ರಾಮ ಚಾರಿತ್ರ್ಯದ, ರಾವಣ ಚಾರಿತ್ರ್ಯಹೀನತೆ ಸಂಕೇತ : ಕೇಂದ್ರ ಸಚಿವ ಪ್ರತಾಪಚಂದ್ರ ಸಾರಂಗಿ
Team Udayavani, Apr 25, 2021, 7:05 AM IST
ಉಡುಪಿ: ಪ್ರಭು ರಾಮಚಂದ್ರ ಅವತಾರ ಪುರುಷನಷ್ಟೇ ಅಲ್ಲದೆ ರಾಷ್ಟ್ರಪುರುಷನೂ ಆಗಿದ್ದು ದೇಶದ ಔನ್ನತ್ಯದ ಸಂಕೇತವಾಗಿ ಆತನ ಜನ್ಮಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರತಾಪಚಂದ್ರ ಸಾರಂಗಿ ಅವರು ಹೇಳಿದರು.
ಶ್ರೀಕೃಷ್ಣ ಮಠದ ರಾಮನವಮಿ ಉತ್ಸವದ ಅಂಗವಾಗಿ ಶನಿವಾರ ವರ್ಚುವಲ್ ಮಾಧ್ಯಮದಲ್ಲಿ ಅವರು ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಿದರು.
ರಾಮಾಯಣ ಕಾಲಘಟ್ಟದಲ್ಲಿ ಜನರಲ್ಲಿ ರಾವಣ, ಮಾರೀಚ, ಸುಬಾಹುವೇ ಮೊದಲಾದವರಿಂದ ನಿರ್ಮಾಣಗೊಂಡ ಅಸುರಕ್ಷಿತ ವಾತಾವರಣವನ್ನು ರಾಮ ನಿವಾರಿಸಿದ್ದ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಆ ಕಾಲದಲ್ಲಿ ರಾವಣನ ಬೆಂಬಲಿಗರಿಂದ ಗುರುಕುಲಗಳು, ಋಷಿಮುನಿಗಳು ಮಾತ್ರವಲ್ಲದೆ ಜನಜೀವನವೂ ಅಸ್ತವ್ಯಸ್ತಗೊಂಡಿತ್ತು. ಆಗ ರಾಮನ ಮೂಲಕ ವಿಧ್ವಂಸಕರ ನಿರ್ಮೂಲನವಾದರೆ ಸಹಸ್ರಾರ್ಜುನರಂಥವರು ಇನ್ನೊಂದು ಅವತಾರವಾದ ಪರಶುರಾಮರಿಂದ ನಿರ್ಮೂಲನವಾದರು ಎಂದರು.
ರಾವಣ ಚಾರಿತ್ರ್ಯಹೀನತೆ ಸಂಕೇತ
ರಾವಣನ ಸೇನೆಯನ್ನು ಸೋಲಿಸಿದವರು ಸಾಮಾನ್ಯ ವನವಾಸಿಗಳು. ಈಗಿನ ಕಾಲಕ್ಕೆ ಹೋಲಿಸುವುದಾದರೆ ಆಗಿನದು ಆತಂಕವಾದಿಗಳು ಸೃಷ್ಟಿಸುವ ಅರಾಜಕತೆಯಾಗಿದೆ. ಇದು ಅಗತ್ಯವಾಗಿ ಸಮಾಪನವಾಗಬೇಕಿತ್ತು. ಹೀಗಾಗಿಯೇ ರಾಮ ರಾಷ್ಟ್ರ ಜೀವನದ ಮೌಲ್ಯದ ಸಂಕೇತ. ಪರಸ್ತ್ರೀಯನ್ನು ಅಪಹರಿಸಿದ ರಾವಣ ಚಾರಿತ್ರ್ಯಹೀನತೆಯ ಸಂಕೇತ ಎಂದು ಸಾರಂಗಿ ಹೇಳಿದರು.
ಗಾಂಧೀಜಿಯವರ ಸರ್ವೋದಯ, ದೀನದಯಾಳರ ಅಂತ್ಯೋದಯ ಕಲ್ಪನೆಯಂತೆ ಪ್ರಧಾನಿಯವರು ಭಾರತವನ್ನು ಬಲಿಷ್ಠಗೊಳಿಸುತ್ತಿದ್ದಾರೆ. ಈಗ ನಾವು ಭಾರತವನ್ನು ಜಾಗತಿಕವಾಗಿ ಮುಂಚೂಣಿ ನಿಲ್ಲಿಸಬೇಕಾಗಿದೆ. ರಾಷ್ಟ್ರೀಯ ಸಾಂಸ್ಕೃತಿಕ ಪುನರುತ್ಥಾನಕ್ಕೆ ಉತ್ತಮ ದೃಷ್ಟಾಂತ ರಾಮಚಂದ್ರ ಎಂದು ಸಾರಂಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