ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಗುತ್ತಿಗೆ ಕಂಪೆನಿಯ ಅವ್ಯವಹಾರದಿಂದ ಪೂರೈಕೆ ಸ್ಥಗಿತ

Team Udayavani, Jan 29, 2022, 6:10 AM IST

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಉಡುಪಿ/ಬೆಳ್ತಂಗಡಿ: ಸರಕಾರ ಮತ್ತು ಗುತ್ತಿಗೆ ಕಂಪೆನಿಯೊಂದರ ನಡುವಣ ಸಮರದಿಂದಾಗಿ ರಾಜ್ಯದಲ್ಲಿ ಹೊಸ ವಾಹನ ಕೊಳ್ಳುವವರು ಸ್ಮಾರ್ಟ್‌ ಕಾರ್ಡ್‌ ಆರ್‌ಸಿ(ವಾಹನ ನೋಂದಣಿ)ಯ ಬದಲಿಗೆ ಹಿಂದಿನಂತೆ ಕಾಗದದಲ್ಲಿ ಪಡೆಯುವ ಸ್ಥಿತಿ ಬಂದಿದೆ.

ಆರ್‌ಟಿಒ ಕಚೇರಿಯ ಸ್ಮಾರ್ಟ್‌ಕಾರ್ಡ್‌ಗಳ ಮುದ್ರಣವನ್ನು ರೋಸ್‌ ಮಾರ್ಟ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಇದರ ದುರ್ಲಾಭ ಪಡೆದ ಕಂಪೆನಿಯ ಮಾಜಿ ಮತ್ತು ಹಾಲಿ ಸಿಬಂದಿ ವೋಟರ್‌ ಐಡಿ, ಪಾನ್‌ಕಾರ್ಡ್‌, ಆರ್‌ಸಿ ಪುಸ್ತಕ ಮತ್ತಿತರ ಪ್ರಮುಖ ದಾಖಲೆಗಳನ್ನು ನಕಲಿಯಾಗಿ ಮುದ್ರಿಸಿ ಅವ್ಯವಹಾರ ನಡೆಸಿದ್ದರು.

ಸದ್ಯ ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ. ಈ ಕಂಪೆನಿಯ ಗುತ್ತಿಗೆ ಅವಧಿ ಇನ್ನೂ ಒಂದು ವರ್ಷ ಇದೆ. ಒಪ್ಪಂದದ ಪ್ರಕಾರ ಸದ್ಯ ಬೇರೆಯವರಿಗೆ ಗುತ್ತಿಗೆ ನೀಡುವಂತಿಲ್ಲ. ಹೀಗಾಗಿ ಈಗ ಸರಕಾರವೇ ಪೇಪರ್‌ ಹಾಳೆಯ ಆರ್‌ಸಿ ನೀಡುತ್ತಿದೆ. ಈ ಬಗ್ಗೆ ಕಂಪೆನಿಯನ್ನು ಸಂಪರ್ಕಿಸಿದರೆ ಪ್ರಕರಣ ಇತ್ಯರ್ಥವಾದ ಬಳಿಕ ಕಾರ್ಡ್‌ ಪೂರೈಕೆ ಮಾಡಲಾಗುವುದು ಎಂದಿದ್ದಾರೆ.

ವಾಹನ ಮಾಲಕರ ಅಸಮಾಧಾನ
ಡಿಜಿಟಲ್‌ ಇಂಡಿಯಾ ಕಲ್ಪನೆಯಂತೆ ಎಲ್ಲವೂ ಪೇಪರ್‌ಲೆಸ್‌ ಮತ್ತು ಸ್ಮಾರ್ಟ್‌ ಆಗಿರುವ ಈ ಕಾಲ ಘಟ್ಟದಲ್ಲಿ ಲಕ್ಷಾಂತರ ರೂ. ವ್ಯಯಿಸಿ ವಾಹನ ಕೊಳ್ಳುವವರು ಹಳೆಯ ದಿನಗಳಂತೆ ಕಾಗದ ಹಾಳೆಯ ಆರ್‌ಸಿ ಸಿಗುತ್ತಿರುವುದರಿಂದ ಅಸಮಾಧಾನಗೊಂಡಿದ್ದಾರೆ. ಉಭಯ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 300 ಆರ್‌ಸಿ ಪ್ರತಿ ವಿತರಣೆಯಾಗುತ್ತಿದೆ.

ಎನ್‌ಐಸಿಯಿಂದ ಆರ್‌ಸಿ ಪೇಪರ್‌
ಸದ್ಯ ಸರಕಾರಿ ಸ್ವಾಮ್ಯದ ಎನ್‌ಐಸಿ (ನ್ಯಾಶನಲ್‌ ಇನ್‌ಫಾರ್ಮೆಟಿಕ್‌ ಸೆಂಟರ್‌) ಸಂಸ್ಥೆಯು ಆರ್‌ಸಿ ಮುದ್ರಣಕ್ಕೆ ಅಗತ್ಯವಾದ ಪೇಪರ್‌ ಪೂರೈಕೆ ಮಾಡುತ್ತಿದೆ. ಈ ಕಾರ್ಡ್‌ನಲ್ಲಿಯೂ ಬಾರ್‌ಕೋಡ್‌ ಇದ್ದು, ಎಲ್ಲ ವಿವರಗಳನ್ನು ನಮೂದಿಸಲಾಗುತ್ತದೆ. ಇದನ್ನು ನಕಲು ಮಾಡಲು ಸಾಧ್ಯವಿಲ್ಲ.

ಕೆಲವು ತಿಂಗಳುಗಳಿಂದ ಸ್ಮಾರ್ಟ್‌ ಕಾರ್ಡ್‌ ಪೂರೈಕೆ ಸ್ಥಗಿತಗೊಂಡಿದೆ. ಖಾಸಗಿ ಕಂಪೆನಿ ಕಾರ್ಡ್‌ ಪೂರೈಕೆ ಸ್ಥಗಿತಗೊಳಿಸಿರುವುದರಿಂದ ಪೇಪರ್‌ ಮೂಲಕವೇ ಆರ್‌ಸಿ ಪಡೆಯುವಂತಾಗಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ್‌ ತಿಳಿಸಿದ್ದಾರೆ.

ಲೈಸನ್ಸ್‌ ಕಾರ್ಡ್‌ ಸ್ಥಗಿತ ಭೀತಿ!
ರೋಸ್‌ ಮಾರ್ಟ್‌ ಕಂಪೆನಿಯವರೇ ಸ್ಮಾರ್ಟ್‌ ಲೈಸನ್ಸ್‌ ಕಾರ್ಡ್‌ಗಳನ್ನೂ ಪೂರೈಕೆ ಮಾಡುತ್ತಿದ್ದಾರೆ. ಈಗಾಗಲೇ ಉತ್ಪಾದನೆಯಾಗಿರುವ ಕಾರ್ಡ್‌ಗಳು ಪೂರೈಕೆಯಾಗುತ್ತಿವೆ. ಈ ನಡುವೆ ಹೈಕೋರ್ಟ್‌ ತೀರ್ಪು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪ್ರಕರಣ ಮತ್ತಷ್ಟು ಮುಂದುವರಿದರೆ ಲೈಸನ್ಸ್‌ ಕೂಡ ಕಾರ್ಡ್‌ಲೆಸ್‌ ಆಗಿ ಕಾಗದ ಹಾಳೆಯ ಸ್ವರೂಪಕ್ಕೆ ಮರಳುವ ಕಳವಳ ಇದೆ.

ಟಾಪ್ ನ್ಯೂಸ್

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.