ಅಣ್ವಸ್ತ್ರ ಬಳಸಲು ಸಿದ್ಧ; ರಷ್ಯಾದ ರಕ್ಷಣ ಕೌನ್ಸಿಲ್‌ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌


Team Udayavani, Mar 27, 2022, 8:20 AM IST

ಅಣ್ವಸ್ತ್ರ ಬಳಸಲು ಸಿದ್ಧ; ರಷ್ಯಾದ ರಕ್ಷಣ ಕೌನ್ಸಿಲ್‌ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌

ಕೀವ್‌: ಉಕ್ರೇನ್‌ ಮೇಲೆ ಪರಮಾಣು ಶಸ್ತ್ರಗಳನ್ನು ಪ್ರಯೋ ಗಿಸಲು ತಾನು ಸಿದ್ಧವಿರುವುದಾಗಿ ರಷ್ಯಾ ಮತ್ತೊಮ್ಮೆ ಘೋಷಿಸಿದೆ. ರಷ್ಯಾದ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಕ್ಷಣ ಕೌನ್ಸಿಲ್‌ನ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಅವರು, ಈ ವಿಚಾರ ತಿಳಿಸಿದ್ದಾರೆ.

ಮಾಸ್ಕೋದಲ್ಲಿ ಸುದ್ದಿಗಾರ­ರೊಂದಿಗೆ ಮಾತನಾ­ಡಿದ ಅವರು, ಉಕ್ರೇನ್‌ ಮೇಲೆ ನಾವು ಈವರೆಗೆ ಸಾಂಪ್ರದಾ­ಯಿಕ ಹಾಗೂ ಕೆಲವಾರು ಪ್ರಬಲ ಶಸ್ತ್ರಾಸ್ತ್ರಗಳನ್ನು ಬಳಸಿ­ದ್ದೇವೆ. ಹಾಗೊಂದು ವೇಳೆ ಪರಮಾಣು ಅಸ್ತ್ರಗಳನ್ನು ಬಳಸುವುದು ಅನಿವಾ ರ್ಯವಾದರೆ ನಾವು ಯಾವುದೇ ಮುಲಾಜಿಲ್ಲದೆ ಅವುಗಳನ್ನು ಬಳಸುತ್ತೇವೆ ಎಂದಿದ್ದಾರ­ಲ್ಲದೆ, ಪರಮಾಣು ಅಸ್ತ್ರಗಳನ್ನು ಬಳಸುವುದು ನಮ್ಮ ಮುಂದಿನ ಆದ್ಯತೆಯಾಗಲಿದೆ ಎಂದು ಹೇಳಿದ್ದಾರೆ.

ವೊಲೊಡಿಮಿರ್‌ ಟೀಕೆ: ತನ್ನಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಪದೇ ಪದೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಷ್ಯಾವು, ವಿನಾಶಕಾರಿ ಶಸ್ತ್ರಾಸ್ತ್ರಗಳ ಬಳಕೆಗೆ ಪ್ರಚೋದನೆಯನ್ನು ನೀಡುತ್ತಿದೆ ಎಂದು ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ.

ರಷ್ಯಾ ಕರೆಗಳ ಕದ್ದಾಲಿಕೆ?
ರಣಾಂಗಣದಲ್ಲಿ ರಷ್ಯಾದ ಸೈನಿಕರು ಹಾಗೂ ಸೇನಾಧಿಕಾರಿಗಳು, ಸರಕಾರ ಮತ್ತು ಸೇನಾಧಿಕಾರಿಗಳ ನಡುವೆ ನಡೆಯುವ ಸಂಭಾಷಣೆಗಳನ್ನು ಉಕ್ರೇನ್‌ನ ಸೇನೆಯಲ್ಲಿರುವ ತಜ್ಞರು ಕದ್ದಾಲಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ರಷ್ಯಾದ ಸೈನಿಕರು, ಸೇನಾಧಿಕಾರಿಗಳು ಮೊಬೈಲ್‌ ಫೋನ್‌ಗಳು, ಅನ ಲಾಗ್‌ ರೇಡಿಯೋಗಳನ್ನು ಬಳಸುತ್ತಿದ್ದಾರೆ. ಆದರೆ ಅವುಗಳ ತರಂಗಗಳನ್ನು ಉಕ್ರೇನ್‌ನ ತಜ್ಞರು ಸುಲಭವಾಗಿ ಟ್ರಾಪ್‌ ಮಾಡುತ್ತಿದ್ದಾರೆಂದು ಹೇಳಲಾಗಿದೆ.

