ಸ್‌ ಮನ್‌ಗಳಿಗೆ ಬಾಗಿಲು ತೆರೆದಿತ್ತು. ಅದ್ಯಾವ ಗಳಿಗೆಯಲ್ಲಿ ಇವರು ಟೆಸ್ಟ್‌ ಪದಾರ್ಪಣೆ ಮಾಡಿದರೋ, ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿ ನೂತನ ಶಕ್ತಿಯೊಂದು ಪ್ರವಹಿಸಿತು. ಮುಂದಿನ ಒಂದೂವರೆ ದಶಕದ ಕಾಲ ಇದು ಜಾಗತಿಕ ಕ್ರಿಕೆಟ್‌ನಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತು. ಎದುರಾಳಿ ಬೌಲರ್‌ಗಳು ಬಳಲಿ ಬೆಂಡಾಗುತ್ತ ಹೋದರು.

ಭಾರತದ ಬ್ಯಾಟಿಂಗ್‌ ಸರದಿಗೆ ಚೈತನ್ಯ ತುಂಬಿದ ಈ ಬ್ಯಾಟ್ಸ್‌ಮನ್‌ಗಳು ಬೇರ್ಯಾರೂ ಅಲ್ಲ, ರಾಹುಲ್‌ ದ್ರಾವಿಡ್‌ ಮತ್ತು ಸೌರವ್‌ ಗಂಗೂಲಿ. ಇವರಿಬ್ಬರು ಟೆಸ್ಟ್‌ ಪ್ರವೇಶಗೈದು ರವಿವಾರಕ್ಕೆ ಭರ್ತಿ 25 ವರ್ಷ. ಬೆಳ್ಳಿ ಹಬ್ಬದ ಸಂಭ್ರಮ!

ಸವಾಲು ಮೆಟ್ಟಿ ನಿಂತ ಜೋಡಿ
1996ರ ಜೂನ್‌ 20ರಂದು ಆರಂಭಗೊಂಡ ಈ ಟೆಸ್ಟ್‌ ಪಂದ್ಯ ಭಾರತಕ್ಕೆ ಭಾರೀ ಸವಾಲಿನದ್ದಾಗಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ಎದುರಾದ 8 ವಿಕೆಟ್‌ ಸೋಲಿನಿಂದ ಅಜರ್‌ ಪಡೆ ಹೊರಬರಬೇಕಿತ್ತು. ಇಂಥ ಪರಿಸ್ಥಿತಿಯಲ್ಲಿ ಚೊಚ್ಚಲ ಟೆಸ್ಟ್‌ ಆಡಲಿಳಿದಿದ್ದ ಈ ಯುವ ಬ್ಯಾಟ್ಸ್‌ಮನ್‌ಗಳಿಬ್ಬರೂ ಈ ಜವಾಬ್ದಾರಿಯನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದರು.

ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ಎಡಗೈ ಆಟಗಾರ ಗಂಗೂಲಿ 435 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡು 131 ರನ್‌ ಪೇರಿಸಿ ಲಾರ್ಡ್ಸ್‌ ಹೀರೋ ಎನಿಸಿದರು. ಭವಿಷ್ಯದಲ್ಲಿ “ಗೋಡೆ’ ಎನಿಸಿಕೊಂಡು ತಂಡದ ಬೆನ್ನೆಲುಬಾಗಿ ನಿಂತ ದ್ರಾವಿಡ್‌ ಅಂದು ಕ್ರೀಸ್‌ ಇಳಿದದ್ದು 7ನೇ ಕ್ರಮಾಂಕದಲ್ಲಿ! ಅವರೇ ಕೊನೆಯ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ ಆಗಿದ್ದರು. ಆದರೆ ಅಂದೇ ಕ್ರೀಸಿಗೆ ಅಂಟಿಕೊಂಡು ನಿಲ್ಲುವ ಸಾಮರ್ಥ್ಯವನ್ನು ಸಾಬೀತುಪಡಿಸಿದ ದ್ರಾವಿಡ್‌ 267 ಎಸೆತಗಳಿಂದ ಬಹುಮೂಲ್ಯ 95 ರನ್‌ ಕೊಡುಗೆ ಸಲ್ಲಿಸಿದರು. ಐದೇ ರನ್ನಿನಿಂದ ಶತಕ ತಪ್ಪಿತ್ತು.

ಅಂದಹಾಗೆ ಇವರಿಬ್ಬರಿಗಾಗಿ ತಂಡದಿಂದ ಹೊರಬಿದ್ದ ಆಟಗಾರರನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಅದು ಅಜಯ್‌ ಜಡೇಜ ಮತ್ತು ಸಂಜಯ್‌ ಮಾಂಜ್ರೆಕರ್‌!

ಮುಂದಿನದು ಇತಿಹಾಸ.

ನಂಟು ಮುಂದುವರಿದಿದೆ…
ಈಗಲೂ ದ್ರಾವಿಡ್‌, ಗಂಗೂಲಿ ಆಟ ಟೀಮ್‌ ಇಂಡಿಯಾ ಆಟಗಾರರಿಗೊಂದು ಸ್ಫೂರ್ತಿ. ಈಗಲೂ ಇವರು ಕ್ರಿಕೆಟ್‌ ನಂಟು ಹೊಂದಿರುವುದು ಭಾರತದ ಕ್ರಿಕೆಟಿಗೊಂದು ಶಕ್ತಿ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾದರೆ, ದ್ರಾವಿಡ್‌ ಕಿರಿಯರಿಗೆ ಕೋಚಿಂಗ್‌ ನೀಡುತ್ತ ಈಗ ಟೀಮ್‌ ಇಂಡಿಯಾ ಕೋಚ್‌ ಆಗಿ ಭಡ್ತಿ ಪಡೆದಿದ್ದಾರೆ. ಇವರಿಬ್ಬರ ಬ್ಯಾಟಿಂಗ್‌ ಮಹಾಯಾನವನ್ನು ಮೆಲುಕು ಹಾಕುವುದೇ ಒಂದು ರೋಮಾಂಚನ, ಖುಷಿಯ ಸಿಂಚನ!

ಟಾಪ್ ನ್ಯೂಸ್

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.