ಶನಿ ದೋಷದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು…ಶುಭ, ಅಶುಭ ಫಲಗಳಿಗೆ ಕಾರಣವೇನು?

ಅಶುಭ ಫಲಗಳು ಶನಿ ಅಷ್ಠಕ ವರ್ಗದಲ್ಲಿರುವ ಅಂಶಗಳ ಮೇಲೆ ಅವಲಂಬಿಸಿರುತ್ತದೆ.

Team Udayavani, Aug 20, 2021, 10:21 AM IST

ಶನಿ ದೋಷದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು…ಶುಭ, ಅಶುಭ ಫಲಗಳಿಗೆ ಕಾರಣವೇನು?

ಸಾಮಾನ್ಯವಾಗಿ  ಶನಿಗ್ರಹದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು. ಗೋಚಾರದಲ್ಲಿ ಬರುವ ಏಳೂವರೆ ಶನಿ, ಅಷ್ಠಮ ಶನಿ, ಪಂಚಮ ಶನಿ ಹಾಗೂ ಶನಿ ದಶಾ, ಭುಕ್ತಿ ಕಾಲದಲ್ಲಿ ಅಶುಭ ಫಲಗಳೇ ಸಂಭವಿಸುತ್ತದೆ ಎಂದು ಎಲ್ಲರ ನಂಬಿಕೆ.

ಕರ್ಮಕಾರಕನಾದ ಶನಿ, ನ್ಯಾಯ, ನೀತಿ ಅಧಿಪತಿಯಾದ ಶನಿ, ತಮ್ಮ ಪ್ರಾರಬ್ಧ ಕರ್ಮಕ್ಕೆ ಅನುಗುಣವಾಗಿ ಈ ಜನ್ಮದಲ್ಲಿ ಫಲಗಳನ್ನು ಕೊಡುತ್ತಾನೆ. ಹಿಂದಿನ ಜನ್ಮದ ಕರ್ಮದ ಫಲದ ಪ್ರಕಾರ ಶನಿಯು, ಉಚ್ಛ ರಾಶಿ, ಮೂಲ ತ್ರಿಕೋನ, ನ್ವ ಕ್ಷೇತ್ರ, ಮಿತ್ರ ಕ್ಷೇತ್ರ, ನೀಚ ರಾಶಿ ಹಾಗೂ ಶತ್ರು ಕ್ಷೇತ್ರಗಳಲ್ಲಿ ಸ್ಥಾನವನ್ನು ಪಡೆಯುತ್ತಾನೆ. ಇದಕ್ಕೆ ಅನುಸಾರವಾಗಿ ಶನಿ ದಶಾ, ಶನಿ ಭುಕ್ತಿ ಕಾಲದಲ್ಲಿ ಶುಭ, ಅಶುಭ ಫಲಗಳನ್ನು ಜಾತಕದ ವ್ಯಕ್ತಿ ಅನುಭವಿಸಬೇಕಾಗುತ್ತದೆ.

ಉದಾಹರಣೆಗೆ:

ವೃಷಭ ಲಗ್ನಕ್ಕೆ ಶನಿಯು ಯೋಗಕಾರಕ ಗ್ರಹ, ಶನಿಯು ಮಕರ, ಕುಂಭ ರಾಶಿಯ ಅಧಿಪತಿಯಾಗಿದ್ದು, 9 ಮತ್ತು 10ನೇ ಮನೆಯ ಅಧಿಪತಿಯಾಗಿದ್ದಾನೆ. 9ನೇ ಧರ್ಮ ಸ್ಥಾನ, ತ್ರಿಕೋನ ಸ್ಥಾನ, 10ನೇ ಕರ್ಮ ಸ್ಥಾನ, ಕೇಂದ್ರ ಸ್ಥಾನ. ಕೇಂದ್ರ ಮತ್ತು ತ್ರಿಕೋನದ ಅಧಿಪತಿಯಾದ ಶನಿಯು ವೃಷಭ ಲಗ್ನಕ್ಕೆ ಯೋಗಕಾರಕ ಗ್ರಹನಾಗಿರುತ್ತಾನೆ. ಅದೇ ರೀತಿ ತುಲಾ ಲಗ್ನಕ್ಕೆ, 4ನೇ ಮತ್ತು 5ನೇ ಮನೆಯ ಅಧಿಪತಿಯಾಗಿ(4ನೇ ಕೇಂದ್ರ ಸ್ಥಾನ, 5 ತ್ರಿಕೋನ ಸ್ಥಾನ) ಯೋಗಕಾರಕ ಗ್ರಹನಾಗಿರುತ್ತಾನೆ.

ಒಂದು ವೇಳೆ ಶನಿಯು ಕೇಂದ್ರದಲ್ಲಿ ಉಪಸ್ಥಿತನಾಗಿದ್ದರೆ ಶಶ ಮಹಾ ಯೋಗವು ಲಭಿಸುತ್ತದೆ. ಅದೇ ರೀತಿ ಶನಿಯು ಮಿತ್ರಕ್ಷೇತ್ರ, ಕೇಂದ್ರ, ತ್ರಿಕೋನ ಸ್ಥಿತನಾಗಿದ್ದರೆ (6,8, 12 ಸ್ಥಾನಗಳನ್ನು ಬಿಟ್ಟು) ಶನಿಯ ದಶಾ ಭುಕ್ತಿ ಕಾಲದಲ್ಲಿ ಸಂಪೂರ್ಣ ಶುಭ ಫಲಗಳು ದೊರೆಯುತ್ತದೆ. ಅದೇ ರೀತಿ ಗೋಚಾರದಲ್ಲಿ ಬರುವ ಏಳೂವರೆ, ಅಷ್ಠಮ, ಪಂಚಮ ಶನಿಯ ಶುಭ ಮತ್ತು ಅಶುಭ ಫಲಗಳು ಶನಿ ಅಷ್ಠಕ ವರ್ಗದಲ್ಲಿರುವ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಶನಿ ಅಷ್ಠಕ ವರ್ಗದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ಶುಭ ಅಂಶಗಳಿದ್ದರೆ, ಚಂದ್ರನಿಂದ 8ನೇ ಮನೆ, 1ನೇ, 1ನೇ, 2ನೇ ಮನೆಗಳಲ್ಲಿ ಶನಿಯ ಚಲನೆಯ ಕಾಲದಲ್ಲಿ ಯಾವುದೇ ಅಶುಭ ಫಲಗಳು ಗೋಚರಿಸುವುದಿಲ್ಲ. ಒಂದು ವೇಳೆ ಅಷ್ಠಕ ವರ್ಗದಲ್ಲಿ 4ಕ್ಕಿಂತ ಕಡಿಮೆ ಶುಭ ಅಂಶಗಳನ್ನು ಹೊಂದಿದ್ದರೆ, ಶನಿಯ ಚಲನೆಯ ಕಾಲದಲ್ಲಿ ಜಾತಕದ ವ್ಯಕ್ತಿ ಅಶುಭ ಫಲಗಳನ್ನು ಅನುಭವಿಸಬೇಕಾಗುತ್ತದೆ.

ರವೀಂದ್ರ ಐರೋಡಿ, ಸಾಸ್ತಾನ

ಜ್ಯೋತಿಷ್ಯ ವಿಶ್ಲೇಷಕರು

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.