ಹಿರಿಯ ಸೇನಾಧಿಕಾರಿ ಸಾವು
ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾದ ಮತ್ತೂಬ್ಬ ಹಿರಿಯ ಸೇನಾಧಿಕಾರಿ ಹುತಾತ್ಮರಾಗಿ­ದ್ದಾರೆ ಎಂದು ರಷ್ಯಾದ ರಕ್ಷಣ ಇಲಾಖೆ ತಿಳಿಸಿದೆ. ಖಾರ್ಸನ್‌ನಲ್ಲಿ ಯುದ್ಧ ನಿರತರಾಗಿದ್ದಾಗ ಉಕ್ರೇನ್‌ ನಡೆಸಿದ ದಾಳಿಗೆ ಲೆ|ಜ| ಯಾಕೋವ್‌  ಸಾವನ್ನಪ್ಪಿದ್ದಾರೆ. ಅವರು ರಷ್ಯಾ ಭೂಸೇನೆಯ 49ನೇ ಕಂಬೈನ್‌ ಆರ್ಮಿಯ ಕಮಾಂಡರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಭಾರತ- ಉಕ್ರೇನ್‌ ಮತ್ತೊಂದು ಪ್ರೇಮ್‌ ಕಹಾನಿ
ಉಕ್ರೇನ್‌ನಲ್ಲಿ ಪರಸ್ಪರ ಪ್ರೀತಿಸಿದ್ದ ಭಾರತ ಮೂಲದ ಪ್ರತೀಕ್‌ ಹಾಗೂ ಉಕ್ರೇನ್‌ನ ಪ್ರಜೆ ಲಿಬೊವ್‌ ಜೋಡಿ, ಇನ್ನೇನು ಯುದ್ಧ ಆರಂಭವಾಗುವು­ದಕ್ಕಿಂತ ಮುಂಚೆ ಅಲ್ಲಿಂದ ಭಾರತಕ್ಕೆ ಬಂದು ಮಾ. 1ರಂದು ಹೈದರಾಬಾದ್‌ ನಲ್ಲಿ ವಿವಾಹವಾಗಿದ್ದರು. ಅಂಥದ್ದೇ ಲವ್‌ಸ್ಟೋರಿಯೊಂದು ದಕ್ಷಿಣ ದಿಲ್ಲಿಯಲ್ಲಿ ಅನಾವರಣಗೊಂಡಿದೆ.

ಉಕ್ರೇನ್‌ನ ಆ್ಯನಾ ಹರೋಡೆಟ್ಸ್‌ಕಾ (30), ದಿಲ್ಲಿ ಹೈಕೋರ್ಟ್‌ನ ವಕೀಲ ಅನುಭವ್‌ ಭಾಸಿನ್‌ (33) ಸದ್ಯದಲ್ಲೇ ವಿವಾಹವಾಗಲಿರುವ ಜೋಡಿ. 2019ರಲ್ಲಿ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿನ ಖಾಸಗಿ ಕಂಪೆನಿಯೊಂದ­ರಲ್ಲಿ ಸೇವೆ ಸಲ್ಲಿಸುವಾಗ ಇಬ್ಬರೂ ಭೇಟಿಯಾಗಿ ಪ್ರೇಮಿಗಳಾಗಿದ್ದರು. ಅನಂತರ ಅನುಭವ್‌ ಅವರು ದಿಲ್ಲಿಗೆ ಹಿಂದಿರುಗಿದರು. ಆದರೆ ಪ್ರೀತಿ ಹಾಗೆಯೇ ಮುಂದುವರಿದಿತ್ತು. ಉಕ್ರೇನ್‌ ಯುದ್ಧ ಶುರುವಾಗಿ ಒಂದೆರಡು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ ಆ್ಯನಾ, ಈಗ ಅನುಭವ್‌ರನ್ನು ವರಿಸಲು ಸಿದ್ಧವಾಗಿದ್ದಾರೆ.

ಸಮರಾಂಗಣದಲ್ಲಿ
-ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲು ಹವಣಿಸುತ್ತಿದೆ: ಉಕ್ರೇನ್‌ ಅಧ್ಯಕ್ಷರ ಆರೋಪ.
-ಯುದ್ಧದ ಮೊದಲ ಹಂತ ಹೆಚ್ಚಾ ಕಡಿಮೆ ಮುಗಿದಂತೆ ಎಂದು ಹೇಳಿಕೊಂಡ ರಷ್ಯಾ.
-ಪುತಿನ್‌ ಸೇನೆಯಿಂದ ಚರ್ನೋಬಿಲ್‌ ಅಣುಸ್ಥಾವರ ಸಮೀಪದ ಸ್ವಯುಟೆಕ್‌ ನಗರ ವಶ.
-ರಷ್ಯಾ ರಕ್ಷಣ ಸಚಿವ ಸಗೇì ಶಿಗೋ ಒಳಗಾಗಿದ್ದಾರೆ ಎಂಬ ವರದಿ ಸುಳ್ಳು. ಅವರು ಜೀವಂತವಾಗಿದ್ದಾರೆ: ರಷ್ಯಾ
ಕಾಳಗದಲ್ಲಿ ಇದುವರೆಗೆ 136
-ಮಕ್ಕಳು ಅಸುನೀಗಿದ್ದಾರೆ ಎಂದು ಪ್ರಕಟಿಸಿದ ಉಕ್ರೇನ್‌.
-ಖಾರ್ಶೇನ್‌ ನಗರದಲ್ಲಿ ಯುದ್ಧನಿರತ ರಷ್ಯಾದ ಹಿರಿಯ ಸೇನಾಧಿಕಾರಿ ಲೆ|ಜ| ಯಾಕೋವ್‌ ಸಾವು.

ಟಾಪ್ ನ್ಯೂಸ್

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ISREL

Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್‌ ಮೇಲೆ ಹಲವು ರಾಷ್ಟ್ರಗಳ ಒತ್ತಡ

Flash Floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ: 33 ಮಂದಿ ಮೃತ್ಯು, 600 ಮನೆಗಳಿಗೆ ಹಾನಿ

Flash Floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ: 33 ಮಂದಿ ಮೃತ್ಯು, 600 ಮನೆಗಳಿಗೆ ಹಾನಿ

1eewqew

Sydney attack: ತನ್ನ ಪ್ರಾಣವೇ ಹೋಗುತ್ತಿದ್ದರೂ ಪುತ್ರಿ ರಕ್ಷಣೆಗೆ ಮಹಿಳೆ ಕೋರಿಕೆ!

1qeqweqwe

Canada; ಅಮೆರಿಕ ಮಾದರಿಯಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.